




ಅಧ್ಯಕ್ಷ:ಈಶ್ವರ ವಾರಣಾಸಿ, ಉಪಾಧ್ಯಕ್ಷ: ರಾಮದಾಸ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ: ಜ್ಯೋತಿಪ್ರಕಾಶ್, ಸಂಘಟನಾ ಕಾರ್ಯದರ್ಶಿ: ಚಿನ್ಮಯಕೃಷ್ಣ, ಕಾರ್ಯದರ್ಶಿ: ನಮಿತಾ ದಿಲೀಪ್




ಪುತ್ತೂರು: ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯ ಮಹಾಸಭೆ ದರ್ಬೆಯಲ್ಲಿರುವ ಪ್ರಶಾಂತ್ ಮಹಲ್ ಸಭಾಂಗಣದಲ್ಲಿ ಡಿ.9ರಂದು ನಡೆಯಿತು.






ಜಿಲ್ಲಾಧ್ಯಕ್ಷ ತಾರನಾಥ ಗಟ್ಟಿ ಕಾಪಿಕಾಡ್ ಅವರ ಸಭಾಧ್ಯಕ್ಷತೆಯಲ್ಲಿ ನಡೆದ ಮಹಾಸಭೆಯ ವೇದಿಕೆಯಲ್ಲಿ ಜಿಲ್ಲಾ ಗೌರವಾಧ್ಯಕ್ಷ ಹರೀಶ್ ಬಂಟ್ವಾಳ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆನ್ಯೂಟ್ ಜೆ. ಪಿಂಟೊ, ಪುತ್ತೂರು ತಾಲೂಕು ಅಧ್ಯಕ್ಷ ರಾಮ್ದಾಸ್ ಶೆಟ್ಟಿ ವಿಟ್ಲ ಮತ್ತು ಸುಳ್ಯ ತಾಲೂಕು ಅಧ್ಯಕ್ಷ ಯಶ್ವಿತ್ ಕಾಳಮನೆ ಉಪಸ್ಥಿತರಿದ್ದರು.
ಅಪಘಾತ ವಿಮೆಯ ಬಗ್ಗೆ ಮಾಹಿತಿ ಸಭೆಯಲ್ಲಿ ಸದಸ್ಯರಿಗೆ ನೀಡಲಾಯಿತು. ಸಂಘದ ಮುಂದಿನ ಯೋಜನೆ-ಯೋಚನೆಗಳ ಬಗ್ಗೆ ಚರ್ಚಿಸಲಾಯಿತು. ಅಲ್ಲದೆ ತಾಲೂಕು ಹಾಗೂ ಜಿಲ್ಲಾ ಸಮಿತಿಯ ಪದಾಽಕಾರಿಗಳಿಗೆ ಗುರುತಿನ ಚೀಟಿ ವಿತರಿಸಲಾಯಿತು.
ಬಳಿಕ ಮುಂದಿನ ಎರಡು ವರ್ಷಗಳ ಅವಽಗೆ ಜಿಲ್ಲಾ ಸಮಿತಿಯ ನೂತನ ಅಧ್ಯಕ್ಷರು ಮತ್ತು ಪದಾಽಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು.
ನೂತನ ಜಿಲ್ಲಾ ಅಧ್ಯಕ್ಷರಾಗಿ ಈಶ್ವರ ವಾರಣಾಶಿ (ಸುಳ್ಯ ಸುದ್ದಿ ಬಿಡುಗಡೆ), ಗೌರವಾಧ್ಯಕ್ಷರಾಗಿ ಹರೀಶ್ ಬಂಟ್ವಾಳ(ಸುಳ್ಯ ಸುದ್ದಿ ಬಿಡುಗಡೆ), ಗೌರವ ಸಲಹೆಗಾರರಾಗಿ ನಿಕಟಪೂರ್ವ ಅಧ್ಯಕ್ಷರಾದ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ತಾರನಾಥ ಗಟ್ಟಿ ಕಾಪಿಕಾಡು, ಪ್ರಧಾನ ಕಾರ್ಯದರ್ಶಿಯಾಗಿ ಜ್ಯೋತಿ ಪ್ರಕಾಶ್ ಪುಣಚ(ಸುದ್ದಿ ಬಿಡುಗಡೆ), ಉಪಾಧ್ಯಕ್ಷರನ್ನಾಗಿ ರಾಮ್ದಾಸ್ ಶೆಟ್ಟಿ ವಿಟ್ಲ ( ವಿ.ಟಿವಿ), ಶಿವಪ್ರಸಾದ್ ಅಲೆಟ್ಟಿ (ಸುದ್ದಿ ಬಿಡುಗಡೆ ಸುಳ್ಯ), ಕೋಶಾಧಿಕಾರಿಯಾಗಿ ಕೆನ್ಯೂಟ್ ಪಿಂಟೊ ಮಂಗಳೂರು, ಸಂಘಟನಾ ಕಾರ್ಯದರ್ಶಿಯಾಗಿ ಚಿನ್ಮಯಕೃಷ್ಣ (ನಿಖರ ನ್ಯೂಸ್), ರಮೇಶ್ ನೀರಬಿದಿರೆ (ಸುದ್ದಿ ಬಿಡುಗಡೆ ಸುಳ್ಯ) ಹಾಗೂ ಕಾರ್ಯದರ್ಶಿಗಳಾಗಿ ಡೊನಾಲ್ಡ್ ಪಿರೇರಾ, ಜಯಶ್ರೀ ಕೊಯಿಂಗೋಡು (ಸುದ್ದಿ ಬಿಡುಗಡೆ ಸುಳ್ಯ) ಹಾಗೂ ನಮಿತಾ ದಿಲೀಪ್ (ಸುದ್ದಿ ಬಿಡುಗಡೆ ಪುತ್ತೂರು), ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಗಿರಿಧರ ಶೆಟ್ಟಿ ಮಂಗಳೂರು, ಶಶಿಧರ ನೆಕ್ಕಿಲಾಡಿ, ಶ್ರೀಧರ ಕಜೆಗದ್ದೆ, ಕೆ.ಟಿ.ಭಾಗೀಶ್, ಗಣೇಶ್ ಕುಕ್ಕುದಡಿ, ಉಮೇಶ್ ಮಣಿಕ್ಕರ, ಜಗದೀಶ್ ಕಜೆ, ಮನ್ಮಥ ಶೆಟ್ಟಿ ಪುತ್ತೂರು, ಪ್ರಜ್ವಲ್ ಪುತ್ತೂರು, ಅಶ್ವಿನಿ ಪೆರುವಾಯಿ, ಮಧುಶ್ರೀ ಬಿ.ಜೆ., ಭರತ್ ಬಲ್ನಾಡು, ಯಕ್ಷಿತ್ ಪೂರ್ಣ, ಸುಮನಾ ಕೇಪು ಮತ್ತು ಹಮೀದ್ ವಿಟ್ಲ ಅವರನ್ನು ಆಯ್ಕೆ ಮಾಡಲಾಯಿತು.
ಅಶ್ವಿನಿ ಪೆರುವಾಯಿಯವರ ಪ್ರಾರ್ಥನೆಯೊಂದಿಗೆ ಪ್ರಾರಂಭಗೊಂಡ ಸಭೆಯಲ್ಲಿ ರಾಮ್ದಾಸ್ ಶೆಟ್ಟಿ ವಿಟ್ಲ ಸ್ವಾಗತಿಸಿ ಜ್ಯೋತಿ ಪ್ರಕಾಶ್ ಪುಣಚ ವಂದಿಸಿದರು.







