ಅಧ್ಯಕ್ಷ:ಉಲ್ಲಾಸ್ ಪೈ,ಕಾರ್ಯದರ್ಶಿ:ಡಾ.ಪೊಡಿಯ,ಕೋಶಾಧಿಕಾರಿ:ಸ್ವಾತಿ ಮಲ್ಲಾರ
ಪುತ್ತೂರು: ಅಂತರ್ರಾಷ್ಟ್ರೀಯ ರೋಟರಿ ಜಿಲ್ಲೆ 3181, ವಲಯ ನಾಲ್ಕರ ರೋಟರಿ ಕ್ಲಬ್ ಪುತ್ತೂರು ಸಿಟಿ ಇದರ 2025-26ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆದಿದ್ದು, ನೂತನ ಅಧ್ಯಕ್ಷರಾಗಿ ಪೆರಾಜೆ ಉಲ್ಲಾಸ್ ಪೈ, ಕಾರ್ಯದರ್ಶಿಯಾಗಿ ಡಾ.ಪೊಡಿಯ, ಕೋಶಾಧಿಕಾರಿಯಾಗಿ ಸ್ವಾತಿ ಮಲ್ಲಾರರವರು ಆಯ್ಕೆಯಾಗಿದ್ದಾರೆ.
ಉಳಿದಂತೆ ಸಾರ್ಜಂಟ್ ಎಟ್ ಆರ್ಮ್ಸ್ ಸುಬ್ರಹ್ಮಣ್ಯ ಹೆಬ್ಬಾರ್, ನಿಯೋಜಿತ ಅಧ್ಯಕ್ಷ ಉಮೇಶ್ಚಂದ್ರ, ಉಪಾಧ್ಯಕ್ಷ ಮೋಹನ ಕೆ, ಜೊತೆ ಕಾರ್ಯದರ್ಶಿ ಕಿರಣ್ ಬಿ.ವಿ, ಕ್ಲಬ್ ಸರ್ವಿಸ್ ನಿರ್ದೇಶಕರಾಗಿ ಪ್ರಜ್ವಲ್ ರೈ, ವೊಕೇಶನಲ್ ಸರ್ವಿಸ್ ನಿರ್ದೇಶಕರಾಗಿ ಧರ್ಣಪ್ಪ ಗೌಡ, ಕಮ್ಯೂನಿಟಿ ಸರ್ವಿಸ್ ನಿರ್ದೇಶಕರಾಗಿ ಹರಿಣಿ ಸತೀಶ್, ಇಂಟರ್ನ್ಯಾಷನಲ್ ಸರ್ವಿಸ್ ನಿರ್ದೇಶಕರಾಗಿ ಜ್ಯೋ ಡಿ’ಸೋಜ, ಯೂತ್ ಸರ್ವಿಸ್ ನಿರ್ದೇಶಕರಾಗಿ ಡೆನ್ನಿಸ್ ಮಸ್ಕರೇನ್ಹಸ್, ಬುಲೆಟಿನ್ ಎಡಿಟರ್ ಆಗಿ ಮನೋಹರ್, ನಿಕಟಪೂರ್ವ ಅಧ್ಯಕ್ಷರಾಗಿ ಮೊಹಮ್ಮದ್ ಸಾಹೇಬ್, ಚೇರ್ಮ್ಯಾನ್ಗಳಾಗಿ ಡಾ.ಹರಿಕೃಷ್ಣ ಪಾಣಾಜೆ(ರೋಟರಿ ಫೌಂಡೇಶನ್), ಡಾ.ಅಜಿತ್ ಹೆಗ್ಡೆ(ಪೋಲಿಯೋ ಪ್ಲಸ್), ಶ್ಯಾಮಲಾ ಶೆಟ್ಟಿ(ಸಿಎಲ್ಸಿಸಿ), ಪದ್ಮನಾಭ ಶೆಟ್ಟಿ(ವಿನ್ಸ್), ದಯಾನಂದ ಕೆ.ಎಸ್(ವಾಟರ್ ಆಂಡ್ ಸ್ಯಾನಿಟೇಶನ್), ಸುರೇಂದ್ರ ಕಿಣಿ(ಜಿಲ್ಲಾ ಪ್ರಾಜೆಕ್ಟ್), ಜಯಕುಮಾರ್ ರೈ ಎಂ.ಆರ್(ಮೆಂಬರ್ಶಿಪ್ ಡೆವಲಪ್ಮೆಂಟ್), ಗುರುರಾಜ್ ಕೆ(ರೋಟರ್ಯಾಕ್ಟ್), ಲೀನಾ ಪಾಯಿಸ್(ಇಂಟರ್ಯಾಕ್ಟ್), ಜೋನ್ ಕುಟಿನ್ಹಾ(ಎಥಿಕ್ಸ್), ಮೋಹನ ಕೆ(ಪಬ್ಲಿಕ್ ರಿಲೇಶನ್), ಕೃಷ್ಣಮೋಹನ್ ಪಿ.ಎಸ್(ಕೆರಿಯರ್ ಗೈಡೆನ್ಸ್), ಲೋಹಿತ್(ಕ್ರೀಡೆ), ಪ್ರೇಮ್ ಕುಮಾರ್(ಸಾಂಸ್ಕೃತಿಕ), ರಾಮಚಂದ್ರ(ಸಾಮಾಜಿಕ ಜಾಲತಾಣ), ವಿಕ್ಟರ್ ಮಾರ್ಟಿಸ್(ಫೆಲೋಶಿಪ್), ಪ್ರಮೋದ್ ಮಲ್ಲಾರ(ವೆಬ್ಸೈಟ್)ರವರು ಆಯ್ಕೆಯಾಗಿದ್ದಾರೆ.
ನೂತನ ಅಧ್ಯಕ್ಷರ ಪರಿಚಯ:
ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಪೆರಾಜೆ ಉಲ್ಲಾಸ್ ಪೈರವರು ತನ್ನ ಪ್ರಾಥಮಿಕ ಶಿಕ್ಷಣವನ್ನು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಪ್ರೌಢ ಶಿಕ್ಷಣವನ್ನು ಸಂತ ಫಿಲೋಮಿನಾ ಪ್ರೌಢಶಾಲೆ, ಪಿಯುಸಿ ಶಿಕ್ಷಣವನ್ನು ಸರಕಾರಿ ಜೂನಿಯರ್ ಕಾಲೇಜಿನಲ್ಲಿ ಪೂರೈಸಿರುತ್ತಾರೆ. ಇವರು ಎಂ.ಟಿ. ರಸ್ತೆಯ ಯೆಳ್ತಿಮಾರ್ ಕಟ್ಟಡದಲ್ಲಿ ಸಾರ್ವಜನಿಕ ಎಸ್ಟಿಡಿ/ಐಎಸ್ಡಿ ಬೂತ್ ಹೊಂದಿದ್ದು ಎಲ್ಲರಿಗೂ ಚಿರಪರಿಚಿತರಾಗಿರುತ್ತಾರೆ. ಸಿಂಡಿಕೇಟ್ ಬ್ಯಾಂಕ್(ಈಗ ಕೆನರಾ ಬ್ಯಾಂಕ್)ನಲ್ಲಿ ಪಿಗ್ಮಿ ಡೆಪಾಸಿಟ್ ಸಂಗ್ರಹಕರಾಗಿ ಸುಮಾರು ೪೫ ವರ್ಷಗಳಿಂದ ಸುದೀರ್ಘ ಸೇವೆ ಸಲ್ಲಿಸುತ್ತಿದ್ದು ಜೊತೆಗೆ ಜೀವ ವಿಮಾ ಸಲಹೆಗಾರನಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. ಪುತ್ತೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದ ಇವರು ಪ್ರಸ್ತುತ ಕೋಶಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅಲ್ಲದೆ ನಗರಸಭೆಯಲ್ಲಿ ವರ್ತಕರ ಕುಂದುಕೊರತೆಗಳನ್ನು ಪ್ರಸ್ತಾಪಿಸಿ ಅಧಿಕಾರಿಗಳ ಗಮನ ಸೆಳೆದು ಪರಿಹಾರ ದೊರಕಿಸಿಕೊಡುವಲ್ಲಿ ಯಶಸ್ವಿಯಾಗಿರುತ್ತಾರೆ. ಸಂತ ವಿಕ್ಟರ್ ಆಂಗ್ಲ ಮಾಧ್ಯಮ ಶಾಲೆಯ ಬೆಳ್ಳಿಹಬ್ಬದ ರಕ್ಷಕ-ಶಿಕ್ಷಕ ಸಂಘದ ಉಪಾಧ್ಯಕ್ಷರಾಗಿ, ಸಂತ ವಿಕ್ಟರ್ ಬಾಲಿಕಾ ಪ್ರೌಢಶಾಲೆಯಲ್ಲಿ ಸ್ಕೂಲ್ ಬೆಟರ್ಮೆಂಟ್ನ ಉಪಾಧ್ಯಕ್ಷರಾಗಿ, ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಪೋಷಕರ ಸದಸ್ಯನಾಗಿಯೂ ಸೇವೆ ಸಲ್ಲಿಸಿರುತ್ತಾರೆ. ೨೦೨೨-೨೩ರಲ್ಲಿ ರೋಟರಿ ಕ್ಲಬ್ ಪುತ್ತೂರು ಸಿಟಿಯ ಸದಸ್ಯರಾಗಿ ಸೇರಿದ ಇವರು ರೋಟರಿ ಕ್ಲಬ್ ಪುತ್ತೂರು ಸಿಟಿ ಚಾರಿಟೇಬಲ್ ಟ್ರಸ್ಟ್ ಮೂಲಕ ನಡೆಸುತ್ತಿರುವ ವಿದ್ಯಾಜ್ಯೋತಿ ಎಲ್ಕೆಜಿ/ಯುಕೆಜಿ ಯಶಸ್ವಿಗಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ.
ನೂತನ ಕಾರ್ಯದರ್ಶಿ ಪರಿಚಯ:
ನೂತನ ಕಾರ್ಯದರ್ಶಿಯಾಗಿ ಆಯ್ಕೆಯಾದ ಡಾ.ಪೊಡಿಯರವರು ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಕುಟ್ರುಪಾಡಿ ಗ್ರಾಮದ ಬಜೆತ್ತಡ್ಕ ನಿವಾಸಿ. ಇವರು ತನ್ನ ಪ್ರಾಥಮಿಕ ವಿದ್ಯಾಭ್ಯಾಸವನ್ನು ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಕಡಬ, ಹೈಸ್ಕೂಲ್ ವಿದ್ಯಾಭ್ಯಾಸವನ್ನು ಸರಕಾರಿ ಪ್ರೌಢಶಾಲೆ ಕಡಬ, ಪದವಿ ಪೂರ್ವ ವಿದ್ಯಾಭ್ಯಾಸವನ್ನು ಶ್ರೀ ಸುಬ್ರಹ್ಮಣ್ಯೇಶ್ವರ ಪದವಿ ಪೂರ್ವ ಕಾಲೇಜು ಸುಬ್ರಹ್ಮಣ್ಯ ಮತ್ತು ಪದವಿಯನ್ನು ಶ್ರೀ ಕುಕ್ಕೆ ಸುಬ್ರಹ್ಮಣ್ಯೇಶ್ವರ ಮಹಾ ವಿದ್ಯಾಲಯ ಸುಬ್ರಹ್ಮಣ್ಯ ಇಲ್ಲಿ ಪಡೆದಿರುತ್ತಾರೆ. 1998ರಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದಿಂದ ದೈಹಿಕ ಶಿಕ್ಷಣ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಮತ್ತು 2015ಲ್ಲಿ ಡಾಕ್ಟರೇಟ್ ಪದವಿ ಹಾಗೂ 2010ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದಿಂದ ರಾಜ್ಯಶಾಸ್ತ್ರ ಎಂ.ಎ. ಪದವಿಯನ್ನು ಪಡೆದಿರುತ್ತಾರೆ. 1998ರಲ್ಲಿ ಶ್ರೀ ನಾರಾಯಣಗುರು ಪದವಿ ಕಾಲೇಜು ಕುದ್ರೋಳಿ ಇಲ್ಲಿಂದ ಸೇವಾ ವೃತ್ತಿ ಆರಂಭಿಸಿದ ಇವರು 1999-2000ರಲ್ಲಿ ಕ್ನಾನಾಯಜ್ಯೋತಿ ಆಂಗ್ಲ ಮಾಧ್ಯಮ ಶಾಲೆ ಕಡಬ, 2000ರಿಂದ 2004ರ ವರೆಗೆ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿರುತ್ತಾರೆ. 2004ರಲ್ಲಿ ಕರ್ನಾಟಕ ನಾಗರಿಕ ಸೇವೆಯನ್ನು ಡಾ.ಕೆ.ಶಿವರಾಮ ಕಾರಂತ ಸರಕಾರಿ ಪ್ರಥಮ ದರ್ಜೆ ಕಾಲೇಜು ಬೆಳ್ಳಾರೆ ಸುಳ್ಯ ತಾಲೂಕು ಇಲ್ಲಿಂದ ಆರಂಭಸಿ ಪ್ರಸ್ತುತ ಸರಕಾರಿ ಪ್ರಥಮ ದರ್ಜೆ ಕಾಲೇಜು ಬೆಟ್ಟಂಪಾಡಿ ಇಲ್ಲಿ ದೈಹಿಕ ಶಿಕ್ಷಣ ನಿರ್ದೇಶಕರು ಪ್ರೊಫೆಸರ್ ಗ್ರೇಡ್ ಹುದ್ದೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ನೂತನ ಕೋಶಾಧಿಕಾರಿ ಪರಿಚಯ:
ನೂತನ ಕೋಶಾಧಿಕಾರಿಯಾಗಿ ಆಯ್ಕೆಯಾದ ಪ್ರಮೋದ್ ಮಲ್ಲಾರರವರ ಪತ್ನಿ ಸ್ವಾತಿ ಮಲ್ಲಾರರವರು ತಮ್ಮ ಪ್ರಾಥಮಿಕ ವಿದ್ಯಾಭ್ಯಾಸವನ್ನು ಸುಳ್ಯ ತಾಲೂಕಿನ ಬಳ್ಪ ಶಾಲೆಯಲ್ಲಿ, ಪ್ರೌಢಶಿಕ್ಷಣವನ್ನು ಪಂಜದಲ್ಲಿ, ಪದವಿಪೂರ್ವ ಶಿಕ್ಷಣವನ್ನು ವಿವೇಕಾನಂದ ಮಹಾವಿದ್ಯಾಲಯದಲ್ಲಿ ಪೂರೈಸಿರುತ್ತಾರೆ. ಪುತ್ತೂರಿನಲ್ಲಿ ಯಶಸ್ವಿ ಜೀವವಿಮಾ ಸಲಹೆಗಾರರಾಗಿರುವ ಸ್ವಾತಿ ಮಲ್ಲಾರರವರು 2003ರಿಂದ ಜೀವವಿಮಾ ಪ್ರತಿನಿಧಿಯಾಗಿ ನೇಮಕಗೊಂಡು 2008ರಿಂದ ಎಲ್ಐಸಿಯ ಪ್ರತಿಷ್ಠಿತ ಮುಖ್ಯ ಜೀವವಿಮಾ ಸಲಹೆಗಾರರಾಗಿದ್ದು, ಇವರ ಬಳಗದಲ್ಲಿ ಪ್ರಸ್ತುತ 30 ಜನ ಪ್ರತಿನಿಧಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಎಲ್ಐಸಿಯಲ್ಲಿ ಸಾಧನೆಗಳನ್ನು ಮಾಡಿರುವ ಇವರು ಅಮೇರಿಕಾದಲ್ಲಿ ನಡೆಯುವ ಎಂಡಿಆರ್ಟಿ ಕಾನ್ಫರೆನ್ಸ್ಗೆ ಆಯ್ಕೆಯಾಗಿದ್ದು ಮಾತ್ರವಲ್ಲದೆ ಎಲ್ಐಸಿಯ ಡೈಮಂಡ್ ಬ್ರಿಗೇಡ್ ಆಗಿರುತ್ತಾರೆ.
ಜು.1:ಪದ ಪ್ರದಾನ..
ಜು.1 ರಂದು ಸಂಜೆ ರೋಟರಿ ಮನೀಷಾ ಸಭಾಂಗಣದಲ್ಲಿ ನೂತನ ಪದಾಧಿಕಾರಿಗಳ ಪದ ಪ್ರದಾನ ಸಮಾರಂಭವು ಜರಗಲಿದ್ದು, ಅಂತರ್ರಾಷ್ಟ್ರೀಯ ರೋಟರಿ ಜಿಲ್ಲೆ ೩೧೮೧ ಇದರ ನಿಕಟಪೂರ್ವ ಜಿಲ್ಲಾ ಗವರ್ನರ್ ವಿಕ್ರಂದತ್ತರವರು ನೂತನ ಪದಾಧಿಕಾರಿಗಳಿಗೆ ಪದ ಪ್ರದಾನವನ್ನು ನೆರವೇರಿಸಲಿದ್ದಾರೆ. ರೋಟರಿ ಅಸಿಸ್ಟೆಂಟ್ ಗವರ್ನರ್ ಡಾ.ರಾಜಾರಾಂ ಕೆ.ಬಿ, ವಲಯ ಸೇನಾನಿ ಹರೀಶ್ ಸಿ.ಎಚ್ರವರು ಈ ಸಂದರ್ಭದಲ್ಲಿ ಭಾಗವಹಿಸಲಿದ್ದಾರೆ ಎಂದು ನಿಕಟಪೂರ್ವ ಅಧ್ಯಕ್ಷ ಮೊಹಮ್ಮದ್ ಸಾಹೇಬ್, ಕಾರ್ಯದರ್ಶಿ ರಾಮಚಂದ್ರರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.