ಪುತ್ತೂರು: ಭಾರತೀಯ ಜನತಾ ಪಾರ್ಟಿ ಕೆದಂಬಾಡಿ ಶಕ್ತಿಕೇಂದ್ರದ ಸಂಘಟನಾ ಸಭೆಯು ಪುತ್ತೂರು ಗ್ರಾ.ಮಂಡಲ ಅಧ್ಯಕ್ಷರಾದ ಸಾಜ ರಾಧಾಕೃಷ್ಣ ಆಳ್ವ ಅವರ ಅಧ್ಯಕ್ಷತೆಯಲ್ಲಿ ವಿಠಲ್ ರೈ ಮಿತ್ತೋಡಿ ಇವರ ಮನೆಯಲ್ಲಿ ನಡೆಯಿತು.
ಸಭೆಯಲ್ಲಿ ಪಕ್ಷ ಸಂಘಟನೆಯ ಕುರಿತು ಬೂತ್ ಅಧ್ಯಕ್ಷರಿಂದ ವರದಿಗಳನ್ನು ಪಡೆಯಲಾಯಿತು . ಕೆದಂಬಾಡಿ ಗ್ರಾಮದಲ್ಲಿ ನಡೆದಂತಹ ಶಾಸಕರ ನೇತೃತ್ವದಲ್ಲಿ ನಡೆದಂತಹ ಅಭಿವೃದ್ಧಿ ಕಾರ್ಯಗಳ ಬಗ್ಗೆ ಸಭೆಯಲ್ಲಿ ಕಾರ್ಯಕರ್ತರಿಂದ ಮೆಚ್ಚುಗೆ ವ್ಯಕ್ತವಾಯಿತು ಸಂಘಟನೆಯ ಬಗ್ಗೆ ವಿವಿಧ ಸಲಹೆಗಳನ್ನು ನೀಡಲಾಯಿತು
ಸಭೆಯಲ್ಲಿ ಮಂಡಲದ ಪ್ರಧಾನ ಕಾರ್ಯದರ್ಶಿಗಳಾದ ಪುರುಷೋತ್ತಮ ಮುಂಗ್ಲಿಮನೆ ನಿತೀಶ್ ಶಾಂತಿವನ ,ಮಂಡಲದ ಉಪಾಧ್ಯಕ್ಷರಾದ ಮೀನಾಕ್ಷಿ ಮಂಜುನಾಥ್ ,ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷರು ಮತ್ತು ಕೆದಂಬಾಡಿ ಶಕ್ತಿಕೇಂದ್ರದ ಪ್ರಭಾರಿಗಳ ಆದಂತಹ ಮೀನಾಕ್ಷಿ ಶಾಂತಿಗೋಡು, ಹಿಂದುಳಿದ ವರ್ಗದ ಮೋರ್ಚಾದ ಜಿಲ್ಲಾಧ್ಯಕ್ಷ ಆರ್ ಸಿ ನಾರಾಯಣ್ ,ನೆಟ್ಟಣಿಗೆ ಮುಡ್ನೂರು ಮಹಾಶಕ್ತಿ ಕೇಂದ್ರದ ಅಧ್ಯಕ್ಷ ವಿಜಯಕುಮಾರ್ ರೈ ಕೊರಂಗ ಕೆದಂಬಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ರತನ್ ಕುಂಬ್ರ ,ಕೆದಂಬಾಡಿ ಶಕ್ತಿ ಕೇಂದ್ರದ ಪ್ರಮುಖ ನಾರಾಯಣ ಪೂಜಾರಿ ಕುರಿಕ್ಕಾರ, ಬೂತ್ ಅಧ್ಯಕ್ಷ ಕೊರಗಪ್ಪ ಪೂಜಾರಿ ಬಾಲಚಂದ್ರ ರೈ ಚಾವಡಿ ಕಾರ್ಯದರ್ಶಿ ಹಾಗೂ ಪಂಚಾಯತ್ ಸದಸ್ಯರಾದ ಕೃಷ್ಣಕುಮಾರ್ ಇದ್ಯಪ್ಪೆ, ಟಿಎಪಿಎಂಸಿ ಅಧ್ಯಕ್ಷ ಕೃಷ್ಣಕುಮಾರ ಕೆದಂಬಾಡಿ ಗುತ್ತು, ಪುತ್ತೂರು ಗ್ರಾಮಾಂತರ ಮಂಡಲದ ಕಾರ್ಯಕಾರಣಿ ಸದಸ್ಯ ಪುಷ್ಪಾ ಎಂ ಬೋಳೋಡಿ ,ಪಂಚಾಯತ್ ಸದಸ್ಯರಾದ ವಿಠಲ ರೈ ಮಿತ್ತೋಡಿ , ಸುಜಾತ ಮುಳಿಗದ್ದೆ ಜಯಲಕ್ಷ್ಮಿ ಬಲ್ಲಾಲ್ , ರೇವತಿ ಬೋಳೋಡಿ, ಸಹಕಾರಿ ಸಂಘದ ನಿರ್ದೇಶಕ ಸೂರ್ಯ ಪ್ರಸನ್ನ ರೈ ,ನಿಮಿತ ಎನ್ ರೈ ಮಾಜಿ ಪಂಚಾಯತ್ ಸದಸ್ಯ ರೇಖಾ ರಾಘವ ಗೌಡ ಕೆರೆಮೂಲೆ, ರೈತ ಮೋರ್ಚಾದ ತಾಲೂಕು ಸದಸ್ಯ ಮಹಾಬಲ ರೈ ಕುಕ್ಕುಂಜೋಡು, ಯುವಮೋರ್ಚಾ ತಾಲೂಕು ಸಮಿತಿ ಸದಸ್ಯ ಹರೀಶ್ ಮಿತ್ತೋಡಿ ,ಮೋಹನ್ ಅ ಅಂಬೇಡ್ಕರ್ ನಗರ ಉಪಸ್ಥಿತರಿದ್ದರು.