ಪರಸ್ಪರ ಸಂಬಂಧಗಳನ್ನು ಬೆಸೆಯುವಲ್ಲಿ ರೋಟರಿ ಅನನ್ಯ-ಎಸ್.ಕೆ ಸಂಜಯ್

ಪುತ್ತೂರು: ಮಿತ್ರತ್ವ, ಒಡನಾಟ ಹಾಗೂ ಸೇವೆಯಲ್ಲಿ ರೋಟರಿ ವಿಶ್ವದಾದ್ಯಂತ ಹೆಸರು ಗಳಿಸಿದೆ. ತನ್ನ ಸಮಾಜಮುಖಿ ಕಾರ್ಯಗಳಿಂದ ರೋಟರಿಯು ಮೌಲ್ಯಗಳನ್ನು ಎತ್ತಿ ಹಿಡಿಯುತ್ತದೆ. ವಿವಿಧತೆಯಲ್ಲಿ ಏಕತೆ ಎಂಬುದು ರೋಟರಿಯು ಹೊಂದಿದ್ದು ಪರಸ್ಪರ ಸಂಬಂಧಗಳನ್ನು ಬೆಸೆಯುವಲ್ಲಿ ರೋಟರಿ ಅನನ್ಯವಾಗಿದೆ ಎಂದು ಅಂತರರಾಷ್ಟ್ರೀಯ ರೋಟರಿ ಜಿಲ್ಲೆ 3181 ಇದರ ಗ್ರ್ಯಾಂಟ್ಸ್ ಸಬ್ ಕಮಿಟಿ ಚೇರ್ಮನ್ ಹಾಗೂ ಟಿ.ಆರ್.ಎಫ್ ಕ್ಯಾಡರ್ ಎಸ್.ಕೆ ಸಂಜಯ್ರವರು ಹೇಳಿದರು.

ಜೂ.28 ರಂದು ನೆಹರುನಗರದ ಸುದಾನ ವಿದ್ಯಾಸಂಸ್ಥೆಯ ಎಡ್ವರ್ಡ್ ಸಭಾಂಗಣದಲ್ಲಿ ನಡೆದ ರೋಟರಿ ಕ್ಲಬ್ ಪುತ್ತೂರು ಎಲೈಟ್ ಇದರ ನೂತನ ಪದಾಧಿಕಾರಿಗಳ ಪದ ಪ್ರದಾನ ಸಮಾರಂಭದಲ್ಲಿ ಅವರು ನೂತನ ಪದಾಧಿಕಾರಿಗಳಿಗೆ ಪದ ಪ್ರದಾನವನ್ನು ನೆರವೇರಿಸಿ ಮಾತನಾಡಿದರು.

ಮಾನವೀಯತೆಗೋಸ್ಕರ ಸೇವೆಗೈಯ್ದಾಗ ಗ್ಲೋಬಲ್ ಇಂಪ್ಯಾಕ್ಟ್-ಆರ್.ಎಸ್ ಶೆಟ್ಟಿಯಾನ್:
ಮುಖ್ಯ ಅತಿಥಿಯಾಗಿ ಮಂಗಳೂರಿನ ಅಥೆನಾ ಆಸ್ಪತ್ರೆಯ ಎಂ.ಡಿ, ಕರ್ನಾಟಕ ವೈಎಂಸಿಎ ಸೌತ್ ಸೆಂಟ್ರಲ್ ರೀಜನ್ ಚೇರ್ಮನ್ ಆರ್.ಎಸ್ ಶೆಟ್ಟಿಯಾನ್ರವರು ಮಾತನಾಡಿ, ರೋಟರಿ ಸದಸ್ಯರು ರೋಟರಿಯಲ್ಲಿನ ಸರ್ವಿಸ್ ಪ್ರಾಜೆಕ್ಟ್ಗಳಿಗೆ ಹೆಚ್ಚಿನ ಗಮನ ಹರಿಸುವ ಮೂಲಕ ಕ್ಲಬ್ ಗೌರವವನ್ನು ಎತ್ತಿ ಹಿಡಿಯಬೇಕು. ಸಮಾಜದಲ್ಲಿ ಮಾನವೀಯತೆಗೋಸ್ಕರ ಬದ್ಧತೆ, ಸಮರ್ಪಣಾಭಾವದಿಂದ ನಮ್ಮ ಸೇವೆ ಮುಂದುವರೆಸಿದಾಗ ಅದು ಗ್ಲೋಬಲ್ ಇಂಪ್ಯಾಕ್ಟ್ ಆಗುತ್ತದೆ ಎಂದರು.
ರೋಟರಿಯಲ್ಲಿ ಮಹಿಳಾ ಸದಸ್ಯತ್ವ ಹೆಚ್ಚಳವಾಗಲಿ-ಪ್ರಮೀಳಾ ರಾವ್:
ರೋಟರಿ ಅಸಿಸ್ಟೆಂಟ್ ಗವರ್ನರ್ ಪ್ರಮೀಳಾ ರಾವ್ರವರು ಕ್ಲಬ್ ಬುಲೆಟಿನ್ ಬಿಡುಗಡೆಗೊಳಿಸಿ ಮಾತನಾಡಿ, ಒಳ್ಳೆಯ ಕೆಲಸಕ್ಕಾಗಿ ಎಲ್ಲರೂ ಒಂದಾಗಬೇಕು ಎನ್ನುವ ಅಂತರರಾಷ್ಟ್ರೀಯ ರೋಟರಿ ಅಧ್ಯಕ್ಷರ ಧ್ಯೇಯದಂತೆ ಸೇವಾ ಚಟುವಟಿಕೆಗಳನ್ನು ಮಾಡುವ ಹಾಗೂ ರೋಟರಿ ಫೌಂಡೇಶನ್ಗೆ ಟಿ.ಆರ್.ಎಫ್ ದೇಣಿಗೆಯನ್ನು ನೀಡುವ ಮೂಲಕ ರೋಟರಿ ಸಂಸ್ಥೆಯನ್ನು ಬೆಳಗಿಸೋಣ. ರೋಟರಿಯಲ್ಲಿ ಸದಸ್ಯತನವನ್ನು ಅದರಲ್ಲೂ ಮಹಿಳಾ ಸದಸ್ಯತ್ವವನ್ನು ಹೆಚ್ಚಿಸುವಂತಾಗಬೇಕು ಎಂದರು.
ಮಹಿಳಾ ಪ್ರಧಾನ ರೋಟರಿ ಎಲೈಟ್ ಆಗಿದೆ-ಸುರೇಶ್ ಪಿ:
ರೋಟರಿ ವಲಯ ಸೇನಾನಿ ಸುರೇಶ್ ಪಿ ಮಾತನಾಡಿ, ರೋಟರಿ ಅಸಿಸ್ಟೆಂಟ್ ಗವರ್ನರ್ ಪ್ರಮೀಳಾ ರಾವ್ ಸೇರಿದಂತೆ ರೋಟರಿ ಎಲೈಟ್ ಪ್ರಸ್ತುತ ಪದಾಧಿಕಾರಿಗಳು ಕೂಡ ಮಹಿಳೆಯರು ಆಗಿದ್ದು ಕ್ಲಬ್ ಮಹಿಳಾ ಪ್ರಧಾನವಾಗಿದ್ದು ಕ್ಲಬ್ ಅಭಿವೃದ್ಧಿ ಪಥದತ್ತ ಮುನ್ನಡೆಯಲು ಎಲ್ಲರ ಸಹಕಾರವಿರಲಿ ಎಂದರು.
ತುಂಬು ಹೃದಯದ ಸಹಕಾರದಿಂದ ಕ್ಲಬ್ನ್ನು ಉತ್ತುಂಗಕ್ಕೇರಿಸೋಣ-ಅಶ್ವಿನ್ ಶೆಟ್ಟಿ:
ರೋಟರಿ ಕ್ಲಬ್ ಪುತ್ತೂರು ಎಲೈಟ್ ನಿರ್ಗಮಿತ ಅಧ್ಯಕ್ಷ ಅಶ್ವಿನ್ ಎಲ್.ಶೆಟ್ಟಿ ಮಾತನಾಡಿ, ತನ್ನ ಅಧ್ಯಕ್ಷಾವಧಿಯಲ್ಲಿ ಕ್ಲಬ್ ಸದಸ್ಯರ ಸಹಕಾರದಿಂದ ಕ್ಲಬ್ ಅನೇಕ ಚಟುವಟಿಕೆಗಳನ್ನು ಹಮ್ಮಿಕೊಂಡಿದ್ದು ಸದಸ್ಯರ ಸಹಕಾರಕ್ಕೆ ಕೃತಜ್ಞತೆಗಳು ಜೊತೆಗೆ ಮುಂದಿನ ಅಧ್ಯಕ್ಷರ ತಂಡಕ್ಕೆ ನಾವೆಲ್ಲಾ ತುಂಬು ಹೃದಯದಿಂದ ಸಹಕಾರ ನೀಡುವ ಮೂಲಕ ಕ್ಲಬ್ನ್ನು ಉತ್ತುಂಗಕ್ಕೆ ಏರಿಸೋಣ ಎಂದರು.

ಹೊಸ ಸದಸ್ಯೆ ಸೇರ್ಪಡೆ:
ಫ್ಯಾಷನ್ ಡಿಸೈನಿಂಗ್ನಲ್ಲಿ ಆಸಕ್ತಿ ಕ್ಷೇತ್ರವಾಗಿದ್ದು ಕ್ಲಬ್ ಸದಸ್ಯ ಸುಶಾಂತ್ ಹಾರ್ವಿನ್ರವರ ಪತ್ನಿ, ರೋಟರಿ ಕ್ಲಬ್ ಎಲೈಟ್ ಸ್ಥಾಪಕಾಧ್ಯಕ್ಷ ರೆ|ವಿಜಯ ಹಾರ್ವಿನ್ರವರ ಸೊಸೆ ಶ್ರೀಮತಿ ಸ್ವೀಡಲ್ ಪ್ರಿನ್ಸಿಯರವರನ್ನು ಕ್ಲಬ್ ಸರ್ವಿಸ್ನಡಿಯಲ್ಲಿ ಅಂತರರಾಷ್ಟ್ರೀಯ ರೋಟರಿ ಜಿಲ್ಲೆ 3181 ಇದರ ಗ್ರ್ಯಾಂಟ್ಸ್ ಸಬ್ ಕಮಿಟಿ ಚೇರ್ಮನ್ ಹಾಗೂ ಟಿ.ಆರ್.ಎಫ್ ಕ್ಯಾಡರ್ ಎಸ್.ಕೆ ಸಂಜಯ್ರವರು ರೋಟರಿ ಪಿನ್ ನೀಡಿ ಕ್ಲಬ್ಗೆ ಅಧಿಕೃತವಾಗಿ ಸೇರ್ಪಡೆಗೊಳಿಸಿದರು.
ಎಸೆಸ್ಸೆಲ್ಸಿ ಸಾಧಕರಿಗೆ ಗೌರವ:
ಪ್ರಸ್ತುತ ಸಾಲಿನ ಎಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್ ಪಡೆದ ಸುದಾನ ಪ್ರೌಢಶಾಲೆಯ ವಿದ್ಯಾರ್ಥಿಗಳಾದ ಜಿ.ಧನ್ವಿಕ(616), ಫಾತಿಮತ್ ರಿಂಸ(615), ಶರಲ್ ರೀಮಾ ಮಾರ್ಟಿಸ್(614), ಆಝಾ ಫಾತಿಮಾ ಎಸ್, ಅಯೆಶಾ ರೆಹಮಾನ್(613), ಆಮ್ನಾ ಸಾಹಿಸ್ತಾ(612), ಖದೀಜತ್ ಆಫ್ನಾ(610), ಫಾತಿಮಾ ಫಾರಿಜಾ(609), ಅನಿಕಾ ಯು(604), ಮಸೂಮ್ ಮೊಹಮ್ಮದ್(563), ರೋಟರಿ ಎಲೈಟ್ ಸದಸ್ಯ ರಂಜಿತ್ ಮಥಾಯಿಸ್ರವರ ಪುತ್ರ ನಿಕೋಲಸ್ ಮಥಾಯಿಸ್, ಸುಧೀರ್ ಬಿ.ರವರ ಪುತ್ರಿ ರಿಧಿಮಾ, ಅಬ್ದುಲ್ ರಜಾಕ್ ಕಬಕಕಾರ್ಸ್ ರವರ ಪುತ್ರಿ ಖದೀಜತ್ ರಿಧಾ, ಜೋಯೆಲ್ ಕುಟಿನ್ಹಾರವರ ಪುತ್ರ ಜೇಡನ್ ಕುಟಿನ್ಹಾರವರುಗಳನ್ನು ಗೌರವಿಸಲಾಯಿತು.ಯಿತು.
ಸೇವಾ ಕೊಡುಗೆ:
ಕಮ್ಯೂನಿಟಿ ಸರ್ವಿಸ್ ವತಿಯಿಂದ ಸೀಟಿಗುಡ್ಡೆ ಅಂಗನವಾಡಿ ಕೇಂದ್ರಕ್ಕೆ ಎಂಟು ಕುರ್ಚಿಗಳು, ಜಾರ್ ಮಿಕ್ಸಿ, ಪ್ಲೇಟ್ ಸ್ಟ್ಯಾಂಡ್ ಅನ್ನು ಅಂಗನವಾಡಿ ಕೇಂದ್ರದ ಶಿಕ್ಷಕಿ ಸಾವಿತ್ರಿರವರಿಗೆ ಈ ಸಂದರ್ಭದಲ್ಲಿ ಹಸ್ತಾಂತರಿಸಲಾಯಿತು.

ಗೌರವಾರ್ಪಣೆ:
ಕಳೆದ ಸಾಲಿನಲ್ಲಿ ವಲಯ ಐದರಲ್ಲಿ ವಲಯ ಸೇನಾನಿಯಾಗಿ ಕಾರ್ಯ ನಿರ್ವಹಿಸಿದ್ದ ಡಾ|ಪೀಟರ್ ವಿಲ್ಸನ್ ಪ್ರಭಾಕರ್, ರೋಟರಿ ಕ್ಲಬ್ ಪುತ್ತೂರು ಎಲೈಟ್ ಅನ್ನು ಸಮರ್ಥವಾಗಿ ಮುನ್ನೆಡೆಸಿದ ನಿಕಟಪೂರ್ವ ಅಧ್ಯಕ್ಷ ಅಶ್ವಿನ್ ಎಲ್.ಶೆಟ್ಟಿ, ಕಾರ್ಯದರ್ಶಿ ಮೌನೇಶ್ ವಿಶ್ವಕರ್ಮರವರುಗಳನ್ನು ನೂತನ ಅಧ್ಯಕ್ಷೆ ಸಿಲ್ವಿಯಾ ಡಿ’ಸೋಜರವರು ಶಾಲು ಹೊದಿಸಿ ಗೌರವಾರ್ಪಣೆ ಸಲ್ಲಿಸಿದರು.
ಅಭಿನಂದನೆ:
ಯೂತ್ ಸರ್ವಿಸ್ ವತಿಯಿಂದ ಸುದಾನ ಇಂಟರ್ಯಾಕ್ಟ್ ಕ್ಲಬ್ ಅಧ್ಯಕ್ಷೆ ಕು|ಸಿಯೋನಾ ಲೋಬೊ, ಕಾರ್ಯದರ್ಶಿ ಕು|ಮಾನ್ ಎಚ್.ಶೆಟ್ಟಿ, ಇಂಟರ್ಯಾಕ್ಟ್ ಚೇರ್ಮನ್ ಲವೀನಾ ಹನ್ಸ್, ರೋಟರ್ಯಾಕ್ಟ್ ಅಧ್ಯಕ್ಷ ಕು|ಶಿಫಾಲಿಕಾ, ಕಾರ್ಯದರ್ಶಿ ಕು|ರಿಯಾ ರಾಮ್, ಕೋಶಾಧಿಕಾರಿ ಕು|ಖದೀಜತ್ ರಿಧಾ ಕಬಕಕಾರ್ಸ್ರವರುಗಳನ್ನು ಅಭಿನಂದಿಸಲಾಯಿತು.
ಶಿಫಾಲಿಕಾ ಪ್ರಾರ್ಥಿಸಿದರು. ನಿರ್ಗಮನ ಅಧ್ಯಕ್ಷ ಅಶ್ವಿಕ್ ಎಲ್. ಶೆಟ್ಟಿ ಸ್ವಾಗತಿಸಿ, ನೂತನ ಕಾರ್ಯದರ್ಶಿ ಪದ್ಮಾವತಿ ಮೋಹನ್ ವಂದಿಸಿದರು. ನಿರ್ಗಮಿತ ಕಾರ್ಯದರ್ಶಿ ಮೌನೇಶ್ ವಿಶ್ವಕರ್ಮ ಕ್ಲಬ್ ವಾರ್ಷಿಕ ವರದಿ ಮಂಡಿಸಿ, ಪದ ಪ್ರದಾನ ಅಧಿಕಾರಿ ಹಾಗೂ ಮುಖ್ಯ ಅತಿಥಿಯ ಭಾವಚಿತ್ರವನ್ನು ಪೆನ್ಸಿಲ್ ಸ್ಕೆಚ್ ಮೂಲಕ ರಚಿಸಿದ ಕಲಾಕೃತಿಯನ್ನು ಈ ಸಂದರ್ಭದಲ್ಲಿ ಹಸ್ತಾಂತರಿಸಿದರು. ಪದ ಪ್ರದಾನ ಅಧಿಕಾರಿಯ ಪರಿಚಯವನ್ನು ಸುಪ್ರೀತ್ ಕೆ.ಸಿ, ಮುಖ್ಯ ಅತಿಥಿಗಳ ಪರಿಚಯವನ್ನು ಡಾ.ಪೀಟರ್ ವಿಲ್ಸನ್ ಪ್ರಭಾಕರ್, ಅಸಿಸ್ಟೆಂಟ್ ಗವರ್ನರ್ರವರ ಪರಿಚಯವನ್ನು ರಾಮ ಕೆ, ವಲಯ ಸೇನಾನಿರವರ ಪರಿಚಯವನ್ನು ದೇವರಾಜ್, ನೂತನ ಅಧ್ಯಕ್ಷ ಹಾಗೂ ಕಾರ್ಯದರ್ಶಿಯವರ ಪರಿಚಯವನ್ನು ಹರಿಣಿ ಪುತ್ತೂರಾಯರವರು ನೆರವೇರಿಸಿದರು. ಕ್ಲಬ್ ಸರ್ವಿಸ್ ನಿರ್ದೇಶಕ ಅಬ್ದುಲ್ ರಝಾಕ್ ಕಬಕಕಾರ್ಸ್, ವೊಕೇಶನಲ್ ಸರ್ವಿಸ್ ನಿರ್ದೇಶಕ ಮೌನೇಶ್ ವಿಶ್ವಕರ್ಮ, ಕಮ್ಯೂನಿಟಿ ಸರ್ವಿಸ್ ನಿರ್ದೇಶಕ ಮಾಧವ ಗೌಡ, ಯೂತ್ ಸರ್ವಿಸ್ ನಿರ್ದೇಶಕ ಸುಶಾಂತ್ ಹಾರ್ವಿನ್, ಇಂಟರ್ನ್ಯಾಷನಲ್ ಸರ್ವಿಸ್ ನಿರ್ದೇಶಕ ರಾಮ ಕೆ., ಸಾರ್ಜಂಟ್ ಎಟ್ ಆರ್ಮ್ಸ್ ಲವೀನಾ ಹನ್ಸ್, ಕ್ಲಬ್ ಲರ್ನಿಂಗ್ ಫೆಸಿಲಿಟೇಟರ್ ಆಸ್ಕರ್ ಆನಂದ್ರವರು ವಿವಿಧ ಕಾರ್ಯ ನಿರ್ವಹಿಸಿದರು. ನೂತನ ಕೋಶಾಧಿಕಾರಿ ಹರಿಣಿ ಪುತ್ತೂರಾಯ ಹಾಗೂ ಇಂಟರ್ನ್ಯಾಷನಲ್ ಸರ್ವಿಸ್ ನಿರ್ದೇಶಕ ರಾಮ ಕೆ. ಕಾರ್ಯಕ್ರಮ ನಿರೂಪಿಸಿದರು.

ಸ್ವಾರ್ಥರಹಿತ ಸೇವೆಯಿಂದ ಕನಸನ್ನು ನನಸಾಗಿಸೋಣ..
ಜವಾಬ್ದಾರಿ ಪ್ರಜ್ಞೆಯೊಂದಿಗೆ ಸಮುದಾಯದ ಜನಪರ ಸೇವೆಗೆ ರೋಟರಿ ಅಧ್ಯಕ್ಷೆಯಾಗಿ ಆಯ್ಕೆಯಾಗಿರುವುದಕ್ಕೆ ನನಗೆ ಹೆಮ್ಮೆ ಎನಿಸುತ್ತಿದೆ. ನಂಬಿಕೆ ಹಾಗೂ ವಿಶ್ವಾಸದ ಮೂಲಕ ಹಿರಿಯ ಸದಸ್ಯರು ಕ್ಲಬ್ ಅನ್ನು ಮುನ್ನೆಡೆಸಿದ್ದಾರೆ. ನಾವು ಕೂಡ ಸಮಗ್ರತೆ, ಸಹಾನುಭೂತಿ, ಸೃಜನಶೀಲತೆ ಹಾಗೂ ವೈಯಕ್ತಿಕ ಪಾಲ್ಗೊಳ್ಳುವಿಕೆಯಿಂದ ಕ್ಲಬ್ ಕಂಡಂತಹ ಕನಸನ್ನು ಸ್ವಾರ್ಥರಹಿತ ಸೇವೆಯೊಂದಿಗೆ ನನಸಾಗಿಸೋಣ. ನಾಯಕತ್ವ ಒಬ್ಬರಿಂದ ಸಾಧ್ಯವಿಲ್ಲ, ಎಲ್ಲರೂ ಒಟ್ಟಾಗಿ ಕಾರ್ಯ ನಿರ್ವಹಿಸಿದಾಗ ನಾಯಕತ್ವ ಸಾಧ್ಯವಾಗುವುದು.
-ಸಿಲ್ವಿಯಾ ಡಿ’ಸೋಜ, ನೂತನ ಅಧ್ಯಕ್ಷೆ, ರೋಟರಿ ಪುತ್ತೂರು ಎಲೈಟ್
ಸನ್ಮಾನ..
ಗ್ಲುಕೋಮಾ ಅನ್ನುವ ಕಾಯಿಲೆಯಿಂದ ಕಣ್ಣಿನ ದೃಷ್ಟಿಯನ್ನು ಕಳೆದುಕೊಂಡರೂ ಧೃತಿಗೆಡದೆ ದುಡಿಮೆಗಾಗಿ ಅಲೆದಾಡಿ ಇಂದು ಸುಮಾರು 50ಕ್ಕೂ ಮಿಕ್ಕಿ ಕುಟುಂಬಗಳಿಗೆ ಅನ್ನದಾತರಾಗಿದ್ದು, ಲ್ಯಾಡರ್ಮ್ಯಾನ್ ಆಗಿರುವ ಎಸ್ಆರ್ಕೆ ಲ್ಯಾಡರ್ಸ್ ಇದರ ಮಾಲಕ, ಕಡಬ ತಾಲೂಕಿನ ಕೊಲ ನಿವಾಸಿ ಕೇಶವ ಅಮೈರವರ ಸಾಧನೆಯನ್ನು ಗುರುತಿಸಿ ಕ್ಲಬ್ ವತಿಯಿಂದ ಶಾಲು ಹೊದಿಸಿ ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿದ ಕೇಶವ ಅಮೈರವರು ತನ್ನ ಸಾಧನೆಯನ್ನು ಗುರುತಿಸಿ ಸನ್ಮಾನಿಸಿದ್ದಕ್ಕೆ ಕೃತಜ್ಞತೆ ಸಲ್ಲಿಸಿದರು.

ಪದ ಪ್ರದಾನ…
ಕ್ಲಬ್ ನೂತನ ಅಧ್ಯಕ್ಷೆ ಸಿಲ್ವಿಯಾ ಡಿ’ಸೋಜ, ಕಾರ್ಯದರ್ಶಿ ಪದ್ಮಾವತಿ ಮೋಹನ್, ಕೋಶಾಧಿಕಾರಿ ಹರಿಣಿ ಕೆ.ಪುತ್ತೂರಾಯ, ಸಾರ್ಜಂಟ್ ಎಟ್ ಆಮ್ಸ್೯ ಲವೀನಾ ಹನ್ಸ್, ನಿಯೋಜಿತ ಅಧ್ಯಕ್ಷ ಕಾರ್ಯಪ್ಪ ವಿ.ಪಿ, ಉಪಾಧ್ಯಕ್ಷ ಮೊಹಮ್ಮದ್ ಶಾಕೀರ್, ಕ್ಲಬ್ ಸರ್ವೀಸ್ ನಿರ್ದೇಶಕ ಅಬ್ದುಲ್ ರಝಾಕ್ ಕಬಕಕಾರ್ಸ್, ವೊಕೇಶನಲ್ ಸರ್ವಿಸ್ ನಿರ್ದೇಶಕ ಮೌನೇಶ್ ವಿಶ್ವಕರ್ಮ, ಕಮ್ಯೂನಿಟಿ ಸರ್ವಿಸ್ ನಿರ್ದೇಶಕ ಮಾಧವ ಗೌಡ, ಇಂಟರ್ನ್ಯಾಷನಲ್ ಸರ್ವಿಸ್ ನಿರ್ದೇಶಕ ರಾಮ ಕೆ, ಯೂತ್ ಸರ್ವಿಸ್ ನಿರ್ದೇಶಕ ಸುಶಾಂತ್ ಹಾರ್ವಿನ್, ಬುಲೆಟಿನ್ ಎಡಿಟರ್ ಹಾಗೂ ಕ್ಲಬ್ ಸಲಹೆಗಾರ ಡಾ.ಪೀಟರ್ ವಿಲ್ಸನ್ ಪ್ರಭಾಕರ್, ಕ್ಲಬ್ ಲರ್ನಿಂಗ್ ಫೆಸಿಲಿಟೇಟರ್ ಆಸ್ಕರ್ ಆನಂದ್, ಚೇರ್ಮನ್ಗಳಾದ ಸ್ವೀಕೃತ್ ಆನಂದ್(ಮೆಂಬರ್ ಶಿಪ್), ತೋಮಸ್ ಫೆರ್ನಾಂಡೀಸ್(ಟಿ.ಆರ್.ಎಫ್), ಜಯಕುಮಾರ್ ನಾಯರ್(ಪಬ್ಲಿಕ್ ಇಮೇಜ್), ಶ್ರೇಯಸ್ ಆನಂದ್(ಸಿ.ಎಲ್.ಸಿ.ಸಿ), ಹರ್ಷ ಎ(ವಿನ್ಸ್), ಸುಧೀರ್ ಬಿ(ಜಿಲ್ಲಾ ಪ್ರಾಜೆಕ್ಟ್) , ಡಾ.ಸಚಿನ್ ಶಂಕರ್(ಪೋಲಿಯೋ ಪ್ಲಸ್), ಸುಪ್ರೀತ್ ಕೆ.ಸಿ(ಟೀಚ್), ರೆ|ವಿಜಯ ಹಾರ್ವಿನ್(ರೋಟರಿ ಎಥಿಕ್ಸ್), ಜೋನ್ಸನ್(ವಾಟರ್ ಸ್ಯಾನಿಟೇಶನ್), ದಿವಿನ್ ವರ್ಮ(ಕ್ರೀಡೆ), ಡಾ.ನಾಗಶ್ರೀ(ಆರೋಗ್ಯ ಜಾಗೃತಿ), ನಿಧೀಶ್ ಉಡುಪ(ಕೌಶಲ್ಯಾಭಿವೃದ್ಧಿ), ಶಶಿಧರ್ ರೈ(ಜಿಲ್ಲಾ ಸಾಂಸ್ಕೃತಿಕ), ಸಿಯಾಕ್(ರೋಟರ್ಯಾಕ್ಟ್ ಎಲೈಟ್), ನವೀನ್ ಹನ್ಸ್(ಇಂಟರ್ಯಾಕ್ಟ್ ಸುದಾನ), ರಂಜಿತ್ ಮಥಾಯಿಸ್(ವೆಬ್-ಸಾಮಾಜಿಕ ಜಾಲತಾಣ), ಜೋಯಲ್ ಕುಟಿನ್ಹಾ(ಫೆಲೋಶಿಪ್), ದೇವರಾಜ್(ರೋಟರ್ಯಾಕ್ಟ್ ಬೆಟ್ಟಂಪಾಡಿ), ಅಶ್ವಿನ್ ಎಲ್.ಶೆಟ್ಟಿ (ರೋಟರ್ಯಾಕ್ಟ್ ಸವಣೂರು), ಡಾ.ಕೀರ್ತನ್ ಕಜೆ(ಡೆಂಟಲ್ ಹೆಲ್ತ್), ಬಾಲು ನಾಯ್ಕ್/ದೇವರಾಜ್(ಸಾಂಸ್ಕೃತಿಕ), ಶಮೀರುದ್ದೀನ್(ಜಿಲ್ಲಾ ಸ್ಪೋರ್ಟ್ಸ್)ರವರುಗಳಿಗೆ ಅಂತರ್ರಾಷ್ಟ್ರೀಯ ರೋಟರಿ ಜಿಲ್ಲೆ 3181 ಇದರ ಗ್ರ್ಯಾಂಟ್ಸ್ ಸಬ್ ಕಮಿಟಿ ಚೇರ್ಮನ್ ಹಾಗೂ ಟಿ.ಆರ್.ಎಫ್ ಕ್ಯಾಡರ್ ಎಸ್.ಕೆ ಸಂಜಯ್ರವರು ಪದ ಪ್ರದಾನ ನೆರವೇರಿಸಿದರು.