ಇಂದು ನಡೆಯುತ್ತಿದೆ ಕಡಬ ಪಟ್ಟಣ ಪಂಚಾಯತ್ ಚುನಾವಣೆ

0

ಕಡಬ: ಇಲ್ಲಿನ ಪಟ್ಟಣ ಪಂಚಾಯತ್‌ಗೆ ಇಂದು ಚುನಾವಣೆ ನಡೆಯುತ್ತಿದ್ದು, ಮತದಾನ ಪ್ರಕ್ರಿಯೇ ಆರಂಭಗೊಂಡಿದೆ. 13 ವಾರ್ಡ್ಗಳಲ್ಲಿ 32 ಅಭ್ಯರ್ಥಿಗಳು ಅಂತಿಮ ಕಣದಲ್ಲಿದ್ದಾರೆ. 13 ವಾರ್ಡುಗಳಲ್ಲಿ 8,334 ಅರ್ಹ ಮತದಾರರಿದ್ದು ಇದರಲ್ಲಿ 4018 ಪುರುಷ ಹಾಗೂ 4318 ಮಹಿಳಾ ಮತದಾರರಿದ್ದಾರೆ. ಎಲ್ಲಾ ಮತಗಟ್ಟೆಯಲ್ಲೂ ಪೊಲೀಸ್ ಬಂದೋಬಸ್ತು ಏರ್ಪಡಿಸಲಾಗಿದೆ.


ಕಣದಲ್ಲಿರುವ ಅಭ್ಯರ್ಥಿಗಳ ವಿವರ:
ವಾರ್ಡ್ 1-ಕಳಾರ:
ಹಿಂದುಳಿದ ವರ್ಗ ಎ’ ಮಹಿಳೆಗೆ ಮೀಸಲಾದ ಕಳಾರ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ತಮನ್ನಾ ಜಬೀನ್, ಬಿಜೆಪಿಯಿಂದ ಪ್ರೇಮಾ, ಎಸ್‌ಡಿಪಿಐನಿಂದ ಸಮೀರಾ ಹಾರಿಸ್, ಪಕ್ಷೇತರರಾಗಿ ಜೈನಾಬಿ. ಸ್ಪರ್ಧಿಸುತ್ತಿದ್ದು, ಇಲ್ಲಿಗೆ ಕಳಾರ ಶಾಲೆಯಲ್ಲಿ ಮತಗಟ್ಟೆಯಾಗಿದ್ದು ಈ ವಾರ್ಡಿನಲ್ಲಿ 252 ಪುರುಷ, 288 ಮಹಿಳಾ ಮತದಾರರಿದ್ದಾರೆ.

ವಾರ್ಡ್ 2-ಕೋಡಿಬೈಲು: ಪರಿಶಿಷ್ಠ ಜಾತಿ ಮಹಿಳೆಗೆ ಮೀಸಲಾದ ಕೋಡಿಬೈಲು ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಮೋಹಿನಿ, ಬಿಜೆಪಿಯಿಂದ ಕುಸುಮ ಅಂಗಡಿಮನೆ ಸ್ಪರ್ಧಿಸುತ್ತಿದ್ದು ಈ ವಾರ್ಡ್ಗೆ ಸ.ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮತಗಟ್ಟೆಯಿದ್ದು ಇಲ್ಲಿ 221 ಪುರುಷ-258 ಮಹಿಳಾ ಮತದಾರರಿದ್ದಾರೆ.

ವಾರ್ಡ್ 3-ಪನ್ಯ: ಸಾಮಾನ್ಯ ಅಭ್ಯರ್ಥಿಗೆ ಮೀಸಲಾದ ಪನ್ಯ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಮಹಮ್ಮದ್ ಪೈಝಲ್, ಬಿಜೆಪಿಯಿಂದ ಆದಂ ಕುಂಡೋಳಿ, ಎಸ್‌ಡಿಪಿಐನಿಂದ ಹಾರಿಸ್ ಕಳಾರ, ಮುಸ್ಲಿಂ ಲೀಗ್‌ನಿಂದ ಕೆ. ಅಬ್ದುಲ್ ರಝಾಕ್ ಸ್ಪಂಧಿಸುತ್ತಿದ್ದು, ಈ ವಾರ್ಡ್ಗೆ ಸ.ಹಿ.ಪ್ರಾ.ಶಾಲೆ ಪನ್ಯ ಗುರಿಯಡ್ಕ ಮತಗಟ್ಟೆಯಾಗಿದ್ದು, ಇಲ್ಲಿ 248 ಪುರುಷ ಹಾಗೂ 261 ಮಹಿಳಾ ಮತದಾರರಿದ್ದಾರೆ.

ವಾರ್ಡ್ 4-ಬೆದ್ರಾಜೆ: ಸಾಮಾನ್ಯ ಮೀಸಲು ಬೆದ್ರಾಜೆ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಸೈಮನ್ ಸಿ.ಜೆ, ಬಿಜೆಪಿಯಿಂದ ಅಶೋಕ್ ಕುಮಾರ್ ಪಿ. ಸ್ಪರ್ಧಿಸುತ್ತಿದ್ದು, ಈ ವಾರ್ಡ್ಗೆ ಸಂತ ಜೋಕಿಮ್ ಹಿ.ಪ್ರಾ.ಶಾಲೆ ಕಡಬ ಮತಗಟ್ಟೆಯಾಗಿದ್ದು, ಇಲ್ಲಿ 215 ಪುರುಷ ಹಾಗೂ 256 ಮಹಿಳಾ ಮತದಾರರಿದ್ದಾರೆ.

ವಾರ್ಡ್ 5-ಮಾಲೇಶ್ವರ: ಹಿಂದುಳಿದ ವರ್ಗಎ’ಗೆ ಮೀಸಲಾದ ಮಾಲೇಶ್ವರ ಕ್ಷೇತ್ರದಲ್ಲಿ ಬಿಜೆಪಿಯಿಂದ ಪ್ರಕಾಶ್ ಎನ್.ಕೆ., ಕಾಂಗ್ರೆಸ್‌ನಿಂದ ಹನೀಫ್ ಕೆ.ಎಂ. ಸ್ಪರ್ಧಿಸುತ್ತಿದ್ದು, ಈ ವಾರ್ಡ್ಗೆ ಮಾಲೇಶ್ವರ ಅಂಗನವಾಡಿ ಕೇಂದ್ರ ಮತಗಟ್ಟೆಯಾಗಿದ್ದು, ಇಲ್ಲಿ 296 ಪುರುಷ, 341 ಮಹಿಳಾ ಮತದಾರರಿದ್ದಾರೆ.


ವಾರ್ಡ್ 6-ಕಡಬ: ಸಾಮಾನ್ಯ ಮಹಿಳೆಗೆ ಮೀಸಲಾದ ಕಡಬ ಕ್ಷೇತ್ರಕ್ಕೆ ಕಾಂಗ್ರೆಸ್‌ನಿಂದ ನೀಲಾವತಿ ಶಿವರಾಮ್, ಬಿಜೆಪಿಯಿಂದ ಪ್ರೇಮಾ, ಪಕ್ಷೇತರರಾಗಿ ಆಲೀಸ್ ಚಾಕೊ, ಎಸ್‌ಡಿಪಿಐನಿಂದ ಸ್ವಾಲಿಯತ್ ಜಸೀರಾ ಸ್ಪರ್ಧಿಸುತ್ತಿದ್ದು, ಈ ವಾರ್ಡ್ಗೆ ಅಂಬೇಡ್ಕರ್ ಭವನ ಮತಗಟ್ಟೆಯಾಗಿದ್ದು, ಇಲ್ಲಿ 401 ಪುರುಷ ಹಾಗೂ 396 ಮಹಿಳಾ ಮತದಾರರಿದ್ದಾರೆ.


ವಾರ್ಡ್ 7-ಪಣೆಮಜಲು: ಹಿಂದುಳಿದ ವರ್ಗ ಬಿ’ಗೆ ಮೀಸಲಾದ ಪಣೆಮಜಲು ಕ್ಷೇತ್ರದಲ್ಲಿ ಬಿಜೆಪಿಯಿಂದ ಗಣೇಶ್ ಗೌಡ, ಕಾಂಗ್ರೆಸ್‌ನಿಂದ ರೋಹಿತ್ ಗೌಡ ಸ್ಪರ್ಧಿಸುತ್ತಿದ್ದು, ಈ ವಾರ್ಡ್ಗೆ ಸರಕಾರಿ ಪದವಿ ಪೂರ್ವ ಕಾಲೇಜು ಮತಗಟ್ಟೆಯಾಗಿದ್ದು, ಇಲ್ಲಿ 350 ಪುರುಷ, 410 ಮಹಿಳಾ ಮತದಾರರಿದ್ದಾರೆ.

ವಾರ್ಡ್ 8-ಪಿಜಕ್ಕಳ: ಸಾಮಾನ್ಯ ಮೀಸಲು ಪಿಜಕ್ಕಳ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಅಶ್ರ ಶೇಡಿಗುಂಡಿ, ಬಿಜೆಪಿಯಿಂದ ದಯಾನಂದ ಗೌಡ ಪಿ. ಸ್ಪರ್ಧಿಸುತ್ತಿದ್ದು, ಈ ವಾರ್ಡ್ಗೆ ಹಿ. ಪ್ರಾ.ಶಾಲೆ ಪಿಜಕಳ ಮತಗಟ್ಟೆಯಾಗಿದ್ದು ಇಲ್ಲಿ 323 ಪುರುಷ, 384 ಮಹಿಳಾ ಮತದಾರರಿದ್ದಾರೆ.

ವಾರ್ಡ್ 9-ಮೂರಾಜೆ: ಹಿಂದುಳಿದ ವರ್ಗಎ’ಗೆ ಮೀಸಲಾದ ಮೂರಾಜೆ ಕ್ಷೇತ್ರದಲ್ಲಿ ಬಿಜೆಪಿಯಿಂದ ಕುಂಞಣ್ಣ ಕುದ್ರಡ್ಕ, ಕಾಂಗ್ರೆಸ್‌ನಿಂದ ಕೃಷ್ಣಪ್ಪ ಪೂಜಾರಿ ಸ್ಪರ್ಧಿಸುತ್ತಿದ್ದು, ಈ ವಾರ್ಡ್ಗೆ ಕಡಬ ಸ.ಪ.ಪೂರ್ವ ಕಾಲೇಜು(ಎಡಭಾಗ) ಮತಗಟ್ಟೆಯಾಗಿದ್ದು ಇಲ್ಲಿ 287 ಪುರುಷ, 320 ಮಹಿಳಾ ಮತದಾರರಿದ್ದಾರೆ.


ವಾರ್ಡ್ 10-ದೊಡ್ಡಕೊಪ್ಪ: ಸಾಮಾನ್ಯ ಮಹಿಳೆಗೆ ಮಿಸಲಾದ ದೊಡ್ಡಕೊಪ್ಪ ಕ್ಷೇತ್ರದಲ್ಲಿ ಬಿಜೆಪಿಯಿಂದ ಗುಣವತಿರಘುರಾಮ, ಕಾಂಗ್ರೆಸ್‌ನಿಂದ ತುಳಸಿ ಸ್ಪರ್ಧಿಸುತ್ತಿದ್ದು ಈ ವಾರ್ಡ್ಗೆ ಕಲ್ಲಂತ್ತಡ್ಕ ಅಂಗನವಾಡಿ ಕೇಂದ್ರ ಮತಗಟ್ಟೆಯಾಗಿದ್ದು, ಇಲ್ಲಿ 415 ಪುರುಷ, 377 ಮಹಿಳಾ ಮತದಾರರಿದ್ದಾರೆ.


ವಾರ್ಡ್ 11-ಕೋಡಿಂಬಾಳ: ಸಾಮಾನ್ಯ ಮಹಿಳೆಗೆ ಮೀಸಲಾದ ಕೋಡಿಂಬಾಳ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಜ್ಯೋತಿ ಡಿ.ಕೋಲ್ಪೆ, ಬಿಜೆಪಿಯಿಂದ ಅಕ್ಷತಾ ಬಾಲಕೃಷ್ಣ ಗೌಡ ಸ್ಪರ್ಧಿಸುತ್ತಿದ್ದು ಈ ವಾರ್ಡ್ಗೆ ಓಂತ್ರಡ್ಕ ಹಿ.ಪ್ರಾ,ಶಾಲೆ ಮತಗಟ್ಟೆಯಾಗಿದ್ದು, ಇಲ್ಲಿ 318 ಪುರುಷ, 316 ಮಹಿಳಾ ಮತದಾರರಿದ್ದಾರೆ.


ವಾರ್ಡ್ 12-ಮಜ್ಜಾರು: ಪರಿಶಿಷ್ಠ ಜಾತಿ ಅಭ್ಯರ್ಥಿಗೆ ಮೀಸಲಾದ ಮಜ್ಜಾರು ಕ್ಷೇತ್ರದಲ್ಲಿ ಬಿಜೆಪಿಯಿಂದ ಮೋಹನ, ಕಾಂಗ್ರೆಸ್‌ನಿಂದ ಉಮೇಶ್ ಮಡ್ಯಡ್ಕ ಸ್ಪರ್ಧಿಸುತ್ತಿದ್ದು, ಈ ವಾರ್ಡ್ಗೆ ಹಿ.ಪ್ರಾ,ಶಾಲೆ ಕೋಡಿಂಬಾಳ ಮತಗಟ್ಟೆಯಾಗಿದ್ದು ಇಲ್ಲಿ 327 ಪುರುಷ, 346 ಮಹಿಳಾ ಮತದಾರರಿದ್ದಾರೆ.


ವಾರ್ಡ್ 13-ಪುಳಿಕುಕ್ಕು: ಪರಿಶಿಷ್ಠ ಪಂಗಡಕ್ಕೆ ಮೀಸಲಾದ ಪುಳಿಕುಕ್ಕು ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಕೃಷ್ಣ ನಾಯ್ಕ, ಬಿಜೆಪಿಯಿಂದ ಸದಾನಂದ ನಾಯ್ಕ ಅವರು ಸ್ಪಽðಸುತ್ತಿದ್ದು ಈ ವಾರ್ಡ್ಗೆ ಹಿ.ಪ್ರಾ.ಶಾಲೆ ಓಂತ್ರಡ್ಕ(ದಕ್ಷಿಣ ಭಾಗ) ಮತಗಟ್ಟೆಯಾಗಿದ್ದು ಇಲ್ಲಿ 365 ಪುರುಷ ಹಾಗೂ 365 ಮಹಿಳಾ ಮತದಾರರಿದ್ದಾರೆ.


4 ವಾರ್ಡ್ಗಳಲ್ಲಿ ಬಹುಕೋನ ಸ್ಪರ್ಧೆ 10 ವಾರ್ಡುಗಳಲ್ಲಿ ಕಾಂಗ್ರೆಸ್, ಬಿಜೆಪಿ ನೇರ ಸ್ಪರ್ಧೆ
ಕಳಾರ ಮತ್ತು ಕಡಬ ವಾರ್ಡ್ನಲ್ಲಿ ಬಿಜೆಪಿ, ಕಾಂಗ್ರೆಸ್, ಎಸ್.ಡಿ.ಪಿ.ಐ ಮತ್ತು ಪಕ್ಷೇತರ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಪನ್ಯ ವಾರ್ಡ್ನಲ್ಲಿ ಬಿಜೆಪಿ, ಕಾಂಗ್ರೆಸ್, ಎಸ್.ಡಿ.ಪಿ.ಐ ಹಾಗೂ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್‌ನ ಅಭ್ಯರ್ಥಿಗಳು ಕಣದಲ್ಲಿದ್ದು ತೀವ್ರ ಪೈಪೋಟಿ ಏರ್ಪಟ್ಟಿದೆ. ಉಳಿದಂತೆ 10 ವಾರ್ಡುಗಳಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳ ನಡುವೆ ನೇರ ಹಣಾಹಣಿ ನಡೆಯಲಿದೆ.

ಚುನಾವಣೆಗೆ ಸಂಬಂಧಿಸಿ ಚುನಾವಣಾ ಆಯೋಗ ಚುನಾವಣಾ ವೀಕ್ಷಕರನ್ನು ನೇಮಕ ಮಾಡಿದೆ. ದ.ಕ.ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಜಯಲಕ್ಷ್ಮಿ ರಾಯಕೋಡರವರನ್ನು ಚುನಾವಣಾ ವೀಕ್ಷಕರನ್ನಾಗಿ ನೇಮಕ ಮಾಡಿದೆ. ಚುನಾವಣೆ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಕಡಬ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ನಿಷೇದಾಜ್ಞೆ ಜಾರಿಗೊಳಿಸಲಾಗಿದೆ ಅಲ್ಲದೆ ಆ.15ರಿಂದ ಮದ್ಯದಂಗಡಿ ಬಂದ್ ಮಾಡಲಾಗಿದೆ.


ಆ.20ರಂದು ಮತ ಎಣಿಕೆ:
ಎಲ್ಲ ಮತಗಟ್ಟೆಗಳು ಸಾಮಾನ್ಯ ಮತಗಟ್ಟೆಗಳಾಗಿವೆ, ಅಂಗವಿಕಲರಿಗೆ ಗಾಲಿ ಕುರ್ಚಿ ಸೌಲಭ್ಯವನ್ನು ಕಲ್ಪಿಸಲಾಗುವುದು. ಆ.20ರಂದು ಮತ ಎಣಿಕೆಯು ಕಡಬ ಆಡಳಿತ ಸೌಧದಲ್ಲಿ ನಡೆಯಲಿದೆ. ಮತಪೆಟ್ಟಿಗೆಗಳನ್ನು ತಾಲೂಕು ಆಡಳಿತ ಸೌಧದ ಸ್ಟ್ರಾಂಗ್ ರೂಮ್‌ನಲ್ಲಿ ಇಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಚುನಾವಣೆಗೆ ಸಂಬಂಧಿಸಿ ಸಹಾಯವಾಣಿ ನಂ.260435 ಇದೆ.


ಪ್ರತಿ ಮತಗಟ್ಟೆಯಲ್ಲಿಯೂ ಓರ್ವ ಪೋಲಿಸ್ ಕಾನ್‌ಸ್ಟೇಬಲ್ ಹಾಗೂ ಗೃಹರಕ್ಷಕದಳ ಸಿಬ್ಬಂದಿ ಇದ್ದು, ಸರ್ಕಲ್ ಇನ್ಸ್ಪೆಕ್ಟರ್ ರವಿಯವರ ನಿರ್ದೇಶನದಲ್ಲಿ ಕಡಬ ಎಸ್.ಐ. ಅಭಿನಂದನ್ ಹಾಗೂ ಅಕ್ಷಯ್ ಡವಗಿಯವರು ಉಸ್ತುವಾರಿ ವಹಿಸಿಕೊಂಡಿದ್ದಾರೆ. ಅಲ್ಲದೆ ಕೆ.ಎಸ್.ಆರ್.ಪಿ.ಯ ಒಂದು ತುಕಡಿಯೂ ಆಗಮಿಸಲಿದೆ ಎಂದು ಕಡಬ ಎಸ್.ಐ. ಅಭಿನಂದನ್ ಎಂ. ಅವರು ಸುದ್ದಿಗೆ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here