“ಅರುಣ ಸಾರಥಿ” ಸಂಘಟನೆಯಿಂದ ಧನಸಹಾಯ ಹಸ್ತಾಂತರ

0

ಪುತ್ತೂರು: ಕಿಡ್ನಿ ವೈಫಲ್ಯದಿಂದ ಚಿಕಿತ್ಸೆ ಪಡೆಯುತ್ತಿರುವ ಮೊಟ್ಟೆತ್ತಡ್ಕ ನಿವಾಸಿ ಕುಸುಮಾ ಎಂಬವರಿಗೆ “ಅರುಣ ಸಾರಥಿ”ಸಂಘಟನೆಯ ವತಿಯಿಂದ “ಹಿಂದವಿ” ಕಛೇರಿಯಲ್ಲಿ 10,000 ರೂಪಾಯಿ ಧನಸಹಾಯವನ್ನು “ಪುತ್ತಿಲ ಪರಿವಾರ ಸೇವಾ ಟ್ರಸ್ಟ್” ನ ಸಂಚಾಲಕ ಅರುಣ್ ಪುತ್ತಿಲ ಅವರ ಉಪಸ್ಥಿತಿಯಲ್ಲಿ ನೀಡಲಾಯಿತು.

ಈ ಸಂದರ್ಭದಲ್ಲಿ ಸಂದೇಶ್ ನಾೖಕ್ ಕೆಯ್ಯೂರು,ಉದಯ ಸಾಲ್ಮರ,ತೀರ್ಥರಾಮ ಜಿಡೆಕಲ್ಲು,ಸಚಿನ್ ವಳತ್ತಡ್ಕ,ಸ್ವಸ್ತಿಕ್ ತಾರಿಗುಡ್ಡೆ,ಶಿವಪ್ರಸಾದ್ ಮುಕ್ರಂಪಾಡಿ,ಸುರೇಂದ್ರ ಅಡ್ಲಿಮಜಲು,ಪ್ರವೀಣ್ ಕೆಮ್ಮಾಯಿ ಉಪಸ್ಥಿತರಿದ್ದರು.ಕಳೆದ ಒಂಭತ್ತು ತಿಂಗಳಿನಿಂದ ಹತ್ತು ಸಾವಿರ ರೂಪಾಯಿಯಂತೆ ಅನಾರೋಗ್ಯದಲ್ಲಿರುವವರಿಗೆ ಒಟ್ಟು 90,000 ರೂಪಾಯಿ ಧನಸಹಾಯವನ್ನು “ಅರುಣ ಸಾರಥಿ ಆಟೋ ಚಾಲಕರ ಸಂಘಟನೆ”ಯ ವತಿಯಿಂದ ನೀಡಲಾಗಿದೆ ಎಂದು ಸಂಸ್ಥೆ ತಿಳಿಸಿದೆ.

LEAVE A REPLY

Please enter your comment!
Please enter your name here