ವಿಷ್ಣುಪ್ರಸಾದ್ಗೆ ರಾಷ್ಟ್ರಮಟ್ಟದಲ್ಲಿ 207ನೇ ರ್ಯಾಂಕ್, ತಾ|ಗೆ ಪ್ರಥಮ
ಪುತ್ತೂರು: ವೈದ್ಯಕೀಯ ಅರ್ಹತಾ ಪ್ರವೇಶ ಪರೀಕ್ಷೆ ನೀಟ್ನ ಫಲಿತಾಂಶ ಪ್ರಕಟವಾಗಿದ್ದು ಪುತ್ತೂರಿನ ನಟ್ಟೋಜಾ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಅಂಬಿಕಾ ಪದವಿ ಪೂರ್ವ ವಿದ್ಯಾಲಯಗಳ ವಿದ್ಯಾರ್ಥಿಗಳು ಅಮೋಘ ಸಾಧನೆ ಮಾಡಿದ್ದಾರೆ.
ಬಂಟ್ವಾಳ ಪೆರ್ನೆಯ ಚಂದ್ರಶೇಖರ ಮತ್ತು ವನಿತಾ ದಂಪತಿಯ ಪುತ್ರ ವಿಷ್ಣು ಪ್ರಸಾದ್ 586 ಅಂಕ, 207ನೇ ರ್ಯಾಂಕ್ ಪಡೆದು ಸಂಸ್ಥೆಗೆ ಕೀರ್ತಿ ತಂದಿದ್ದಾರೆ. ಕಾಸರಗೋಡಿನ ಕೂಡ್ಲು ನಿವಾಸಿ ಎಚ್. ರವಿಚಂದ್ರ ನಾಯಕ್ ಹಾಗೂ ಶ್ಯಾಮಲಾ ದಂಪತಿ ಪುತ್ರ ಎಸ್. ತೇಜಸ್ ನಾಯಕ್ (540 ಅಂಕ, 7800 ನೇ ರ್ಯಾಂಕ್), ಮಡಿಕೇರಿಯ ಅಯ್ಯಣ್ಣ ಎಮ್.ಕೆ. ಮತ್ತು ಶರೀನ್.ಬಿ.ಬಿ. ದಂಪತಿಯ ಪುತ್ರ ಆರೀನ್ ಅಯ್ಯಪ್ಪ (530 ಅಂಕ, 9752ನೇ ರ್ಯಾಂಕ್) , ಆರ್ಯಾಪು ಮಹಾಲಿಂಗೇಶ್ವರ ಭಟ್ ಎಂ. ಮತ್ತು ಎಸ್. ವಿ. ದುರ್ಗಮಾಲಾ ದಂಪತಿ ಪುತ್ರಿ ಸ್ನೇಹಾ ಎಂ. (515 ಅಂಕ, 13789ನೇ ರ್ಯಾಂಕ್), ಬಂಟ್ವಾಳದ ಅಳಕೆ ಮಜಲಿನ ಡಾ. ಮಂದಾರ ಮತ್ತು ಅನುಪಮಾ ಎನ್. ದಂಪತಿ ಪುತ್ರಿ ಅನನ್ಯಾ ಎಸ್. ಜೈನ್ (515 ಅಂಕ, 14093ನೇ ರ್ಯಾಂಕ್ ), ಬಂಟ್ವಾಳ ಕರೋಪಾಡಿಯ ಪಿ. ನಾರಾಯಣ ಭಟ್ ಹಾಗೂ ಜಯ ಶ್ರೀ ದಂಪತಿ ಪುತ್ರಿ ಪಾವನ (498 ಅಂಕ), ನರಿಮೊಗರು ಇಲ್ಲಿಯ ರಘುನಾಥ ಎಸ್. ಮತ್ತು ತಾರಾ ಬಿ.ಸಿ. ದಂಪತಿ ಪುತ್ರ ತೇಜಸ್ ಎಸ್.ಆರ್. (490), ಪುತ್ತೂರು ತೆಂಕಿಲದ ಡಾ. ಭಾಸ್ಕರ್ ಎಂ. ಮತ್ತು ಡಾ. ಸೌಮ್ಯ ಎಂ. ದಂಪತಿಯ ಪುತ್ರ ಧ್ಯಾನ್ ವಸಿಷ್ಠ ಎಂ. (474), ಪುತ್ತೂರು ಪಡುವನ್ನೂರಿನ ರವಿರಾಜ್ ಗೌಡ ಮತ್ತು ಲತಾ ದಂಪತಿಯ ಪುತ್ರ ಸುಮೀತ್ ರಾಜ್ (469), ಬಪ್ಪಳಿಗೆಯ ಚಿದಾನಂದ ಪೂಜಾರಿ ಮತ್ತು ಶೋಭಾ ಎಂ. ದಂಪತಿಯ ಪುತ್ರಿ ಹಿಮಾನಿ ಎ.ಸಿ. (447), ಆರ್ಯಾಪು ಕೆ. ದಿನಕರ ಮತ್ತು ಬಿ. ಸುಮತಿ ದಂಪತಿಯ ಪುತ್ರ ಗೌರವ್ ಪಿ.ಡಿ. (443), ಬಂಟ್ವಾಳ ವಿಟ್ಲದ ಶಿವಾನಂದ ರೈ ಕೆ. ಮತ್ತು ದೀಪಾ ಎಸ್. ರೈ ದಂಪತಿಯ ಪುತ್ರ ಅನ್ವಿತ್ ರೈ ಕೆ. (437), ಅಡ್ಯನಡ್ಕದ ಕೆ.ಎಸ್. ನಾರಾಯಣ ಭಟ್ ಮತ್ತು ವಿದ್ಯಾ ಭಟ್ ಕೆ. ದಂಪತಿಯ ಪುತ್ರ ಸಾತ್ವಿಕ್ ಕೃಷ್ಣ ಕೆ.ಎನ್. (434) ಅಂಕದೊಂದಿಗೆ ವೈದ್ಯಕೀಯ ಕೋರ್ಸಿಗೆ ಅರ್ಹರಾಗಿ ಕಾಲೇಜಿಗೆ ಕೀರ್ತಿ ತಂದಿದ್ದಾರೆ.
ಕೆಲವು ವರ್ಷಗಳಿಂದ ನೀಟ್ ಮತ್ತು ಜೆಇಇ ಪರೀಕ್ಷೆಗಳಲ್ಲಿ ಅದ್ಭುತ ಸಾಧನೆ ಮಾಡುತ್ತಿದ್ದು ಈ ವರ್ಷವೂ ನೀಟ್ ಪರೀಕ್ಷೆಯಲ್ಲಿ ಅಂಬಿಕಾದ ಸಾಧನೆ ಅಪಾರ. ಬಹುಜನ ಪೋಷಕರ ಅಪೇಕ್ಷೆಯಂತೆ ಈ ಶೈಕ್ಷಣಿಕ ವರ್ಷದಲ್ಲೂ ನೀಟ್ ರಿಪೀಟರ್ಸ್ ಬ್ಯಾಚ್ ಆರಂಭಿಸುವುದಾಗಿ ಆಡಳಿತ ಮಂಡಳಿ ನಿರ್ಧರಿಸಿದ್ದು ಸೀಮಿತ ಸಂಖ್ಯೆಯ ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಲಾಗಿದೆ.