




ಪುತ್ತೂರು: ವಿವೇಕಾನಂದ ಕಲಾ,ವಾಣಿಜ್ಯ ಹಾಗೂ ವಿಜ್ಞಾನ (ಸ್ವಾಯತ್ತ) ಕಾಲೇಜು ಪುತ್ತೂರು, ಇಲ್ಲಿನ ದ್ವಿತೀಯ ಬಿಎ ವಿದ್ಯಾರ್ಥಿನಿ ಕೀರ್ತಿಲತಾ ಇವರು ಕರ್ನಾಟಕ ರಾಜ್ಯ ಜೂನಿಯರ್ ತ್ರೋಬಾಲ್ ತಂಡವನ್ನು ಪ್ರತಿನಿಧಿಸಿ , ಕಳೆದ ಡಿಸೆಂಬರ್ 5 ರಿಂದ 7ರವರೆಗೆ , ಮಹಾರಾಷ್ಟ್ರದ ಬದ್ಲಾಪುರ ದಲ್ಲಿ ನಡೆದ 35ನೇ ರಾಷ್ಟ್ರೀಯ ಮಟ್ಟದ ಜೂನಿಯರ್ ತ್ರೋಬಾಲ್ ಚಾಂಪಿಯನ್ ಶಿಪ್ ನಲ್ಲಿ ಭಾಗವಹಿಸಿ ಚಿನ್ನದ ಪದಕ ಪಡೆದಿದ್ದಾರೆ.





ಇವರು ಮಡಿಕೇರಿ ತಾಲೂಕಿನ ಬಂಗಾರ ಕೋಡಿಯ ದಿ. ಲಕ್ಷ್ಮಣ ಬಿ ಆರ್ ಮತ್ತು ವಿಧಾ ಕುಮಾರಿಯವರ ಮಗಳು. ಇವರ ಈ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಪ್ರಾಧ್ಯಾಪಕ ಮತ್ತು ಶಿಕ್ಷಕೇತರ ವೃಂದ ಮತ್ತು ವಿದ್ಯಾರ್ಥಿಗಳು ಅಭಿನಂದಿಸಿದ್ದಾರೆ.ಇವರಿಗೆ ಕಾಲೇಜಿನ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ರವಿಶಂಕರ್ ವಿ.ಎಸ್ ಇವರ ಮಾರ್ಗದರ್ಶನ ದಲ್ಲಿ ಯತೀಶ್ ಕುಮಾರ್ ಮತ್ತು ಡಾ. ಜ್ಯೋತಿ ತರಬೇತಿಯನ್ನು ನೀಡಿದ್ದಾರೆ.















