ಬಡಗನ್ನೂರು: ಪಡುಮಲೆ ಶ್ರೀ ಕೂವೆ ಶಾಸ್ತಾರ ವಿಷ್ಣು ಮೂರ್ತಿ ದೇವಸ್ಥಾನದ ಜೀರ್ಣೋದ್ದಾರ ಬ್ರಹ್ಮಕಲಶೋತ್ಸವ ಲೆಕ್ಕಪತ್ರ ಮಂಡನಾ ಸಭೆ

0

ಬಡಗನ್ನೂರು: ಪಡುಮಲೆ ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನದ ಜೀರ್ಣೋದ್ದಾರ ಬ್ರಹ್ಮಕಲಶೋತ್ಸದ ಲೆಕ್ಕಪತ್ರ ಮಂಡನಾ ಸಭೆಯು ಜೂ.22ರಂದು ಶ್ರೀ ಕ್ಷೇತ್ರದ ಸಭಾಂಗಣದಲ್ಲಿ ಜೀರ್ಣೋದ್ದಾರ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಶ್ರೀನಿವಾಸ್ ಭಟ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು.

ಕ್ಷೇತ್ರದ ತಂತ್ರಿಗಳಾದ ವೇದಮೂರ್ತಿ ಕುಂಟಾರು ರವೀಶ್ ತಂತ್ರಿಗಳು ಅರ್ಶಿವಚನ ಮಾಡಿ ಮಾತನಾಡಿ, ಅಧ್ಯಾತ್ಮಕದ ಅಡಿಪಾಯ ಭದ್ರವಾಗಿರುವುದರಿಂದ ಭಾರತವು ಶ್ರೇಷ್ಠವಾಗಿದೆ. ಧರ್ಮ ಉನ್ನತಿ ಸಮಯದಲ್ಲಿ ನಾವು ದೇವಾಲಯವನ್ನು ಜೀರ್ಣೋದ್ದಾರ ಪಡಿಸಿದ್ದೇವೆ ಎಂಬದು ಸಂತೋಷ ವಿಚಾರವಾಗಿದೆ. ಧಾರ್ಮಿಕ ವ್ಯವಸ್ಥೆ ಜಾತಿ ಭೇದವಿಲ್ಲದೆ ನಾವೆಲ್ಲರೂ ಒಂದೇ ಎಂಬ ಭಾವನೆಯಲ್ಲಿ ಕಾರ್ಯನ್ಮುಖರಾಗಬೇಕು. ದೇವಸ್ಥಾನವನ್ನು ಮುನ್ನಡಿಸುವವರು ಸದಾ ಅಸನ್ಮುಖಿಗಳಾಗಿ ಎಲ್ಲರ ಪ್ರೀತಿ ಪಾತ್ರರಾಗಿರಬೇಕು. ಆಗ ಮಾತ್ರ ದೇವಾಲಯವನ್ನು ಉನ್ನತೀಕರಿಸಲು ಸಾಧ್ಯ ಎಂದರು. ಜೀರ್ಣೋದ್ದಾರ ಸಮಿತಿ ಅಧ್ಯಕ್ಷರಾಗಿದ್ದ ಚಂದುಕೂಡ್ಲು ಶ್ರೀನಿವಾಸ್ ಭಟ್ ನೇತೃತ್ವದಲ್ಲಿ ಭವ್ಯವಾದ ದೇಗುಲ ನಿರ್ಮಾಣ ಮಾಡಲು ಸಾಧ್ಯವಾಗಿದೆ ಎಂದು ಪ್ರಶಂಸೆನೀಯ ವ್ಯಕ್ತಪಡಿಸಿದರು.

ದೇವಸ್ಥಾನದ ವ್ರವಸ್ಥಾಪನಾ ನೂತನ ಸಮಿತಿ ಅಧ್ಯಕ್ಷ ಸತೀಶ್ ರೖೆ ಕಟ್ಟಾವು ಮಾತನಾಡಿ, ಊರ ಪರವೂರ ಭಕ್ತಾದಿಗಳು ಮತ್ತು ವಿವಿಧ ರೀತಿಯಲ್ಲಿ ಕೊಡುಗೆ ನೀಡಿದ ದಾನಿಗಳಿಂದ ಹಾಗೂ ಆಗಿನ ವ್ಯವಸ್ಥಾಪನಾ ಸಮಿತಿ ಆಧ್ಯಕ್ಷ ಮನೋಜ್ ರೖೆ ಪೇರಾಲು ಮತ್ತು ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಶ್ರೀನಿವಾಸ್ ಭಟ್ ಸಿ. ಯಚ್ ರವರ ಮುಂದಾಳತ್ವದಲ್ಲಿ ಸುಂದರವಾದ ಆಲಾಯ ನಿರ್ಮಾಣಗೊಂಡಿದೆ, ಮುಂದೆ ಇನ್ನಷ್ಟು ಅಭಿವೃದ್ಧಿಗೊಳಿಸುವಲ್ಲಿ ಎಲ್ಲರೂ ಸಹಕರಿಸುವಂತೆ ಹೇಳಿದರು.

ದೇವಸ್ಥಾನದ ರಾಜಾಗೋಪುರ ಕೂಡುಗೖೆದಾನಿಗಳು, ನಿವೃತ್ತ ಶಿಕ್ಷಕ ಲಕ್ಷ್ಮಿ ನಾರಾಯಣ ರಾವ್ ಭಕ್ತ ವೃಂದದ ಪರವಾಗಿ ಮಾತನಾಡಿ, ಪಡುಮಲೆಯಲ್ಲಿ ಇನ್ನಷ್ಟು ಪುಣ್ಯ ಸ್ಥಳಗಳು ಅಭಿವೃದ್ಧಿ ಪಡಿಸಲು ಬಾಕಿ ಇದೆ, ಎಲ್ಲವೂ ಅಭಿವೃದ್ಧಿ ಹೊಂದಿದಾಗ ತಿರುಮಲೆ, ಶಬರಿಮಲೆಯಷ್ಟೇ ಪಡುಮಲೆಗೂ ಸಮಾನ ಪಾವಿತ್ರ್ಯತೆ ಪ್ರಾಪ್ತಿಯಾಗುತ್ತದೆ. ನೂತನ ಸಮಿತಿಗೆ ಇನ್ನೂ ಹೆಚ್ಚು ಜವಾಬ್ದಾರಿ ಇದೆ ಎಂದರು.

ಜೀರ್ಣೋದ್ದಾರ ಹಾಗೂ ಬ್ರಹ್ಮಕಲಶೋತ್ಸ ಸಮಿತಿ ಅಧ್ಯಕ್ಷ ಶ್ರೀನಿವಾಸ್ ಭಟ್ ಸಿ.ಯಚ್ ಅಭಿನಂದನಾ ಮಾತನಾಡಿ, ಕೇವಲ 286 ದಿನಗಳಲ್ಲಿ ಭಕ್ತ ಸಮೂಹದ ಸಹಕಾರದಲ್ಲಿ ಸುಮಾರು ಮೂರು ಕೋಟಿ ವೆಚ್ಚದಲ್ಲಿ ಒಂದು ಸುಂದರ ದೇಗುಲ ನಿರ್ಮಾಣ ಕಾರ್ಯದಲ್ಲಿ ವಿವಿಧ ರೀತಿಯಲ್ಲಿ ಸಹಕರಿಸಿದ ಎಲ್ಲರನ್ನು ಅಭಿನಂದಿಸಿದರು.

ಜೀರ್ಣೋದ್ದಾರ ಸಮಿತಿ ಕಾರ್ಯದರ್ಶಿ ನಾರಾಯಣ ನಾಯ್ಕ ಜೀರ್ಣೋದ್ದಾರ ಸಮಯದಲ್ಲಿ ಮತ್ತು ಬಳಿಕದ ಅಭಿವೃದ್ಧಿ ಕಾರ್ಯಗಳ ಅಯಾ ಮತ್ತು ವ್ಯಯಾಗಳನ್ನು ಸಭೆಯಲ್ಲಿ ಮಂಡಿಸಿ ಅನುಮೋದನೆಯನ್ನು ಪಡೆದರು.

ವೇದಿಕೆಯಲ್ಲಿ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಮನೋಜ್ ರೖೆ ಪೇರಾಲು, ಜೀರ್ಣೋದ್ದಾರ ಸಮಿತಿ ಗೌರವಾಧ್ಯಕ್ಷ ನಾರಾಯಣ ಭಟ್, ಕಾರ್ಯದರ್ಶಿ ನಾರಾಯಣ ನಾಯ್ಕ, ಸಾಂಸ್ಕೃತಿಕ ಸಂಘದ ಸಂಚಾಲಕ ರಾಮಣ್ಣ ಗೌಡ ಬವಹಿತ್ತಿಲು ಉಪಸ್ಥಿತರಿದ್ದರು.

ಸಭೆಯಲ್ಲಿ ಶ್ರೀ ರಾಮಕೃಷ್ಣ ಪ್ರೌಢಶಾಲಾ ಸಂಚಾಲಕ ಹೇಮನಾಥ ಶೆಟ್ಟಿ ಕಾವು, ನೆ.ಮೂಡ್ನೂರು ಜಿ.ಪಂ ಮಾಜಿ ಅಧ್ಯಕ್ಷೆ ಅನಿತಾ ಹೇಮನಾಥ ಶೆಟ್ಟಿ, ಕ್ಷೇತ್ರದ ಪ್ರಧಾನ ಅರ್ಚಕ ಮಹಾಲಿಂಗ ಭಟ್, ಕಗ್ಗಲ್ಲು ಶಿಲ್ಪಿ ಪ್ರದೀಪ್, ಪಾಟೇಲ್ಕರ್, ಕಾಷ್ಠ ಶಿಲ್ಪಿ ಸುಧಾಕರ್ ಹಾಗೂ ಜೀರ್ಣೋದ್ದಾರ ಹಾಗೂ ಬ್ರಹ್ಮಕಲಶೋತ್ಸವ ಸಮಿತಿ  ಸಂಚಾಲಕ ಪದಾಧಿಕಾರಿಗಳು ಮತ್ತು ಸದಸ್ಯರು, ಮಾಜಿ ವ್ಯವಸ್ಥಾಪನಾ ಸಮಿತಿ ಸದಸ್ಯರು ನೂತನ ವ್ಯವಸ್ಥಾಪನಾ ಸಮಿತಿ ಸದಸ್ಯರು ಮತ್ತು ಊರ ಭಕ್ತಾದಿಗಳು ಉಪಸ್ಥಿತರಿದ್ದರು.

ಜೀರ್ಣೋದ್ದಾರ ಸಮಿತಿ ಸದಸ್ಯ ಉತ್ತಮ್ ಭಟ್ ಪ್ರಸ್ತಾವಿಕ ಮಾತನಾಡಿ ಸ್ವಾಗತಿಸಿದರು. ಡಾ. ರವೀಶ್ ಪಡುಮಲೆ ವಂದಿಸಿ,ಶಿವಶಂಕರ್ ಭಟ್ ಸುಳ್ಯಪದವು ಹಾಗೂ ರಾಮಕೃಷ್ಣ ಭಟ್ ಸಿ. ಯಚ್ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here