ಪುತ್ತೂರು : ಶಾಲಾ ಶಿಕ್ಷಣ ಇಲಾಖೆಯ ವತಿಯಿಂದ ಆ. 7ರಂದು ವೀರಮಂಗಲ ಶಾಲೆಯಲ್ಲಿ ನಡೆದ ಸವಣೂರು ವಲಯ ಮಟ್ಟದ ಚೆಸ್ ಸ್ಪರ್ಧೆಯಲ್ಲಿ ಭಾಗವಹಿಸಿರುವ ಪುರುಷರಕಟ್ಟೆ ಸರಸ್ವತಿ ವಿದ್ಯಾ ಮಂದಿರದ 10ನೇ ತರಗತಿಯ ಮೋಕ್ಷಿತ್ ವಿ ಬಿ ದ್ವಿತೀಯ ಸ್ಥಾನ (ಶಾಂತಿಗೋಡು ಬೊಳ್ಳಮೆ ನಿವಾಸಿ ವೆಂಕಟರಮಣ ಮತ್ತು ಕಮಲಾ ಇವರ ಪುತ್ರ )ಮತ್ತು 6ನೇ ತರಗತಿಯ ತೇಜಸ್ ತೃತೀಯ ಸ್ಥಾನ (ಎಲಿಕ ನಿವಾಸಿ ಯಶವಂತ ವೈ ಮತ್ತು ರೇಖಾ ನಾಯಕ್ ಪುತ್ರ )ಪಡೆದು ತಾಲೂಕು ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿರುತ್ತಾರೆ ಎಂದು ಸಂಸ್ಥೆಯ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.