ಪುತ್ತೂರು ಶ್ರೀ ಶಿರಡಿ ಸಾಯಿ ಕೇಂದ್ರ ಹಾಗೂ ಪ್ರಶಾಂತಿ ಸದ್ಭಾವನಾ ಟ್ರಸ್ಟ್‌ ಆಶ್ರಯದಲ್ಲಿ ಪೌರಕಾರ್ಮಿಕರಿಗೆ ಸನ್ಮಾನ-ಗೌರವ

0

ಪುತ್ತೂರು: ಪುತ್ತೂರು ನಗರಸಭೆಯ 8ನೇ ವಾರ್ಡು ಕೇಪುಳು-ಉರಮಾಲು ವಠಾರದ ಪೌರಕಾರ್ಮಿಕರಿಗೆ ಶ್ರೀ ಶಿರಡಿ ಸಾಯಿ ಕೇಂದ್ರ ಪುತ್ತೂರು ಹಾಗೂ ಪ್ರಶಾಂತಿ ಸದ್ಭಾವನಾ ಟ್ರಸ್ಟ್‌ ಜಂಠಿ ಆಶ್ರಯದಲ್ಲಿ ಜರಗಿದ ವಿಶೇಷ ಕಾರ್ಯಕ್ರಮದಲ್ಲಿ ಗುರುತಿಸಿ, ಗೌರವಿಸಿ, ಸನ್ಮಾನಿಸುವ ಸಪ್ತತಿ ತಮ ಕಾರ್ಯಕ್ರಮವನ್ನು ನಡೆಯಿತು.

ಈ ಸಂದರ್ಬದಲ್ಲಿ ಉಡುಪಿ ಶಂಕರಪುರದ ದ್ವಾರಕಾಮಯಿ ಮಠದ ಶ್ರೀ ಸಾಯಿ ಈಶ್ವರ್‌ ಗುರೂಜಿ ಮತ್ತು ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಸ್ವಾಮಿ ಪೌರಕಾರ್ಮಿಕರಿಗೆ ಸನ್ಮಾನಿಸಿದರು.

ಅಜೇರು ನಿವಾಸಿ ರತ್ನಾವತಿ ಪ್ರಭು ಅವರ 70ನೇ ಜನ್ಮದಿನೋತ್ಸವವನ್ನು ಕುಟುಂಬದ ಸಮ್ಮುಖದಲ್ಲಿ ಆಚರಿಸಿ, ಗೌರವಾರ್ಪಣೆ ಮಾಡಲಾಯಿತು.

ಪ್ರಸಾದ್‌ ಕಾಣಾಜೆ ಅವರು 21 ರುದ್ರಾಕ್ಷಿ ಗಿಡಗಳನ್ನು ಉಚಿತವಾಗಿ ನೀಡಿದರು. ಸಾಯಿ ಕೇಂದ್ರದ ಡಾ. ಸಂತೋಷ್‌ ಪ್ರಭು ಮತ್ತು ಪ್ರಶಾಂತಿ, ಸದ್ಭಾವನಾ ಟ್ರಸ್ಟ್‌ ನ ಯಂ ಮಧುಸೂದನ ನಾಯಕ್‌ ಕಾರ್ಯಕ್ರಮವನ್ನು ಆಯೋಜಿಸಿ, ನಿರೂಪಿಸಿದರು.

LEAVE A REPLY

Please enter your comment!
Please enter your name here