(ಜು.2) ಸುಳ್ಯಪದವು ಸರ್ವೋದಯ ವಿದ್ಯಾಸಂಸ್ಥೆಗಳ ಆಶ್ರಯದಲ್ಲಿ ಮಧುವನ ಸಿಂಚನ 2025

0

ಬಡಗನ್ನೂರು: ಸುಳ್ಯಪದವು ಸರ್ವೋದಯ ವಿದ್ಯಾಸಂಸ್ಥೆಗಳ ಆಶ್ರಯದಲ್ಲಿ ದಿವಂಗತ ಡಾ. ಕೆ. ಪಿ. ಬಾಲಕೃಷ್ಣ ರೈ ಮಧುವನ, ನೆಟ್ಟಣಿಗೆ ಇವರ ಸ್ಮರಣಾರ್ಥ ಶಾಲಾ ವಿದ್ಯಾರ್ಥಿಗಳು ಹಾಗೂ ಪೋಷಕರಿಗಾಗಿ ಮಧುವನ ಸಿಂಚನ 2025 ವಿಶೇಷ ಕಾರ್ಯಕ್ರಮ ಜು.2 ರಂದು ಬೆಳಗ್ಗೆ ವಿದ್ಯಾಸಂಸ್ಥೆಗಳ  ಸಭಾಭವನದಲ್ಲಿ ನಡೆಯಲಿದೆ

ಕಾರ್ಯಕ್ರಮವನ್ನು ಬೆಳ್ಳೂರು ಸೇವಾ ಸಹಕಾರಿ ಬ್ಯಾಂಕಿನ ಸಿಬ್ಬಂದಿ ಜಯಾನಂದ ಕುಳ ಉದ್ಘಾಟನೆ ಮಾಡಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುಳ್ಯಪದವು ಸರ್ವೋದಯ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಹೆಚ್.ಡಿ. ಶಿವರಾಮ್ ವಹಿಸಲಿದ್ದಾರೆ.

ಅತಿಥಿಗಳಾಗಿ, ನಿವೃತ್ತ ಮುಖ್ಯ ಗರುಗಳಾದ ಶ್ರೀನಿವಾಸ್ ಎಚ್. ಬಿ,  ರಾಜ್ಯ ಪ್ರಶಸ್ತಿ ವಿಜೇತ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ  ದಯಾನಂದ ರೈ ಕೋರ್ಮಂಡ, ನಿವೃತ್ತ ಬ್ಯಾಂಕ್ ಅಧಿಕಾರಿ ಜಯರಾಜ ರೈ, ಮಂಗಳೂರು ವಕೀಲರಾದ ಪೃಥ್ವಿರಾಜ್ ರೈ, ಭಾಗವಹಿಸಲಿದ್ದಾರೆ.

LEAVE A REPLY

Please enter your comment!
Please enter your name here