ನೆತ್ತರ: ನೆತ್ತರ ಅಂಗನವಾಡಿ ಕೇಂದ್ರದಲ್ಲಿ ಪೌಷ್ಟಿಕ ಆಹಾರ ಸಪ್ತಾಹ ಕಾರ್ಯಕ್ರಮ ಸೆ.17ರಂದು ಹಮ್ಮಿ ಕೊಳ್ಳಲಾಯಿತು.
ಬಾಲ ವಿಕಾಸ ಸಮಿತಿಯ ಅಧ್ಯಕ್ಷೆ ಜ್ಯೋತಿ ಮಚ್ಚಗುರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡಿದ್ದರು. ಕಾರ್ಯಕ್ರಮದಲ್ಲಿ ಮಚ್ಚಿನ ಪಂಚಾಯತ್ ಸದಸ್ಯೆ ರುಕ್ಮಿಣಿ, ನೆತ್ತರ ಶಾಲಾ ಮುಖ್ಯ ಗುರುಗಳಾದ ಸೀತಾರಾಮ ಬೆಳಾಲು, ಶಕ್ತಿ ನವೋದಯ ಸಂಘದ ಅಧ್ಯಕ್ಷೆ ಮೋಹಿನಿ ಮಚ್ಚಗುರಿ, ಸಂಘದ ಸದಸ್ಯರು ಹಾಗೂ ಪೋಷಕರು ಭಾಗವಹಿಸಿದರು.
ಈ ಕಾರ್ಯಕ್ರಮದಲ್ಲಿ ಪೋಷಕರು ತಯಾರಿಸಿದ ಹಲವು ಪೌಷ್ಟಿಕ ಆಹಾರವನ್ನು ಪ್ರದರ್ಶಿಸಲಾಯಿತು. ಅಂಗನವಾಡಿ ಕಾರ್ಯಕರ್ತೆ ಗೀತಲತಾ ಪೌಷ್ಟಿಕ ಆಹಾರದ ಬಗ್ಗೆ ಮಾಹಿತಿ ನೀಡಿದರು. ಕಾರ್ಯಕರ್ತೆ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಅಂಗನವಾಡಿ ಸಹಾಯಕಿ ಸಹಕರಿಸಿದರು.