ಆ.24: ಮಾಡಾವು ಅಯ್ಯಪ್ಪ ಭಜನಾ ಮಂದಿರದ ಬಳಿ ಶ್ರೀಕೃಷ್ಣ ಜನ್ಮಾಷ್ಟಮಿ ಅಂಗವಾಗಿ ವಿವಿಧ ಕ್ರೀಡಾಕೂಟ ಕಾರ್ಯಕ್ರಮ

0

ಕೆಯ್ಯೂರು:   ಅಭಿನವ ಕೇಸರಿ ಮಾಡಾವು ಇದರ ಆಶ್ರಯದಲ್ಲಿ ಶ್ರೀ ಕೃಷ್ಣಜನ್ಮಾಷ್ಟಮಿ ಅಂಗವಾಗಿ ವಿವಿಧ ಕ್ರೀಡಾಕೂಟ ಮಾಡಾವು ಕಟ್ಟೆಯ ಅಯ್ಯಪ್ಪ ಭಜನಾ ಮಂದಿರದ ಬಳಿ ಅ24ರಂದು ನಡೆಯಲಿದೆ.

ಬೆಳಿಗ್ಗೆ 8.30ರಿಂದ ಕ್ರೀಡಾಕೂಟ ಆರಂಭವಾಗಲಿದ್ದು ಬೆಳಿಗ್ಗೆ 9ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದೆ.

ಕೆಯ್ಯೂರು ಶ್ರೀ ಮಹಿಷಮರ್ದಿನಿ ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಮಾಜಿ  ಅಧ್ಯಕ್ಷ ಶಶಿಧರ ರಾವ್ ಬೊಳಿಕ್ಕಳ ಅವರ ಅಧ್ಯಕ್ಷತೆಯಲ್ಲಿ  ಜ್ಯೋತಿ ಚಿಕಿತ್ಸಾಲಯ ಡಾ| ರಾಮಚಂದ್ರ ಭಟ್ ದೀಪ ಪ್ರಜ್ವಲಿಸಿ  ಉದ್ಘಾಟಿಸುವರು.

ಅತಿಥಿಗಳಾಗಿ ಅಯ್ಯಪ್ಪ ಭಜನಾ ಮಂದಿರ ಮಾಡಾವು ಅಧ್ಯಕ್ಷ ರವೀಂದ್ರ ರೈ ನೆಲ್ಯಾಜೆ, ಅಯ್ಯಪ್ಪ ಭಕ್ತವೃಂದ ಮಾಡಾವು ಅಧ್ಯಕ್ಷ ಕೃಷ್ಣಮೂರ್ತಿ ಭಟ್, ಜ್ಯೋತಿ ಚಿಕಿತ್ಸಾಲಯ ಮಾಡಾವು ಡಾ. ರಾಮಚಂದ್ರ ಭಟ್, ಕ್ಲಬ್ ಜೋನ್  ಫಿಟ್ನೆಸ್  ಸೆಂಟರ್ ಮತ್ತು ಮಲ್ಟಿ ಜಿಮ್ ಸವಣೂರು ಮಾಲಕ ಶಶಿಧರನ್ ಕೆ,  ನಿವೃತ್ತ ಕಾರ್ಯದರ್ಶಿ ಹಾಲು ಉತ್ಪಾದಕರ ಸಂಘ ಕೆಯ್ಯೂರು ಚಂದ್ರಹಾಸ ರೈ ಬೊಳಿಕಲ ಮಠ, ಪಿಂಚಣಿ ಮತ್ತು ಸಣ್ಣ ಉಳಿತಾಯ ಇಲಾಖೆ ಮಂಗಳೂರು ಸಹಾಯಕ ನಿರ್ದೇಶಕ ಪ್ರಸನ್ನ ಎಂ.ಪಿ, ನ್ಯಾಷನಲ್ ಪ್ರೊಡಕ್ಟ್ ಮೆಂಟ್ ಮ್ಯಾನೇಜರ್ ಬಿಂದು  ಮುರಳೀಧರ ಕೆಂಗುಡೇಲು, ಪ್ರಗತಿಪರ ಕೃಷಿಕ ಗೋಪಾಲ್ ದಾಸ್ ಚೆನ್ನಾವರ, ಉಪಸ್ಥಿತರಿರುವರು.

ಸಂಜೆ ನಡೆಯುವ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಸುಬ್ರಹ್ಮಣ್ಯ ರೈ ಬೊಳಿಕಲ ಶೇಡಿ ಗೌರವಾಧ್ಯಕ್ಷರು ಅಭಿನವ ಕೇಸರಿ ಮಾಡಾವು, ಭೌದ್ದಿಕ್ ಕಾರ್ಯಕ್ರಮ ಶರಾವತಿ ರವಿ ನಾರಾಯಣ ಪುತ್ತೂರು   ದುರ್ಗಾ ವಾಹಿನಿ ಸಂಯೋಜಕಿ ವಿಶ್ವ ಹಿಂದೂ ಪರಿಷತ್    ಪುತ್ತೂರು ನಗರ ಪ್ರಖಂಡ, ಮುಖ್ಯ ಅತಿಥಿಗಳಾಗಿ  ಹಿಂದೂ ಮುಖಂಡ ಪುತ್ತೂರು ಅರುಣ್ ಕುಮಾರ್ ಪುತ್ತಿಲ, ವಿಜಯ ಸಾಮ್ರಾಟ್ ರಿ. ಪುತ್ತೂರು ಸ್ಥಾಪಕ ಅಧ್ಯಕ್ಷ  ಸಹಜ್ ರೈ  ಬಳಜ್ಜ, ಕೆಯ್ಯೂರು ಗ್ರಾಮ ಪಂಚಾಯತ್ ಅಧ್ಯಕ್ಷ ಶರತ್ ಕುಮಾರ್ ಮಾಡಾವು, ಮಾತೃಶ್ರೀ ಅರ್ಥ್ ಮೂವರ್ಸ್ ಕುಂಬ್ರ ಮೋಹನ್ ದಾಸ್ ರೈ ಕುಂಬ್ರ, ಶ್ರೀ ಕ್ಷೇತ್ರ ಕೆಯ್ಯೂರು ವ್ಯವಸ್ಥಾಪನ ಸಮಿತಿ ಅಧ್ಯಕ್ಷ  ಎ.ಕೆ ಜಯರಾಮ ರೈ, ಉಪಾಧ್ಯಕ್ಷ ದ.ಕ ಜಿಲ್ಲೆ ಬಿಜೆಪಿ ಪ್ರಸನ್ನ ಮಾರ್ತ ಉಪಸ್ಥಿತರಿರುವರು. 

ಸನ್ಮಾನ ಕಾರ್ಯಕ್ರಮ
ಚೇತನ್ ಆಚಾರ್ಯ ಪೆರಿಂಜೆ ಆರ್ಟಿಸ್ಟ್, ತೇಜಸ್ ಆಚಾರ್ಯ ಆರ್ಟಿಸ್ಟ್, ಪ್ರಶ್ವಿ ಶೆಟ್ಟಿ ಬಾಲ ಪ್ರತಿಭೆ, ಬಹುಮುಖ ಪ್ರತಿಭೆ ಸೌಜನ್ಯ ಎಂ, ಯಕ್ಷಗಾನ ಕಲಾವಿದ ಧ್ಯಾನ್ ರೈ, ಸನ್ಮಾನ ಕಾರ್ಯಕ್ರಮ ನಡೆಯಲಿದೆ. ಅಭಿನವ ಯಕ್ಷಕಲಾ ಕೇಂದ್ರ ಮಾಡಾವು ಇದರ ವಿದ್ಯಾರ್ಥಿಗಳಿಂದ ಶ್ರೀ ವಾಸುದೇವ ರೈ ಬೆಳ್ಳಾರೆ ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತ ಕೆಯ್ಯೂರು  ಇವರ ನಿರ್ದೇಶನದಲ್ಲಿ   ಯಕ್ಷಗಾನ ರಂಗಪ್ರವೇಶ ಮತ್ತು ಪ್ರದರ್ಶನ ಅಗಸ್ಟ್ 24 ಸಂಜೆ 7:00 ರಿಂದ 10ರ ತನಕ ʼಲೀಲಾವಿನೋದಿʼ ಶ್ರೀಕೃಷ್ಣ  ಯಕ್ಷಗಾನ ರಂಗ ಪ್ರವೇಶ ಮತ್ತು ಪ್ರದರ್ಶನ ನಡೆಯಲಿದೆ. ಆರು ವರ್ಷದ ಒಳಗಿನ ಮಕ್ಕಳಿಗೆ “ಮುದ್ದುಕೃಷ್ಣ ವೇಷ” ಸ್ಪರ್ಧೆ ನಡೆಯಲಿದೆ.

ಕ್ರೀಡಾಕೂಟ ಪಂದ್ಯಾಟಗಳು ಕೆಯ್ಯೂರು, ಪಾಲ್ತಾಡಿ, ಕೆದಂಬಾಡಿ, ಕೊಳ್ತಿಗೆ, ಮತ್ತು ಅರಿಯಡ್ಕ ಗ್ರಾಮಸ್ಥರಿಗೆ ಸೀಮಿತವಾಗಿದ್ದು, ಪುರುಷರ ವಿಭಾಗದಲ್ಲಿ ಮಡಕೆ ಒಡೆಯುವುದು, ಜಾರುಕಾಂಬ ನಡಿಗೆ, ಕಬಡ್ಡಿ ,ವಾಲಿಬಾಲ್, ಹಗ್ಗಜಗ್ಗಾಟ ,ಮಹಿಳೆಯರ ವಿಭಾಗದಲ್ಲಿ ಮಡಕೆ ಒಡೆಯುವುದು, ಭಕ್ತಿ ಗೀತೆ, ಹಗ್ಗ ಜಗ್ಗಾಟ, ಜಾರುಕಂಬ ನಡಿಗೆ, ಹಾಗೂ ಮಕ್ಕಳ ವಿಭಾಗದಲ್ಲಿ ಭಕ್ತಿ ಗೀತೆ, ಸಂಗೀತ ಕುರ್ಚಿ, ಚಿತ್ರಕಲೆ ಪೆನ್ಸಿಲ್ ಸ್ಕೆಚ್ ನಡೆಯಲಿದೆ. ಎಲ್ಲರಿಗೂ ಭಾಗವಹಿಸಲು ಅವಕಾಶವಿದೆ ಎಂದು ಅಭಿನವ ಕೇಸರಿ ಮಾಡಾವು ಅಧ್ಯಕ್ಷ ಶಶಿಧರ ಆಚಾರ್ಯ ಮಾಡಾವು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here