ನೆಟ್ಟಣ: ರಿಕ್ಷಾ ಚಾಲಕ ನಿಧನ

0

ಕಡಬ: ಬಿಳಿನೆಲೆ ಗ್ರಾಮದ ಚೆಂಡೆಹಿತ್ಲು ನಿವಾಸಿ ದಿ.ಮೇದಪ್ಪ ಗೌಡರ ಪುತ್ರ, ರಿಕ್ಷಾ ಚಾಲಕ ಚೇತನ್(35ವ.)ರವರು ಅಲ್ಪಕಾಲದ ಅನಾರೋಗ್ಯದಿಂದ ಜೂ.17ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.



ಕೆಲ ದಿನಗಳ ಹಿಂದೆ ಚೇತನ್ ಅವರಿಗೆ ಅನಾರೋಗ್ಯ ಕಾಣಿಸಿಕೊಂಡಿದ್ದು, ಕಡಬದ ಆಸ್ಪತ್ರೆಯೊಂದರಲ್ಲಿ ತಪಾಸಣೆ ವೇಳೆ ಜಾಂಡೀಸ್ ಇರುವುದು ಪತ್ತೆಯಾಗಿದೆ. ವೈದ್ಯರ ಸಲಹೆಯಂತೆ ಅವರು ಮಂಗಳೂರಿನ ಎ.ಜೆ.ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಅಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ನಿಧನರಾಗಿದ್ದಾರೆ ಎಂದು ವರದಿಯಾಗಿದೆ. ಬಡ ಕುಟುಂಬದ ಚೇತನ್ ಅವರು ಸ್ವಂತ ರಿಕ್ಷಾ ಹೊಂದಿದ್ದು ನೆಟ್ಟಣದಲ್ಲಿ ಬಾಡಿಗೆಗೆ ಓಡಾಟ ನಡೆಸುತ್ತಿದ್ದರು. ಮೃತರು ತಾಯಿ ಶಿವಮ್ಮ, ಪತ್ನಿ ಶೋಭಾ, 1 ಗಂಡು,1 ಹೆಣ್ಣು ಹಾಗೂ ಸಹೋದರಿಯನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here