ಪುತ್ತೂರು: ಗಾಂಜಾ ಸೇವನೆ ದೃಢಪಟ್ಟ ಹಿನ್ನಲೆ ಯುವಕನೋರ್ವನ ವಿರುದ್ಧ ಪ್ರಕರಣ ದಾಖಲಾದ ಬಗ್ಗೆ ವರದಿಯಾಗಿದೆ.
ಸೆ.19ರಂದು ಬಂಟ್ವಾಳ ಅಬಕಾರಿ ಉಪಾಧೀಕ್ಷಕರ ತಂಡದವರು ಬಿಳಿಯೂರು ಗ್ರಾಮದಿಂದ ಎರಡು ಜನ ಯುವಕರನ್ನು ಗಾಂಜಾ ಸೇವನೆ ಬಗ್ಗೆ ಕರೆದುಕೊಂಡು ಹೋಗಿ ವೈದ್ಯಕೀಯ ಪರೀಕ್ಷೆ ಮಾಡಿದಾಗ ಬಿಳಿಯೂರಿನ ಅಬೂಬಕ್ಕರ್ ಸಿದ್ದೀಕ್ (26) ತಾಲೂಕು ಎಂಬಾತ ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿದ್ದು, ಆತನ ವಿರುದ್ಧ ಗಾಂಜಾ ಸೇವನೆ ಪ್ರಕರಣ ದಾಖಲಿಸಿ ನೋಟಿಸ್ ನೀಡಿ ತನಿಖೆ ಕೈಗೊಳ್ಳಲಾಗಿದೆ.
ಮತ್ತೊಬ್ಬ ಯುವಕ ಗಾಂಜಾ ಸೇವನೆಯ ಬಗ್ಗೆ ದೃಡಪಟ್ಟಿರುವುದಿಲ್ಲ ಎಂದು ತಿಳಿದು ಬಂದಿದೆ.