ಉಜಿರೆ : ಇತ್ತೀಚೆಗೆ ನಿಧನರಾದ ಹಳೆಪೇಟೆ ನಿವಾಸಿ ಉಜಿರೆ ರಬ್ಬರ್ ಸೊಸೈಟಿ ಸಿಬ್ಬಂದಿ ಗಿರಿಧರ ಗೌಡ ರಿಗೆ ನ.1 ರಂದು ಉಜಿರೆ ಹಳೆಪೇಟೆ ಶ್ರೀ ರಾಮ ಭಜನಾ ಮಂದಿರದಲ್ಲಿ ಶ್ರದ್ಧಾಂಜಲಿ ಸಭೆ ನಡೆಯಿತು.
ಉಜಿರೆ ರಬ್ಬರ್ ಬೆಳೆಗಾರರ ಮಾರಾಟ ಮತ್ತು ಸಂಸ್ಕರಣ ಸಹಕಾರ ಸಂಘದ ಅಧ್ಯಕ್ಷ ಶ್ರೀಧರ ಜಿ. ಭೀಡೆ, ಉಜಿರೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಕೆ. ಬಾಲಕೃಷ್ಣ ಗೌಡ ನುಡಿ ನಮನ ಸಲ್ಲಿಸಿದರು.
ಮಾಜಿ ಸಚಿವ ಕೆ. ಗಂಗಾಧರ ಗೌಡ, ರಬ್ಬರ್ ಸೊಸೈಟಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ರಾಜು ಶೆಟ್ಟಿ, ಸಿಬ್ಬಂದಿಗಳು, ರಂಜನ್ ಜಿ. ಗೌಡ, ಕೇರಿಮಾರು ಬಾಲಕೃಷ್ಣ ಗೌಡ, ಶಿವಕಾಂತ ಗೌಡ, ಮೃತರ ಕುಟುಂಬಸ್ಥರು, ಹಿತೈಷಿಗಳು ಹಾಜರಿದ್ದರು.