ಪುಣಚ: ನಿವೃತ್ತ ಮುಖ್ಯಗುರು ಬಳಂತಿಮೊಗರು ರಾಮಕೃಷ್ಣ ಭಟ್ ನಿಧನ

0

ಪುಣಚ: ಪುಣಚ ಗ್ರಾಮದ ಬಳಂತಿಮೊಗರು ನಿವಾಸಿ ನಿವೃತ್ತ ಮುಖ್ಯಗುರು ಬಳಂತಿಮೊಗರು ರಾಮಕೃಷ್ಣ ಭಟ್(72ವ) ಮೇ.21ರಂದು ನಿಧನರಾದರು.


ಪುಣಚ ಪರಿಯಾಲ್ತಡ್ಕ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸುಮಾರು 35 ವರ್ಷಗಳಿಂದ ಅಧ್ಯಾಪಕರಾಗಿ ಸೇವೆ ಸಲ್ಲಿಸಿ ನಂತರ 1 ವರ್ಷ ಮುಖ್ಯ ಗುರುಗಳಾಗಿ ಸೇವೆ ಸಲ್ಲಿಸಿ ನಿವೃತ್ತಿ ಜೀವನದಲ್ಲಿದ್ದರು. ಅಲ್ಪ ಕಾಲದ ಅಸೌಖ್ಯದಿಂದ ಬಳಲುತ್ತಿದ್ದ ಅವರು ಮಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ನಿಧನರಾಗಿದ್ದಾರೆ. ಮೃತರು ಪತ್ನಿ ಪುಷ್ಪಾವತಿ, ಪುತ್ರಿಯರಾದ ಶ್ರೀರೂಪ, ಶ್ರೀರಕ್ಷ ,ಹಾಗೂ ಸಹೋದರರು, ಸಹೋದರಿಯರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here