ವಸತಿ ರಹಿತ, ನಿವೇಶನ ರಹಿತ ಕುಟುಂಬಗಳಿಗೆ ಆದ್ಯತೆ ನೆಲೆಯಲ್ಲಿ ವಸತಿ ವ್ಯವಸ್ಥೆಯಾಗಬೇಕು- ಎ.ಸಿ.ಸ್ಟೆಲ್ಲಾ ವರ್ಗಿಸ್ ಸೂಚನೆ
ಪುತ್ತೂರು: ಪುತ್ತೂರು, ಬೆಳ್ತಂಗಡಿ, ಕಡಬ, ಸುಳ್ಯದಲ್ಲಿ ವಸತಿ ರಹಿತ ಮತ್ತು ನಿವೇಶನ ರಹಿತ ಕುಟುಂಬಗಳಿಗೆ ಸಂಬಂಧಿಸಿ ನಮ್ಮಲ್ಲಿ ಇರುವ, ಗುರುತಿಸಿದ ಜಾಗದಲ್ಲಿ ಆದ್ಯತಾವಾರು ಫಲಾನುಭವಿಗಳನ್ನು ಆಯ್ಕೆ ಮಾಡಿ ವಸತಿ ನೀಡುವ ವ್ಯವಸ್ಥೆ ಮಾಡುವಂತೆ ಪುತ್ತೂರು ಉಪವಿಭಾಗದ ಸಹಾಯಕ ಕಮಿಷನರ್ ಸ್ಟೆಲ್ಲಾ ವರ್ಗೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪುತ್ತೂರು ಉಪವಿಭಾಗಾಧಿಕಾರಿಗಳ ಕಚೇರಿಯ ನ್ಯಾಯಾಲಯ ಸಭಾಂಗಣದಲ್ಲಿ ಜೂ.25ರಂದು ನಡೆದ ಉಪವಿಭಾಗ ಮಟ್ಟದ ಎಸ್ಸಿ, ಎಸ್ಟಿ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆ ಹಾಗೂ ಉಪವಿಭಾಗ ಮಟ್ಟದ ಸಫಾಯಿ ಕರ್ಮಚಾರಿಗಳ ನಿಷೇಧ ಮತ್ತು ಪುನರ್ವಸತಿ ಸಮಿತಿ ಸಭೆಯಲ್ಲಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು.ವಿವಿಧ ಇಲಾಖೆಗಳಿಂದ ಮಾಹಿತಿ ಪಡೆದುಕೊಂಡ ಸ್ಟೆಲ್ಲಾ ವರ್ಗೀಸ್ ಅವರು, ಗ್ರಾಮೀಣ ಪ್ರದೇಶಗಳಲ್ಲಿ ವಸತಿ ಯೋಜನೆ ನೀಡುವ ಸಂದರ್ಭದಲ್ಲಿ ಗುಡ್ಡ ಪ್ರದೇಶಗಳಲ್ಲಿ ನೀಡಬೇಡಿ.ಪ್ರಕೃತಿ ವಿಕೋಪ ಇನ್ನಿತರ ಕಾರಣಗಳಿಂದಾಗಿ ಗುಡ್ಡಗಳು ಜರಿದು ಮನೆಗಳಿಗೆ ಅಪಾಯ ಸಂಭವಿಸಬಹುದು.ಈ ಹಿನ್ನೆಲೆಯಲ್ಲಿ ಉತ್ತಮ ಜಾಗವನ್ನು ಗುರುತಿಸಿ ಜಿ ಪ್ಲಸ್ 2 ಕಾಂಪ್ಲೆಕ್ಸ್ ಮಾದರಿಯಲ್ಲಿ ಫಲಾನುಭವಿಗಳಿಗೆ ಮನೆ ನಿರ್ಮಾಣ ಮಾಡಿಕೊಡಿ.ಇದರಿಂದಾಗಿ ಸಂಭಾವ್ಯ ಅಪಾಯಗಳನ್ನು ತಪ್ಪಿಸುವುದರ ಜೊತೆಗೆ ಸಣ್ಣ ಜಾಗದಲ್ಲಿ ಹೆಚ್ಚು ಮನೆಗಳನ್ನು ನಿರ್ಮಿಸಬಹುದು ಎಂದರು.
ಬೇರೆ ಯೋಜನೆಯಲ್ಲಿ ಒಗ್ಗೂಡಿಸಿ ಪ್ರಯತ್ನಿಸಿ:
ಎಸ್ಸಿ ಮತ್ತು ಎಸ್ಟಿಗಳ ವಸತಿ ವಿಚಾರದಲ್ಲಿ ಚರ್ಚೆ ನಡೆದು, ಅವರಿಗೆ ಅಂಬೇಡ್ಕರ್ ವಸತಿ ನಿಗಮದಿಂದ ನೀಡಲಾಗುತ್ತಿರುವ ಮನೆಗಳು ಇದೀಗ ಬರುತ್ತಿಲ್ಲ.ಬದಲಿಗೆ ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿಯಲ್ಲಿ ಮನೆ ನಿರ್ಮಿಸಲು ಸರ್ಕಾರದ ವತಿಯಿಂದ ಸಮೀಕ್ಷೆ ನಡೆಸಲಾಗುತ್ತಿದೆ.ಈ ಯೋಜನೆಯಡಿಯಲ್ಲಿ ಪ್ರತಿಯೊಂದು ಪಂಚಾಯತ್ಗಳಿಗೆ ಕನಿಷ್ಠ 20 ಮನೆಯಂತೆ ಅನುದಾನ ಸಿಗಬಹುದು.ಆದರೆ ಬಹುತೇಕರಲ್ಲಿ ಜಾಗವಿದ್ದರೂ ಅದರ ದಾಖಲಾತಿಗಳ ಸಮಸ್ಯೆಯಿದೆ ಎಂದು ಪುತ್ತೂರು,ಬೆಳ್ತಂಗಡಿ ಹಾಗೂ ಸುಳ್ಯದ ತಾ.ಪಂ ಕಾರ್ಯನಿರ್ವಾಹಕಾಽಕಾರಿಗಳು ತಿಳಿಸಿದರು.ಬೇರೆ ಇಲಾಖೆಗಳ ಯೋಜನೆಯಿದ್ದರೆ ಅದರೊಂದಿಗೆ ಒಗ್ಗೂಡಿಸುವ ಮೂಲಕ ಮನೆಯನ್ನು ನಿರ್ಮಿಸಲು ಪ್ರಯತ್ನ ನಡೆಸಿ ಎಂದು ಸಹಾಯಕ ಕಮಿಷನರ್ ಅವರು ಸಲಹೆ ನೀಡಿದರು. ಗ್ರಾಪಂಗಳಲ್ಲಿ ಉದ್ಯೋಗ ಖಾತ್ರಿ ಹೊರತು ಪಡಿಸಿ ಇತರ ಯಾವುದೇ ಯೋಜನೆಗಳಲ್ಲಿ ಒಗ್ಗೂಡಿಸುವಿಕೆಗೆ ಅವಕಾಶಗಳಿಲ್ಲ ಎಂದು ತಾ.ಪಂ.ಕಾರ್ಯನಿರ್ವಾಹಕಾಧಿಕಾರಿಗಳು ಸ್ಪಷ್ಟ ಪಡಿಸಿದರು.

ಬ್ರಹ್ಮನಗರದಲ್ಲಿ ಶಾಲೆಯಿಂದ ಹೊರಗುಳಿದ ಮಕ್ಕಳು:
ಪುತ್ತೂರು ನಗರದಲ್ಲಿ ಬ್ರಹ್ಮನಗರ ಎಂಬಲ್ಲಿನ ಎಸ್ಸಿ ಕಾಲೊನಿಯ ಸುಮಾರು 15ರಿಂದ 20 ಮಕ್ಕಳು ಶಾಲೆಯಿಂದ ಹೊರಗುಳಿದಿರುವ ಬಗ್ಗೆ ಡಿವೈಎಸ್ಪಿ ಅರುಣ್ ನಾಗೇಗೌಡ ಅವರು ಪ್ರಸ್ತಾಪಿಸಿದರು.ಈ ಬಗ್ಗೆ ಶಿಕ್ಷಣಾಧಿಕಾರಿಗಳು, ಸಮಾಜ ಕಲ್ಯಾಣ ಅಧಿಕಾರಿಗಳು ಜತೆಯಾಗಿ ಪೊಲೀಸ್ ಇಲಾಖೆಯ ಸಹಯೋಗದಲ್ಲಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ವರದಿ ಸಲ್ಲಿಸುವಂತೆ ಸಹಾಯಕ ಕಮಿಷನರ್ ಸೂಚನೆ ನೀಡಿದರು.
ಪೌರ ಕಾರ್ಮಿಕರಿಗೆ ಗುಣಮಟ್ಟದ ಆಹಾರ ಸಿಗಬೇಕು:
ನಗರಸಭಾ ವ್ಯಾಪ್ತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೌರ ಕಾರ್ಮಿಕರಿಗೆ ವಸತಿ ಯೋಜನೆಯನ್ನು ಕಲ್ಪಿಸುವ ಬಗ್ಗೆ ಪ್ರಸ್ತಾಪಿಸಿದ ಉಪವಿಭಾಗಾಽಕಾರಿ ಸ್ಟೆಲ್ಲಾ ವರ್ಗೀಸ್,ವಿವಿಧ ತಾಲೂಕುಗಳಲ್ಲಿನ ನಗರಾಡಳಿತದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೌರಕಾರ್ಮಿಕರ ಸ್ಥಿತಿಗತಿಯ ಬಗ್ಗೆ ಅಽಕಾರಿಗಳಿಂದ ವಿವರಣೆ ಪಡೆದುಕೊಂಡರು.ಪೌರಕಾರ್ಮಿಕರಿಗೆ ನೀಡಲಾಗುತ್ತಿರುವ ಊಟ-ಉಪಚಾರಗಳ ಪಟ್ಟಿಯನ್ನು ನೀಡುವಂತೆ ಸೂಚನೆ ನೀಡಿದ ಅವರು, ಪೌರಕಾರ್ಮಿಕರಿಗೆ ಊಟ ಮತ್ತು ಉಪಚಾರವನ್ನು ಹೋಟೆಲ್ಗಳಲ್ಲಿ ನೀಡುವ ಬದಲು ಸ್ಥಳೀಯ ಸ್ವ ಸಹಾಯ ಸಂಘಗಳ ಮೂಲಕ ವ್ಯವಸ್ಥೆಗೊಳಿಸಬೇಕು.ಇದರಿಂದಾಗಿ ಆ ಸಂಘಗಳಿಗೆ ಆದಾಯ ವೃದ್ಧಿ ಮಾಡಿದಂತಾಗುತ್ತದೆ.ಪ್ರತಿಯೊಬ್ಬ ಪೌರ ಕಾರ್ಮಿಕರಿಗೂ ಗುಣಮಟ್ಟದ ಆಹಾರ ದೊರಕುವಂತಾಗಬೇಕು.ಅದಕ್ಕಾಗಿ ಅಽಕಾರಿಗಳು ಮುತುವರ್ಜಿ ವಹಿಸಿ ವ್ಯವಸ್ಥೆ ಮಾಡಬೇಕು.ಮುಂದಿನ ಸಭೆಯ ಒಳಗಾಗಿ ಎನ್ಆರ್ಎಲ್ಎಂ ಜೊತೆಗೆ ಚರ್ಚಿಸಿ ಒಪ್ಪಂದ ನಡೆಸಿ ವರದಿ ಸಲ್ಲಿಸಬೇಕು ಎಂದು ಅಽಕಾರಿಗಳಿಗೆ ಸೂಚನೆ ನೀಡಿದರು.
ವಸತಿ ರಹಿತ ಪೌರ ಕಾರ್ಮಿಕರಿಗೂ ವಸತಿ ಸೌಲಭ್ಯ:
ಪೌರಕಾರ್ಮಿಕರಿಗೆ ನಿರಂತರ ಆರೋಗ್ಯ ತಪಾಸಣೆ ನಡೆಸುವುದರೊಂದಿಗೆ ಅವರಿಗೆ ಆರೋಗ್ಯ ವಿಮಾ ಯೋಜನೆ ಕಲ್ಪಿಸುವುದು, ಗುಣಮಟ್ಟದ ಸುರಕ್ಷಾ ವಸ್ತುಗಳನ್ನು ಒದಗಿಸುವಂತೆ ಸೂಚಿಸಿದ ಉಪವಿಭಾಗಾಽಕಾರಿಗಳು ವಸತಿ ರಹಿತ ಪೌರ ಕಾರ್ಮಿಕರಿಗೆ ವಸತಿ ವ್ಯವಸ್ಥೆಯನ್ನು ಮಾಡಬೇಕಾಗಿದೆ. ಇದಕ್ಕಾಗಿ ವಸತಿ ರಹಿತ ಫಲಾನುಭವಿಗಳ ಪಟ್ಟಿಯನ್ನು ತಯಾರಿಸಿ, ಡಿಪಿಆರ್ ಮಾಡಿ ವರದಿಯನ್ನು ರಾಜ್ಯಕ್ಕೆ ತಕ್ಷಣವೇ ಕಳುಹಿಸಿಕೊಡಬೇಕು.ಈ ನಿಟ್ಟಿನಲ್ಲಿ ಅಽಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.
ಸುಳ್ಯದಲ್ಲಿ ಮಾನಸಿಕ ಅಸ್ವಸ್ಥರಿಗೆ ಪರಿಹಾರ ನೀಡಿ:
ಚಾಲ್ಸೂರಿನಲ್ಲಿ ರಬ್ಬರ್ ಟ್ಯಾಪಿಂಗ್ ಕಾಲೋನಿಯಲ್ಲಿನ ಮನೆಯೊಂದರ ಸ್ಥಿತಿ ಉತ್ತಮವಾಗಿಲ್ಲ.ಸುಳ್ಯದಲ್ಲಿ ಮಾನಸಿಕ ಅಸ್ವಸ್ಥೆಯೊಬ್ಬರು ರಸ್ತೆಯಲ್ಲಿ ತಿರುಗಾಡುತ್ತಿದ್ದಾರೆ.ಅವರಿಗೆ ಸೂಕ್ತ ಪರಿಹಾರ ವ್ಯವಸ್ಥೆ ಕಲ್ಪಿಸುವಂತೆ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸದಸ್ಯ ಮಂಜುನಾಥ್ ಅವರು ಪ್ರಸ್ತಾಪಿಸಿದರು.ಈ ಕುರಿತು ಸುಳ್ಯ ಸಮಾಜ ಕಲ್ಯಾಣ ಇಲಾಖೆಯಿಂದ ಗಮನಿಸುವಂತೆ ಉಪವಿಭಾಗದಿಕಾರಿಯವರು ಸೂಚನೆ ನೀಡಿದರು.ರಚನಾ ಮಹಿಳಾ ಸ್ವಸಹಾಯ ಸಂಘಕ್ಕೆ ನಿವೇಶನಕ್ಕೆ ಎಲ್ಲಾ ಕಡತ ಸಿದ್ಧಗೊಂಡಿದೆ.ಅದು ತಾಲೂಕು ಕಚೇರಿಯಲ್ಲಿದೆ.ಆದಷ್ಟು ಬೇಗ ನಿವೇಶನಕ್ಕೆ ಅವಕಾಶ ಮಾಡಿಕೊಂಡುವಂತೆ ಸಮಿತಿ ಸದಸ್ಯ ಮಂಜುನಾಥ್ ಮನವಿ ಮಾಡಿದರು.ಪುತ್ತೂರು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ವಿನಯ ಕುಮಾರಿ ಪಾಲನಾ ವರದಿಯನ್ನು ಮಂಡಿಸಿದರು.ಪುತ್ತೂರು ಉಪವಿಭಾಗದ ಡಿವೈಎಸ್ಪಿ ಅರುಣ್ ನಾಗೇಗೌಡ,ಪುತ್ತೂರು ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿ ನವೀನ್ ಕುಮಾರ್ ಭಂಡಾರಿ, ಸುಳ್ಯ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ರಾಜಣ್ಣ, ಬೆಳ್ತಂಗಡಿ ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿ ಭವಾನಿಶಂಕರ್,ಪುತ್ತೂರು ನಗರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಜಾನ್ಸನ್ ಡಿ’ಸೋಜ, ಪುತ್ತೂರು ತಹಸೀಲ್ದಾರ್ ರಮೇಶ್, ಕಡಬ ತಹಸೀಲ್ದಾರ್ ಪ್ರಭಾಕರ ಖಜೂರೆ,ಕಡಬ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಲೀಲಾವತಿ, ಬೆಳ್ತಂಗಡಿ ತಹಸೀಲ್ದಾರ್ ಪೃಥ್ವಿ ಸಾನಿಕಂ,ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಧನಂಜಯ್, ಸುಳ್ಯ ಗ್ರೇಡ್-2 ತಹಸೀಲ್ದಾರ್ ಮಂಜುನಾಥ್, ಸುಳ್ಯ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಕೃಷ್ಣ, ಸುಳ್ಯ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಸುಧಾಕರ್,ಪುತ್ತೂರು ನಗರಸಭೆ ಕಾರ್ಯಪಾಲಕ ಅಭಿಯಂತರ ಶಬರಿನಾಥ್, ಬೆಳ್ತಂಗಡಿ ಪಟ್ಟಣ ಪಂಚಾಯತ್ ಮುಖ್ಯಾಽಕಾರಿ ರಾಜೇಶ್ ಕೆ, ಕಾರ್ಮಿಕ ಇಲಾಖಾ ಅಽಕಾರಿ ಗಣಪತಿ ಹೆಗ್ಡೆ, ಬೆಳ್ತಂಗಡಿ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ನಾಗೇಶ್ ಕದ್ರಿ, ಸಮಿತಿ ಸದಸ್ಯೆ
ನವ್ಯಶ್ರೀ ಮಹಿಳಾ ಮಂಡಲದ ಅಧ್ಯಕ್ಷೆ ಪ್ರೇಮಲತಾ ರಾವ್, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಉಮೇಶ್ ನಾಯಕ್ ಸಹಿತ ಹಲವಾರು ಮಂದಿ ಸಭೆಯಲ್ಲಿ ಪಾಲ್ಗೊಂಡಿದ್ದರು.
ಸರ್ಕ್ಯೂಲರ್ ಓದಿ ಸಭೆಗೆ ಬರಬೇಕು
ಸಭೆಯಲ್ಲಿ ಅಧಿಕಾರಿಗಳು ತಮ್ಮ ವ್ಯಾಪ್ತಿಯ ಕಾರ್ಯವೈಖರಿಯ ಕುರಿತು ಮಾಹಿತಿ ನೀಡಿದರು.ಆದರೆ ಯಾವುದೇ ದಾಖಲೆ ನೀಡಿಲ್ಲ.ನನಗೆ ಪಾಲನಾ ವರದಿಯಲ್ಲಿ ಮಾಹಿತಿ ನೀಡಿದರೆ ಸಾಲದು. ದೆಟ್ ಈಸ್ ನಾಟ್ ಪಾಲನಾ ವರದಿ.ಪ್ರೊಸೀಡಿಂಗ್ ಓದಿ.ನನಗೆ ವರದಿ ವಿದ್ ಫೋಟೋಗ್ರಾಫಿ ಬೇಕು.ಸಫಾಯಿ ಕರ್ಮಚಾರಿ ವಿಚಾರಕ್ಕೆ ಸಂಬಂಧಿಸಿ ಪೌರ ಕಾರ್ಮಿಕರಿಗೆ ಏನೆಲ್ಲ ಪರಿಕರ ನೀಡಿದ್ದೀರಿ.ಅವರಿಗೆ ಉಪಹಾರ ನೀಡಿದ ಮತ್ತು ಅವರ ವಿಶ್ರಾಂತಿಯ ಕೊಠಡಿಯ ಫೋಟೋಗಳು ಬೇಕು.ಮುಂದಿನ ಸಭೆಗೆ ಇವೆಲ್ಲ ಕಡ್ಡಾಯ.ಪುತೂರಿನಲ್ಲಿ ತಾಲೂಕು ಮಟ್ಟದ ಎಸ್ಸಿ ಎಸ್ಟಿ ಸಭೆಯನ್ನು ಮಾಡದಿರುವ ಕುರಿತು ದೂರುಗಳು ಬಂದಿವೆ.ತಕ್ಷಣ ಸಭೆ ಮಾಡುವಂತೆ ಉಪವಿಭಾಗಾಧಿಕಾರಿ ಸ್ಟೆಲ್ಲಾ ವರ್ಗೀಸ್ ಸಮಾಜ ಕಲ್ಯಾಣ ಇಲಾಖೆಯ ಅಽಕಾರಿಗಳಿಗೆ ಸೂಚನೆ ನೀಡಿದರು.