ಪಂಜದ ಮುಖ್ಯ ರಸ್ತೆಯ ಬಳಿಯಿರುವ ನಾರಾಯಣ ಕಾಂಪ್ಲೆಕ್ಸ್ ನ ಒಂದನೇ ಕೊಠಡಿಯಲ್ಲಿ ಸಮಾನ ಮನಸ್ಕರ ಪಾಲುದಾರಿಕೆಯೊಂದಿಗೆ “ಮಹಾಲಕ್ಷ್ಮೀ ಟ್ರೇಡರ್ಸ್’ ಅಡಿಕೆ, ಕೃಷಿ ಉತ್ಪನ್ನ, ಕಾಡು ಉತ್ಪತ್ತಿಗಳ ಖರೀದಿ ಕೇಂದ್ರವು ಸೆ.9 ರಂದು ಶುಭಾರಂಭ ಗೊಂಡಿತು.
ಉದ್ಯಮಿ ಮೋನಪ್ಪ ನಾಯ್ಕ ಸೌದಾಮಿನಿ ಗೌರವ ಉಪಸ್ಥಿತರಿದ್ದು ಶುಭ ಹಾರೈಸಿದರು. ಪಾಲುದಾರರು, ಗ್ರಾಹಕರು , ಮೊದಲಾದವರು, ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಲೋಕೇಶ್ ಬರೆಮೇಲು ಸ್ವಾಗತಿಸಿದರು. ಲಿಗೋಧರ ಆಚಾರ್ಯ ವಂದಿಸಿದರು.