ನಿವೃತ್ತ ಎ.ಎಸ್.ಐ ಕೃಷ್ಣ ಶೆಟ್ಟಿ ನಿಧನ

0

ಪುತ್ತೂರು: ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಎ.ಎಸ್.ಐ ಆಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿದ್ದ ಕೃಷ್ಣ ಶೆಟ್ಟಿ(70ವ)ರವರು ಅ.22ರಂದು ನಸುಕಿನ ಜಾವ ಬೆಂಗಳೂರಿನಲ್ಲಿ ನಿಧನರಾದರು.


ಪುತ್ತೂರು ಮರ್ದಾಳ ಮೂಲದವರಾದ ಅವರು ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಎ.ಎಸ್.ಐ ಆಗಿ ನಿವೃತ್ತಿಗೊಂಡಿದ್ದರು. ಬಳಿಕ ಅವರು ಬೆಂಗಳೂರಿನಲ್ಲಿ ನೆಲೆಸಿದ್ದರು. ಅಲ್ಲಿ ಅವರು ನಿಧನರಾಗಿದ್ದಾರೆ.

ಮೃತರು ಪತ್ನಿ ಮಂಜುಳಾ ಶೆಟ್ಟಿ, ಪುತ್ರರಾದ ವಿಜೇಶ್ ಶೆಟ್ಟಿ, ಅರುಣ್ ಶೆಟ್ಟಿ ಮತ್ತು ಪುತ್ರಿ ದೀಪಿಕಾ ಶೆಟ್ಟಿ, ಸೊಸೆ ನಿಶಾ, ಅಳಿಯ ಸಂತೋಷ್ ಶೆಟ್ಟಿ, ಮೊಮ್ಮಗ ಹಾಗು ಸಹೋದರ, ಸಹೋದರಿಯರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here