ಆಲಂಕಾರು: ಆಲಂಕಾರು ಗ್ರಾ.ಪಂ ಮುಂಭಾಗದಲ್ಲಿ ಬಿ.ಜೆ.ಪಿ ವತಿಯಿಂದ ಕಾಂಗ್ರೆಸ್ ಸರಕಾರದ ಜನವಿರೋಧಿ ನೀತಿಯನ್ನು ಖಂಡಿಸಿ ಪ್ರತಿಭಟನೆ ನಡೆಸಲಾಯಿತು.ಶ್ಯಾಮಪ್ರಸಾದ್ ಮುಖರ್ಜಿಯ ಬಲಿದಾನ ದಿವಸದ ಅಂಗವಾಗಿ ಭಾರತಮಾತೆ,ಶ್ಯಾಮಪ್ರಸಾದ್ ಮುಖರ್ಜಿ,ಪಂಡೀತ್ ದೀನದಯಾಳ್ ಉಪಾಧ್ಯಾಯರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದ ಬಳಿಕ ಪ್ರತಿಭಟನೆ ನಡೆಯಿತು.
ತಾ.ಪಂ ಮಾಜಿ ಅಧ್ಯಕ್ಷೆ ,ಬಿ.ಜೆ.ಪಿ ವಿಕಸಿತ ಭಾರತದ ಅಭಿಯಾನದ ಸುಳ್ಯಮಂಡಲ ಸಂಚಾಲಕಿ ಪುಲಸ್ತ್ಯ ರೈ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ
9/11 ನಿವೇಶನ, ಅಕ್ರಮ ಸಕ್ರಮ ತಿರಸ್ಕರಣೆ, ವಿದ್ಯುತ್ ದರ ಏರಿಕೆ, ಬಡವರ ಆಶ್ರಯ ಮನೆಗಳ ಮಂಜೂರಾತಿ, ವೃದ್ಧಾಪ್ಯ ವೇತನ, ಸಂಧ್ಯಾ ಸುರಕ್ಷಾ ಯೋಜನೆ ಹಣ ಬಿಡುಗಡೆ ಇಂತಹ ಹತ್ತು ಹಲವು ಸಮಸ್ಯೆಗಳ ಮೂಲಕ ಬಡವರ ಪಾಲಿಗೆ ಹೊರೆಯಾದ ಜನ ವಿರೋಧಿ ಕಾಂಗ್ರೆಸ್ ಸರಕಾರವಾಗಿದೆ ಎಂದು ತಿಳಿಸಿದರು.
ಶಕ್ತಿ ಯೋಜನೆಯಿಂದ ನಿಗದಿ ಸಮಯದಲ್ಲಿ ಬಸ್ಸುಗಳು ಇಲ್ಲದೇ ವಿದ್ಯಾರ್ಥಿಗಳು ಹಾಗು ವಯೋವೃದ್ದರು ಕಷ್ಟ ಪಡುವಂತಹ ಸ್ಥಿತಿ ನಿರ್ಮಾಣವಾಗಿದೆ,ಸರಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂದು ತಿಳಿಸಿ ಬಿ.ಜೆ.ಪಿಯ ಪ್ರತಿಭಟನೆ ಯಾವ ಇಲಾಖೆಯ ವಿರುದ್ದ ಸಲ್ಲ ಜನವಿರೋಧಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ದ ವಿರುದ್ಧ ಎಂದು ತಿಳಿಸಿದರು.
ಪ್ರತಿಭಟನೆಯಲ್ಲಿ ಆಲಂಕಾರು ಸಿ.ಎ ಬ್ಯಾಂಕ್ ಅಧ್ಯಕ್ಷ ರಮೇಶ ಭಟ್ ಉಪ್ಪಂಗಳ ಮತ್ತು ನಿರ್ದೇಶಕರು, ಆಲಂಕಾರು ಗ್ರಾ.ಪಂ ಅಧ್ಯಕ್ಷೆ ಸುಶೀಲ ಮತ್ತು ಗ್ರಾ.ಪಂ ಉಪಾಧ್ಯಕ್ಷ ರವಿ ಪೂಜಾರಿ. ಕೆ,ಮತ್ತು ಸದಸ್ಯರು,ಆಲಂಕಾರು ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷರಾದ ಮಾಧವ ಪೂಜಾರಿ ಕಯ್ಯಾಪೆ,ಮತ್ತು ನಿರ್ದೇಶಕರು,ಸುಳ್ಯ ಮಂಡಲ ಬಿ.ಜೆ.ಪಿ ಹಿಂದುಳಿದ ಮೋರ್ಚದ ಕಾರ್ಯದರ್ಶಿ ಸದಾನಂದ ಆಚಾರ್ಯ, ಯುವಮೋರ್ಚದ ಕಾರ್ಯದರ್ಶಿ ದಿವಾಕರ ಕುಂಬಾರ,ಆಲಂಕಾರು ಶಕ್ತಿ ಕೇಂದ್ರದ ಸಂಚಾಲಕ ಜಯಕರ ಪೂಜಾರಿ ಕಲ್ಲೇರಿ , ಶರವೂರು ದುರ್ಗಾಪರಮೇಶ್ವರಿ ದೇವಸ್ಥಾನದ ಉತ್ಸವ ಸಮಿತಿಯ ಅಧ್ಯಕ್ಷ ಲಕ್ಷ್ಮೀ ನಾರಾಯಣ ಪ್ರಭು,ವ್ಯವಸ್ಥಾಪನ ಸಮಿತಿಯ ಮಾಜಿ ಅಧ್ಯಕ್ಷರಾದ ದಾಮೋದರ ಗೌಡ ಕಕ್ವೆ,
ಸೇರಿದಂತೆ ಬಿ.ಜೆ.ಪಿಯ ಪದಾಧಿಕಾರಿಗಳು,ಸದಸ್ಯರು ಉಪಸ್ಥಿತರಿದ್ದರು.
ಬಿ.ಜೆ.ಪಿ ಕೊಯಿಲ ಮಹಾಶಕ್ತಿ ಕೇಂದ್ರದ ಕಾರ್ಯದರ್ಶಿ ರಾಮಚಂದ್ರ ನಾಯ್ಕ ಏಣಿತ್ತಡ್ಕ ಸ್ವಾಗತಿಸಿ, ಸುಳ್ಯ ಮಂಡಲ ಸಮಿತಿ ಸದಸ್ಯ ದಯಾನಂದ ಆಲಡ್ಕ ಧನ್ಯವಾದ ಸಮರ್ಪಿಸಿದರು.