ಪುತ್ತೂರು: ಮರೀಲು ಹೊರ ವಲಯದ ದಿ ಪುತ್ತೂರು ಕ್ಲಬ್ ಗೆ ರಾಜ್ಯ ಸರಕಾರದ ಸ್ಪೀಕರ್ ಯು.ಟಿ ಖಾದರ್ ರವರು ಜೂ.14 ರಂದು ಭೇಟಿ ನೀಡಿದರು.
ದಿ ಪುತ್ತೂರು ಕ್ಲಬ್ ನಲ್ಲಿ ಸದಸ್ಯತನ ಸೇರ್ಪಡೆಗೊಳಿಸಲು ಸ್ಪೀಕರ್ ಯು.ಟಿ ಖಾದರ್ ರವರು ಆಗಮಿಸಿದ್ದರು. ಈ ಸಂದರ್ಭದಲ್ಲಿ ಸ್ಪೀಕರ್ ಯು.ಟಿ ಖಾದರ್ ರವರು ಕ್ಲಬ್ ನಲ್ಲಿನ ವ್ಯವಸ್ಥೆಗಳನ್ನು ಪರಿಶೀಲಿಸಿ ಗುಣಗಾನ ಮಾಡಿದರು.

ಸ್ಪೀಕರ್ ಭೇಟಿ ಸಂದರ್ಭ ಶಾಸಕ ಅಶೋಕ್ ಕುಮಾರ್ ರೈ, ಕ್ಲಬ್ ಅಧ್ಯಕ್ಷ ಡಾ.ದೀಪಕ್ ರೈ, ನಿರ್ದೇಶಕರಾದ ಶಿವರಾಮ ಆಳ್ವ, ನಿತಿನ್ ಪಕ್ಕಳ, ಪ್ರಸನ್ನ ಕುಮಾರ್ ಶೆಟ್ಟಿ ಹಾಗೂ ನಝೀರ್ ಮಠ, ಸುರೇಂದ್ರ ರೈ ನೇಸರ, ವಿಜಯಕುಮಾರ್ ಸೊರಕೆ, ರಾಕೇಶ್ ಕುದ್ಕಾಡಿ ಸಹಿತ ಹಲವರು ಉಪಸ್ಥಿತರಿದ್ದರು.