ಉಪ್ಪಿನಂಗಡಿ: ಶ್ರೀ ಕಾಳಿಕಾಂಬ ಯಕ್ಷಗಾನ ಕಲಾ ಸೇವಾ ಸಂಘ ಉಪ್ಪಿನಂಗಡಿ ಇದರ 50ನೇ ವರ್ಷದ ನಿಮಿತ್ತ ನಡೆಸಲಾಗುತ್ತಿರುವ ಶ್ರೀ ಮಹಾಭಾರತ ಸರಣಿಯಲ್ಲಿ 78ನೇ ಕಾರ್ಯಕ್ರಮವಾಗಿ ‘ದ್ರುಪದಜ ಪರಿಣಯ’ ತಾಳಮದ್ದಳೆಯು ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದಲ್ಲಿ ಜರಗಿತು.
ಭಾಗವತರಾಗಿ ಪದ್ಮನಾಭ ಕುಲಾಲ್, ಸುರೇಶ್ ರಾವ್ ಬಿ., ಹಿಮ್ಮೇಳದಲ್ಲಿ ಶ್ರೀಪತಿ ಭಟ್ ಉಪ್ಪಿನಂಗಡಿ, ಗುರುಮೂರ್ತಿ ಅಮ್ಮಣ್ಣಾಯ, ಅರ್ಥಧಾರಿಗಳಾಗಿ ಜಯರಾಮ ನಾಲ್ಗುತ್ತು(ದ್ರುಪದ) ಶ್ರುತಿ ವಿಸ್ಮಿತ್(ವನಪಾಲಕ), ಶ್ರೀಧರ್ ಎಸ್ಪಿ ಸುರತ್ಕಲ್ (ಶಿಖಂಡಿ), ಪೂರ್ಣಿಮ ರಾವ್(ಈಶ್ವರ), ಪುಷ್ಪಲತಾ ಎಂ. (ಪಾರ್ವತಿ), ಪಾತಾಳ ಅಂಬಾ ಪ್ರಸಾದ್ (ಹಿರಣ್ಯ ಮಣಿ), ಪ್ರದೀಪ ಹೆಬ್ಬಾರ್ ಚಾರ (ಹಿರಣ್ಯ ವರ್ಮ), ಮಾ.ಸುಶಾಂತ್ ರಾವ್ (ದ್ರುಪದನ ದೂತ), ಮಾ. ದುಷ್ಯಂತ ಸುರತ್ಕಲ್ (ಕರಣಿಕ), ದಿವಾಕರ ಆಚಾರ್ಯ ಗೇರುಕಟ್ಟೆ (ಪುರೋಹಿತರು) ಭಾಗವಹಿಸಿದ್ದರು. ಜಯರಾಮ ನಾಲ್ಗುತ್ತು ತಾಳಮದ್ದಳೆಯ ಪ್ರಾಯೋಜಕರಾಗಿ ಸಹಕರಿಸಿದರು.
ಬಳಿಕ ಸಂಘದ ಅಧ್ಯಕ್ಷ ದಿವಾಕರ ಆಚಾರ್ಯ ಗೇರುಕಟ್ಟೆ ಸ್ವರ್ಣ ಮಹೋತ್ಸವದ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಪೆರಿಯಡ್ಕ ಸಾಂಸ್ಕೃತಿಕ ಕಲಾ ಕೇಂದ್ರದ ಮಹಾಲಿಂಗೇಶ್ವರ ಭಟ್ ಪೆರಿಯಡ್ಕ ಮತ್ತು ದುರ್ಗಾಮಣಿ ಉಪಸ್ಥಿತರಿದ್ದು ಶುಭ ಹಾರೈಸಿಸಿದರು.