ಬೊಳ್ವಾರಿನ ಸುಶ್ರುತ ಆಯುರ್ವೇದ ಆಸ್ಪತ್ರೆಯಲ್ಲಿ ವಿದ್ದಾಗ್ನಿಕರ್ಮ ಕಾರ್ಯಗಾರ

0

ಪುತ್ತೂರು: ಸುಶ್ರುತ ಸಂಹಿತೆಯಲ್ಲಿ ಉಲ್ಲೇಖಿಸಿದ ವಿಶಿಷ್ಟ ಚಿಕಿತ್ಸಾ ವಿಧಾನ ವಾದ ವಿದ್ದಾಗ್ನಿಕರ್ಮದ ಕುರಿತ ಒಂದು ದಿನದ ಕಾರ್ಯಾಗಾರ ಆಯುರ್ವೇದ ವೈದ್ಯರಿಗಾಗಿ ಅ.25ರಂದು ಶುಕ್ರವಾರದಂದು ಬೊಳ್ವಾರಿನ ಸುಶ್ರುತ ಆಯುರ್ವೇದ ಆಸ್ಪತ್ರೆಯಲ್ಲಿ ನಡೆಯಲಿದೆ.


ಆಯುಷ್ ಫೆಡರೇಷನ್ ಆಫ್ ಇಂಡಿಯಾ ಪುತ್ತೂರು ಮತ್ತು ಸುಶ್ರುತ ಆಸ್ಪತ್ರೆ ಪ್ರಾಯೋಜಿತ ಈ ಕಾರ್ಯಾಗಾರವನ್ನು ಪುಣೆಯ ಪರಿಣಿತ ವೈದ್ಯ ಡಾ. ಚಂದ್ರಕುಮಾರ್ ದೇಶಮುಖ್ ನಡೆಸಿಕೊಡಲಿದ್ದಾರೆ. ವಿವಿಧ ನೋವುಗಳು, ಸಂಧಿವಾತ , ಸಯಾಟಿಕಾ, ತಲೆನೋವು,ಕಣ್ಣು, ಕಿವಿ,ಗಂಟಲು, ಮೂಗು ಇತ್ಯಾದಿ ಶಿರೋರೋಗಗಳು, ಮೂತ್ರದ ಕಲ್ಲು, ಬೆನ್ನು ನೋವು, ನರಸಂಬಂಧಿ ವ್ಯಾಧಿಗಳಿಗೆ ಕ್ಷಿಪ್ರ ಉಪಶಮನಕಾರಕ ವಿದ್ದಾಗ್ನಿ ಕರ್ಮ ಚಿಕಿತ್ಸೆ ಯ ಕುರಿತು ತರಬೇತಿ ನಡೆಯಲಿದೆ. ಕಾರ್ರ್ಯಾಗಾರ ದಲ್ಲಿ ವೈದ್ಯರು ಭಾಗಬಹಿಸಬಹುದು ಎಂದು ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here