ಪುತ್ತೂರು: ಕಬ್ಬಿಣವನ್ನು ಕಾಯಿಸಿ ಬಾಗಿಸಿ ತಟ್ಟಿ, ತೀಡಿ ಕೃಷಿ ಉಪಯೋಗಿ ವಸ್ತುಗಳನ್ನು ಸಿದ್ಧಮಾಡಿಕೊಡುತ್ತಿದ್ದ ಬೆಟ್ಟಂಪಾಡಿ ಚೆಲ್ಯಡ್ಕ ನಿವಾಸಿ ಕಮ್ಮಾರಿಕೆ ಕಾಯಕದ ನಾರಾಯಣ ಆಚಾರ್ಯ(59ವ)ರವರು ಅನಾರೋಗ್ಯದಿಂದಾಗಿ ಮೇ 2ರಂದು ಮಂಗಳೂರು ಆಸ್ಪತ್ರೆಯಲ್ಲಿ ನಿಧನರಾದರು.
ನಾರಾಯಣ ಆಚಾರ್ಯರವರು ತಮ್ಮ ಮನೆಯ ಬಳಿಯೇ ಕುಲುಮೆ ಇಟ್ಟು ರೈತರಿಗೆ ಕುಳ, ಕುಡುಗೋಲು, ಪಿಕಾಸಿ ಮುಂತಾದ ಕಬ್ಬಿಣ ಸಾಮಾನುಗಳನ್ನು ತಯಾರಿಸುವ ಕೆಲಸ ಮಾಡುತ್ತಿದ್ದರು. ಇತ್ತೀಚೆಗೆ ಅವರು ಅನಾರೋಗ್ಯದ ಹಿನ್ನೆಲೆಯಲ್ಲಿ ಮಂಗಳೂರು ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಅಲ್ಲಿ ಅವರು ಚಿಕಿತ್ಸೆಗೆ ಸ್ಪಂಧಿಸದೆ ನಿಧನರಾದರು. ಮೃತರು ಪತ್ನಿ ಯಶೋದಾ, ಪುತ್ರರಾದ ನವೀನ್, ಪ್ರವೀಣ್, ಪ್ರಕಾಶ್, ಪ್ರಶಾಂತ್ ಮತ್ತು ಪುತ್ರಿ ಪ್ರಮೀಳಾ ಅವರನ್ನು ಅಗಲಿದ್ದಾರೆ.