ದೇವದಾಸ್ ಪ್ರಭು
ಪುತ್ತೂರು: ಇಲ್ಲಿನ ಮುಖ್ಯ ರಸ್ತೆಯ ಅರುಣಾ ಚಿತ್ರಮಂದಿರ ಬಳಿಯ ಪ್ರಭು ಬಿಲ್ಡಿಂಗ್ ಮಾಲಕ ಹೆಚ್. ದೇವದಾಸ್ ವಿ. ಪ್ರಭು(83) ರವರು ಅಲ್ಪ ಕಾಲದ ಅನಾರೋಗ್ಯದಿಂದಾಗಿ ಜ. 8 ರಂದು ಸಂಜೆ ನಿಧನ ಹೊಂದಿದರು. ಮೃತರು ಹಲವಾರು ವರ್ಷಗಳ ಕಾಲ ತಮ್ಮ ಕಟ್ಟಡದಲ್ಲಿ ಹೋಲ್ ಸೇಲ್ ಜಿನಸು ವ್ಯಾಪಾರ ನಡೆಸುತ್ತಾ ಬಂದಿದ್ದರು. ಬಳಿಕ ವ್ಯಾಪಾರವನ್ನು ಸ್ಥಗಿತಗೊಳಿಸಿ ಮನೆಯಲ್ಲಿ ವಿಶ್ರಾಂತ ಜೀವನ ನಡೆಸುತ್ತಿದ್ದರು. ಮೃತರು ಪತ್ನಿ ನಿರ್ಮಲ ಪ್ರಭು, ಪುತ್ರಿಯವರಾದ ವಿನಯ ಕಿಣಿ, ರೂಪ ಕಿಣಿ, ದಿವ್ಯಶ್ರೀ ಕಿಣಿ, ಪುತ್ರ ಉದ್ಯಮಿ ನಾಗೇಶ್ ಪ್ರಭು, ಅಳಿಯಂದಿರಾದ ವಸಂತ ಕಿಣಿ, ರಮೇಶ್ ಕಿಣಿ, ರವೀಂದ್ರನಾಥ ಪೈ, ಸೊಸೆ ಸವಿತಾ ಪ್ರಭು ಹಾಗೂ ಮೊಮ್ಮಕ್ಕಳು ಮತ್ತು ಮರಿ ಮೊಮ್ಮಕ್ಕಳನ್ನು ಅಗಲಿದ್ದಾರೆ. ಮೃತರ ಅಂತಿಮ ದರ್ಶನವು ಮೃತರ ಸ್ವಗ್ರಹ ಪರ್ಲಡ್ಕ (ವಿವೇಕ ಹಾಸ್ಟೆಲ್ ಬಳಿ) ದಲ್ಲಿ ಜ.೯ ರಂದು ಬೆಳಗ್ಗೆ ಜರುಗಿಸಿ ಅಂತ್ಯಕ್ರಿಯೆಯು ಪುತ್ತೂರು ಹಿಂದೂ ರುದ್ರ ಭೂಮಿಯಲ್ಲಿ ಜರಗಲಿದೆ ಎಂದು ಮೃತರ ಕುಟುಂಬ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.