ಅರಿಯಡ್ಕ: ನೇರೋಳ್ತಡ್ಕ ಮನೆಗೆ ಮರ ಬಿದ್ದು ಅಪಾರ ಹಾನಿ

0

ಅರಿಯಡ್ಕ : ಅರಿಯಡ್ಕ ಗ್ರಾಮದ ನೇರೋಳ್ತಡ್ಕ ಜಯಂತಿ ಎಂಬವರ ಮನೆಗೆ ಜೂ. 17 ರಂದು ಭಾರಿ ಮಳೆ ಗಾಳಿಗೆ ಬೃಹಧಾಕಾರದ ಬೀಟೆ ಮರ ಬಿದ್ದು 2 ಲಕ್ಷಕ್ಕೂ ಅಧಿಕ ನಷ್ಟ ಸಂಭವಿಸಿದೆ.

ಮನೆಯ ಮಹಡಿಗೆ ಇತ್ತೀಚೆಗೆ ಶೀಟ್ ಅಳವಡಿಸಿದ್ದು ಇದು ಪೂರ್ತಿ ನುಚ್ಚುನೂರಾಗಿದೆ.ಮನೆಯಲ್ಲಿದ್ದ ಜಯಂತಿ ಮತ್ತು ಮಕ್ಕಳಾದ ಧನ್ ರಾಜ್, ಚೇತನ್ ರಾಜ್ ಅಪಾಯದಿಂದ ಪಾರಾಗಿದ್ದಾರೆ.ಸ್ಥಳಕ್ಕೆ ಅರಿಯಡ್ಕ ಗ್ರಾಮ ಪಂಚಾಯತ್ ಅಧ್ಯಕ್ಷ ಸಂತೋಷ್ ಮಣಿಯಾಣಿ ಕುತ್ಯಾಡಿ, ಸದಸ್ಯ ಹರೀಶ್ ರೈ ಜಾರತ್ತಾರು,ಅರಿಯಡ್ಕ ವಲಯ ಕಾಂಗ್ರೆಸ್‌ ಅಧ್ಯಕ್ಷ ಎಸ್‌ ಇಕ್ಬಾಲ್‌ ಹುಸೇನ್‌ ಕೌಡಿಚ್ಚಾರ್‌,ಗ್ರಾಮಕರಣಿಕ ಗೋಪಿಲಾಲ್‌ ಟಿ, ಅರಣ್ಯಾಧಿಕಾರಿಗಳು ಭೇಟಿ ನೀಡಿದರು.

LEAVE A REPLY

Please enter your comment!
Please enter your name here