ಪುತ್ತೂರು: ತುಳುನಾಡಿನಲ್ಲಿ ಮನೆಮಾತಾಗಿರುವ ತುಳುವರ ಒಡಲ ಧ್ವನಿಯಾದ ಜೈ ತುಲುನಾಡ್ ಸಂಘಟನೆಯು ತನ್ನ ಹತ್ತನೇ ವರ್ಷ ತುಂಬಿದ ಸಂಭ್ರಮದಲ್ಲಿ “ತುಲುರಾಜ್ಯೊದ ಪೊರ್ಲೈಸಿರೊ” ಎಂಬ ವಿನೂತನ ಕಾರ್ಯಕ್ರಮ ಮಂಗಳೂರಿನ ಉರ್ವಸ್ಟೋರ್ ಬಳಿ ಇರುವ ಅಂಬೇಡ್ಕರ್ ಭವನದಲ್ಲಿ ತುಲುವ ನೇಸರ ದಿ| ಶಶಿ ಬಂಡಿಮಾರ್ ವೇದಿಕೆಯಲ್ಲಿ ನಡೆಯಿತು.

ತುಳು ದಿಬ್ಬಣದ ಮೂಲಕ ಆರಂಭವಾದ ಜೈ ತುಲುನಾಡ್ ಸಂಘಟನೆಯ ತುಲುರಾಜ್ಯೊದ ಪೊರ್ಲೈಸಿರ ಕಾರ್ಯಕ್ರಮವನ್ನು ತುಳು ಸಿನಿಮಾ ಮತ್ತು ನಾಟಕ ರಂಗದ ನಿರ್ದೇಶಕರಾದ ವಿಜಯಕುಮಾರ್ ಕೊಡಿಯಾಲ್ಬೈಲ್ ಅವರು ದೀಪ ಬೆಳಗುವುದರ ಮೂಲಕ ಉದ್ಘಾಟಿಸಿ “ತುಳುನಾಡಿನಿಂದ ಹೊರಗೆ ಹೋದಾಗಲೇ ತುಳುನಾಡು, ತುಳು ಭಾಷೆಯ ಮಹತ್ವ ತಿಳಿಯುವುದು. ಮಾತೃಭಾಷೆಯ ಉಳಿವಿಗಾಗಿ ಜೈ ತುಲುನಾಡ್ ಸಂಘಟನೆಯ ಪ್ರಯತ್ನ ಶ್ಲಾಘನೀಯ” ಎಂದರು.
ಮುಖ್ಯ ಅತಿಥಿ ಮುಲ್ಕಿ ಮೂಡಬಿದ್ರೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಉಮಾನಾಥ್ ಕೋಟ್ಯಾನ್ ಮಾತನಾಡಿ ಹಲವಾರು ವರ್ಷಗಳಿಂದ ಜೈ ತುಲುನಾಡ್ ಸಂಘಟನೆಯ ಬಗ್ಗೆ ತಿಳಿದುಕೊಳ್ಳುತ್ತಾ ಅವರೊಂದಿಗೆ ನಾನೂ ಇದ್ದವನು. ತುಳು ಪರವಾಗಿ ಅವರು ಮಾಡುವ ಕೆಲಸ ಮೆಚ್ಚತಕ್ಕದ್ದು, ಇಂತಹ ತುಳುಪರ ಕಾರ್ಯಕ್ರಮಗಳಿಗೆ ತುಳು ಅಕಾಡೆಮಿಯಿಂದ ಅನುದಾನಗಳು ದೊರೆಯಬೇಕಿದೆ ಎಂದರು. ಸಾಹಿತಿ ವಲೇರಿಯನ್ ಸಿಕ್ವೇರಾ, ದೈವಾರಾಧಕರಾದ ಪ್ರದೀಪ್ ಪುಂಜಾಲಕಟ್ಟೆ ಕಜತ್ತೋಡಿ, ಹಾಗೂ ಜೈ ತುಲುನಾಡ್ ಸಂಘಟನೆಯ ಮಾಜಿ ಅಧ್ಯಕ್ಷರುಗಳಾದ ಅಶ್ವಥ್, ಸುದರ್ಶನ್ ಸುರತ್ಕಲ್, ಮತ್ತು ಜೈ ತುಲುನಾಡ್ ಘಟಕಗಳ ಅಧ್ಯಕ್ಷರುಗಳಾದ ಕಾಸರಗೋಡಿನ ಕುಶಲಾಕ್ಷಿ ವಿ. ಕಣ್ವತೀರ್ಥ, ಬೆಂಗಳೂರಿನ ನಿಧೀಶ್ ಶೆಟ್ಟಿ, ಉಡುಪಿಯ ಸುಶೀಲ ಕೊಡವೂರು, ಕಾರ್ಕಳದ ರವಿಚಂದ್ರ ಕಾರ್ಲ, ಮಂಗಳೂರಿನ ಮನೀಶ್ ಕುಮಾರ್ ಉಪಸ್ಥಿತರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘಟನೆಯ ಅಧ್ಯಕ್ಷರಾದ ತಾರಿಪಾಡಿ ಗುತ್ತು ಉದಯ ಪೂಂಜ ವಹಿಸಿದ್ದರು. ಈ ಸಂದರ್ಭದಲ್ಲಿ ತುಳುವಪ್ಪೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು.
ಶಿಕ್ಷಣ ಕ್ಷೇತ್ರಡ್ ತುಲು ಬರವು ಸರವು’ ಎಂಬ ವಿಷಯದ ಬಗ್ಗೆ ವಿಚಾರಗೋಷ್ಠಿ ನಡೆಯಿತು. ನಿರೂಪಕರಾದ ನವೀನ್ ಶೆಟ್ಟಿ ಎಡ್ಮೆಮಾರ್ ನಡೆಸಿಕೊಟ್ಟರು. ಸಂಪನ್ಮೂಲ ವ್ಯಕ್ತಿಗಳಾಗಿ ಡಾ. ಪಿ. ದಯಾನಂದ ಪೈ- ಪಿ. ಸತೀಶ ಪೈ ಸರಕಾರಿ ಪ್ರಥಮ ದರ್ಜೆ ಕಾಲೇಜು ಮಂಗಳೂರು ಇದರ ತುಳು ಉಪನ್ಯಾಸಕಿ ಹಾಗೂ ಬರಹಗಾರ್ತಿ ಮಣಿ ಮನ್ಮೋಹನ್ ರೈ, ನಿರಂಜನ ಸ್ವಾಮಿ ಅನುದಾನಿತ ಪದವಿ ಪೂರ್ವ ಕಾಲೇಜು ಸುಂಕದಕಟ್ಟೆ ಇದರ ಇತಿಹಾಸ ಪ್ರಾಧ್ಯಾಪಕರಾದ ಸುಧಾಕರ ಶೆಟ್ಟಿ ಹಾಗೂ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಬಲ್ಮಠ ಮಂಗಳೂರು ಇದರ ಪ್ರಾಂಶುಪಾಲರಾದ ಜಗದೀಶ್ ಬಾಳ ಭಾಗವಹಿಸಿದ್ದರು.
ಮಧ್ಯಾಹ್ನದ ಸಭಾ ಕಾರ್ಯಕ್ರಮವು ಸಂಘಟನೆಯ ಅಧ್ಯಕ್ಷರಾದ ತಾರಿಪಾಡಿಗುತ್ತು ಉದಯ ಪೂಂಜ ಇವರ ಅಧ್ಯಕ್ಷತೆಯಲ್ಲಿ ನಡೆಯಿತು. ಶ್ರೀ ಕ್ಷೇತ್ರ ಕೇಮಾರು ಸಾಂದೀಪನಿ ಸಾಧನಾಶ್ರಮದ ಶ್ರೀ ಈಶ ವಿಠಲ ದಾಸ ಸ್ವಾಮೀಜಿಯವರು ಆಶೀರ್ವಚನ ನೀಡಿದರು. ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಕಟೀಲು ಇದರ ಅನುವಂಶಿಕ ಅರ್ಚಕರಾದ ಶ್ರೀ ಕಮಲಾದೇವಿ ಪ್ರಸಾದ ಅಸ್ರಣ್ಣರು ಸಭೆಯಲ್ಲಿ ಉಪಸ್ಥಿತರಿದ್ದು ಶುಭವನ್ನು ಹಾರೈಸಿದರು. ಮುಖ್ಯ ಅತಿಥಿಗಳಾಗಿ ಕರ್ನಾಟಕ ವಿಧಾನಸಭೆಯ ಸಭಾಧ್ಯಕ್ಷರಾದ ಯು.ಟಿ.ಖಾದರ್, ದ.ಕ.ಜಿಲ್ಲಾ ಪಂಚಾಯತಿ ಇದರ ಮಾಜಿ ಉಪಾಧ್ಯಕ್ಷೆಯಾದ ಕಸ್ತೂರಿ ಪಂಜ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಸದಸ್ಯೆ ತಾರಾ ಆಚಾರ್ಯ, ತಾಲೂಕು ಯುವಜನ ಒಕ್ಕೂಟ ಇದರ ಅಧ್ಯಕ್ಷರಾದ ಗಿರೀಶ್ ಶೆಟ್ಟಿ ತಿಬಾರ್, ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ರಾಜ್ಯಾಧ್ಯಕ್ಷರಾದ ಡಾ. ಹರಿಕೃಷ್ಣ ಪುನರೂರು, ಕುಶಲ ಪೂಜಾರಿ ತಾಳಿಪಾಡಿ, ಯಶೋಧಾ ಮೋಹನ್, ರಾಜೇಶ್ ಆಳ್ವ, ಶೈಲೇಶ್ ಪೂಜಾರಿ ಕುಚ್ಚಿಗುಡ್ಡೆ ಉಪಸ್ಥಿತರಿದ್ದರು.
ತುಲುನಾಡ ಐಸಿರ’ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ತುಳುನಾಡಿನ ಹಲವು ಕುಣಿತದ ಪ್ರಕಾರಗಳನ್ನು ಪ್ರದರ್ಶಿಸಲಾಯಿತು. ಪಿಲಿ ನಲಿಕೆ, ಚಿನ್ನು ನಲಿಕೆ, ಕಂಗೀಲು, ಸೇರಿದಂತೆ ತುಳು ಜಾನಪದ, ತುಳು ಹಾಡುಗಳ ನೃತ್ಯಗಳು ಕಾರ್ಯಕ್ರಮದುದ್ದಕ್ಕೂ ಮೇಲೈಸಿತು. ತುಳುನಾಡಿನ ಪ್ರಾಚೀನ ಸಮರ ಕಲೆ ಕಳರಿ ಪ್ರದರ್ಶನ ನಡೆಯಿತು.
‘ಪಟ್ಟಾಂಗದ ಚಾವಡಿ’ ವಿಚಾರಗೋಷ್ಟಿಯಲ್ಲಿ “ತುಲುರಾಜ್ಯೊದ ಪರತಿರಿ ಪರಪೋಕು ಬೊಕ್ಕ ಪೊಸ ಸೋಕು” ಎಂಬ ವಿಷಯದಲ್ಲಿ ನಿನ್ನೆ,ಇಂದು,ನಾಳೆಗಳ ಬಗ್ಗೆ ಮಾತುಕತೆಯನ್ನು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷರಾದ ದಯಾನಂದ ಜಿ ಕತ್ತಲ್ಸರ್ ಅವರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು. ಆಳುಪ ವಂಶಸ್ಥರಾದ ಡಾ| ಆಕಾಶ್ ರಾಜ್ ಜೈನ್, ಉಡುಪಿ ಸಮೂಹ ಶಿಕ್ಷಣ ಸಂಸ್ಥೆ ಮಣಿಪಾಲ ಇಲ್ಲಿನ ಸಹ ಪ್ರಾಧ್ಯಪಕಿ ಅರ್ಪಿತಾ ಪ್ರಶಾಂತ್ ಶೆಟ್ಟಿ ಕಟಪಾಡಿ ಅತಿಥಿಗಳಾಗಿ ಪಾಲ್ಗೊಂಡಿದ್ದರು.
ಸಂಜೆ ನಡೆದ ಸಮಾರೋಪ ಸಮಾರಂಭವು ಸಂಘಟನೆಯ ಅಧ್ಯಕ್ಷರಾದ ತಾರಿಪಾಡಿ ಗುತ್ತು ಉದಯ ಪೂಂಜರವರ ಅಧ್ಯಕ್ಷತೆಯಲ್ಲಿ ಹಾಗೂ ಒಡಿಯೂರು ಶ್ರೀ ಗುರು ದೇವದತ್ತ ಸಂಸ್ಥಾನದ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ಸಂಪನ್ನಗೊಂಡಿತು. ಮುಖ್ಯ ಅತಿಥಿಗಳಾಗಿ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಿ. ವೇದವ್ಯಾಸ ಕಾಮತ್, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷರುಗಳಾದ ಎ. ಸಿ. ಭಂಡಾರಿ ಹಾಗೂ ದಯಾನಂದ ಜಿ ಕತ್ತಲ್ಸಾರ್, ಮಾಜಿ ಮೇಯರ್ ಮನೋಜ್ ಕುಮಾರ್ ಕೋಡಿಕಲ್, ಮ.ನ.ಪಾ ದ ಸ್ಥಾಯಿ ಸಮಿತಿಯ ಮಾಜಿ ಅಧ್ಯಕ್ಷರಾದ ವರುಣ್ ಚೌಟ, ಮ.ನ.ಪಾ ದ ನಿಕಟಪೂರ್ವ ಸದಸ್ಯರಾದ ಕಿರಣ್ ಕುಮಾರ್ ಕೋಡಿಕಲ್, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಸದಸ್ಯರಾದ ಡಾ|ಆಕಾಶ್ ರಾಜ್ ಜೈನ್, ಸಾಂಸ್ಕೃತಿಕ ಚಿಂತಕರಾದ ಡಾ| ಅರುಣ್ ಉಳ್ಳಾಲ, ಪುನರೂರು ಪ್ರತಿಷ್ಠಾನದ ದೇವಪ್ರಸಾದ್ ಪುನರೂರು, ಟೈಮ್ಸ್ ಆಫ್ ಕುಡ್ಲ ಪತ್ರಿಕೆಯ ಭುವನೇಶ್ವರಿ ದಿನೇಶ್, ಉಪಸ್ಥಿತರಿದ್ದರು.
ಸಭಾಂಗಣದ ಒಳಾಂಗಣ ಹಾಗೂ ಹೊರಾಂಗಣದಲ್ಲಿ ತುಳುನಾಡಿನ ಹಲವು ಕ್ರೀಡಾ ಸ್ಪರ್ಧೆಗಳು, ಚಿತ್ರ ಸ್ಪರ್ಧೆ, ತುಲು ಲಿಪಿ ಸ್ಪರ್ಧೆ ನಡೆದಿದ್ದು ವಿಜೇತರಿಗೆ ಬಹುಮಾನ ವಿತರಣೆ, ಯುವ ಸಾಧಕಿ ದಿವ್ಯ ಅಂಚನ್ ಪಕ್ಷಿಕೆರೆ ಇವರಿಗೆ ವಿಶೇಷ ಸನ್ಮಾನ, ಸ್ಥಳೀಯಾಡಳಿತದಲ್ಲಿ ತುಳು ಲಿಪಿ ಅನುಷ್ಠಾನ ಮಾಡಿದ ಮ.ನ.ಪಾ ದ ಮಾಜಿ ಮೇಯರ್ ಮನೋಜ್ ಕುಮಾರ್ ಕೋಡಿಕಲ್, ಮ.ನ.ಪಾ ದ ನಿಕಟ ಪೂರ್ವ ಸದಸ್ಯರಾದ ವರುಣ್ ಚೌಟ, ಕಿರಣ್ ಕುಮಾರ್ ಕೋಡಿಕಲ್ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು. ತುಳು ಲಿಪಿ ಕಲಿಸಿದ ಶಿಕ್ಷಕರಿಗೆ ಅಭಿನಂದನಾ ಪತ್ರ, ತುಳು ಲಿಪಿ ಕಲಿತು ಉತ್ತೀರ್ಣರಾದವರಿಗೆ ಪ್ರಮಾಣ ಪತ್ರ ನೀಡಲಾಯಿತು. ಬಲೆ ದೈ ನಡ್ಕ, ತುಲು ಲಿಪಿ ಕಮ್ಮೆನ, ಜನ ಗೆಲ್ಮೆದ ನಲಿಕೆ, ತುಳು ಭಾಷಣ ಸ್ಪರ್ಧೆಗಳ ವೀಜೆತರಿಗೆ ಬಹುಮಾನ ವಿತರಿಸಲಾಯಿತು. ದಿನ ಪೂರ್ತಿ ನಡೆದ ಕಾರ್ಯಕ್ರಮವು ತುಲುರಾಜ್ಯೊದ ಪೊರ್ಲೈಸಿರವನ್ನು ರಂಗೇರಿಸಿತು. ಸುರಿಯುತ್ತಿರುವ ಮಳೆಯನ್ನು ಲೆಕ್ಕಿಸದೆ ಕಿಕ್ಕಿರಿದು ತುಂಬಿದ ಸಭಾಂಗಣವು ತುಳುವರ ಸಂಭ್ರಮವನ್ನು ಎತ್ತಿ ತೋರಿಸುತ್ತಿತ್ತು, ಬೆಳಗಿನ ಉಪಹಾರ, ಸವಿದು ಸಭೆಯನ್ನು ಆಸ್ವಾದಿಸುತ್ತಿದ್ದ ಸಭಿಕರಿಗೆ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಕಟೀಲಿನ ವತಿಯಿಂದ ಭೋಜನ ವ್ಯವಸ್ಥೆಯನ್ನು ಮಾಡಲಾಗಿತ್ತು. ಹಬ್ಬದ ವಾತಾವರಣವನ್ನು ಸೃಷ್ಟಿಸಿದ ಈ ಕಾರ್ಯಕ್ರಮವನ್ನು ರೇಣುಕಾ ಕಣಿಯೂರು, ಗೀತಾ ಲಕ್ಷ್ಮೀಶ್, ಕೀರ್ತನಾ ಸನಿಲ್, ಸೌಮ್ಯ ಕುಂದರ್, ಅನನ್ಯ ಕರ್ಕೇರ ನಿರೂಪಿಸಿದರು.