ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳ ಲಕ್ಷದೀಪೋತ್ಸವ ಸಂಭ್ರಮದ ಅಂಗವಾಗಿ ರಾಜ್ಯ ಮಟ್ಟದ ವಸ್ತು ಪ್ರದರ್ಶನ ಉದ್ಘಾಟನೆಯು ನ.19ರಂದು ಜರುಗಿತು.
ಉದ್ಘಾಟನೆಯನ್ನು ಶಾಸಕ ಹರೀಶ್ ಪೂಂಜ ವಸ್ತು ಪ್ರದರ್ಶನ ಮಂಟಪದ ಊರುಗೋಲು ಸರಿಸಿ, ಬತ್ತಿ ಕೋಲು(ಕೋಲ್ತಿರಿ) ಬೆಳಗಿಸಿ ನೆರವೇರಿಸಿದರು.
ಈ ಸಂದರ್ಭದಲ್ಲಿ ಧರ್ಮದರ್ಶಿಗಳಾದ ಡಾ.ಡಿ ವೀರೇಂದ್ರ ಹೆಗ್ಗಡೆ, ಎಸ್ ಡಿಎಂ ಟ್ರಸ್ಟ್ ಕಾರ್ಯದರ್ಶಿ ಸತೀಶ್ ಚಂದ್ರ, ಆಪ್ತ ಸಹಾಯಕ ವೀರೂ ಶೆಟ್ಟಿ, ಕು.ಮಾನ್ಯ, ಜನಾರ್ಧನ್, ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಮಂಜುನಾಥ್, ಯೋಜನಾಧಿಕಾರಿ ಅನಿಲ್, ಡಾ.ಶ್ರೀಧರ ಭಟ್, ಜಯಂತ ಕೋಟ್ಯಾನ್, ಪ್ರಶಾಂತ ಪಾರೆಂಕಿ, , ಮತ್ತಿತರರು ಉಪಸ್ಥಿತರಿದ್ದರು.
ಹಲವಾರು ವಸ್ತು ಪ್ರದರ್ಶನಗಳನ್ನು ನಾವಿಲ್ಲಿ ಕಾಣಬಹುದು.