ಬಿಳಿನೆಲೆ ಕೈಕಂಬ ಹಿ.ಪ್ರಾ. ಶಾಲೆಯಲ್ಲಿ “ಧ್ವನಿ” ಬೇಸಿಗೆ ಶಿಬಿರದ ಉದ್ಘಾಟನೆ

0

ಕಡಬ: ಬಿಳಿನೆಲೆ ಕೈಕಂಬ ಉ.ಹಿ.ಪ್ರಾ.ಶಾಲೆಯಲ್ಲಿ “ಧ್ವನಿ” ಬೇಸಿಗೆ ಶಿಬಿರವು ಏ.೪ರಿಂದ ಏ.೮ರವರೆಗೆ ನಡೆಯಲಿದ್ದು ಏ.4ರಂದು ಶಿಬಿರದ ಉದ್ಘಾಟನಾ ಕಾರ್ಯಕ್ರಮ ನಡೆಯಿತು. ಶಿಬಿರವನ್ನು ನಿವೃತ್ತ ಮುಖ್ಯಗುರು ಲಕ್ಷ್ಮಣ ಗೌಡ ಎನ್. ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಬಿಳಿನೆಲೆ ಗ್ರಾಮ ಪಂಚಾಯತ್ ಸದಸ್ಯ ಮುರಳೀಧರ ಎರ್ಮಾಯಿಲ್, ಭವ್ಯ ಕುಕ್ಕಾಜೆ, ಬಿಳಿನೆಲೆ ಕೈಕಂಬ ಶಾಲೆಯ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ದಿನೇಶ್ ಕಳಿಗೆ, ಸಂಪನ್ಮೂಲ ವ್ಯಕ್ತಿಗಳಾದ ಚಂದ್ರಶೇಖರ ಕುಲ್ಕುಂದ, ಗಿರೀಶ ಆಚಾರ್ಯ, ಶಿವಾನಂದ ಕಿಣಿ, ಗಣೇಶ್‌ಆಚಾರ್ ಉಪಸ್ಥಿತರಿದ್ದರು.


ಕುಣಿತ ಭಜನೆ ಮತ್ತು ಭಜನೆ
ಉದ್ಘಾಟನೆಯ ಬಳಿಕ ನಡೆದ ಕುಣಿತ ಭಜನೆ ಹಾಗೂ ಭಜನೆ ಕಾರ್‍ಯಕ್ರಮದ ಉದ್ಘಾಟನೆ ನಡೆಯಿತು, ಈ ಕಾರ್‍ಯಕ್ರಮದ ಅಧ್ಯಕ್ಷತೆಯನ್ನು ಮೋಹನ ಕಳಿಗೆಯವರು ವಹಿಸಿದ್ದರು. ಮುಖ್ಯಗುರು ಪುಷ್ಪಾವತಿ ಕೆ.ಬಿ ಸ್ವಾಗತಿಸಿ, ಹಿರಿಯ ಶಿಕ್ಷಕಿ ವನಿತಾ ಕೆ ವಂದಿಸಿದರು. ಪದವೀಧರ ಶಿಕ್ಷಕಿ ಪವಿತ್ರ ಎ. ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ನಿವೃತ್ತ ಮುಖ್ಯ ಗುರುಗಳಾದ ತುಕಾರಾಂ ಗೌಡ ಬಿಳಿನೆಲೆ, ನಿವೃತ್ತ ಶಿಕ್ಷಕರಾದ ಕುಸುಮಾವತಿ ಪಿಲಿಕಜೆ ಎಸ್.ಡಿ.ಎಂ.ಸಿ ಉಪಾಧ್ಯಕ್ಷರಾದ ಶ್ರೀಮತಿ ಸಾಜಸ್, ಎಸ್.ಡಿ.ಎಂ.ಸಿ. ಸದಸ್ಯರು, ಪೋಷಕರು, ಶಾಲಾಭಿಮಾನಿಗಳು ಉಪಸ್ಥಿತರಿದ್ದರು. ಸಂಪನ್ಮೂಲ ವ್ಯಕ್ತಿಗಳಿಗೆ ಶಾಲು ಹೊದಿಸಿ ಗಿಡ ಮತ್ರು ಪುಸ್ತಕ ಉಡುಗೊರೆಯಾಗಿ ನೀಡಲಾಯಿತು.

LEAVE A REPLY

Please enter your comment!
Please enter your name here