ನಿಡ್ಪಳ್ಳಿ: ಪಾಣಾಜೆ ಆರ್ಲಪದವಿನಲ್ಲಿ ಅಮೂಲ್ಯವಾದ ದಾಖಲೆಗಳು ಹಾಗೂ ಹಣವನ್ನು ಒಳಗೊಂಡ ಪರ್ಸೊಂದು ಆಟೋ ಚಾಲಕರಾದ ಪುಷ್ಪರಾಜ್ ರೈ ಕೋಟೆ ಹಾಗೂ ಜಗದೀಶ್ ರೈ ಕಡಮಾಜೆ ಇವರಿಗೆ ಮೇ. 8 ರಂದು ಬಿದ್ದು ಸಿಕ್ಕಿತು. ತಕ್ಷಣ ಅದರಲ್ಲಿ ಇದ್ದ ವಿಳಾಸ ನೋಡಿ ಅದರ ವಾರಸುದಾರರಾದ ಬೆದ್ರಂಪಳ್ಳದ ಅಹ್ಮದ್ ಸಿನಾನ್ ಅವರನ್ನು ಸಂಪರ್ಕಿಸಿ ಅವರಿಗೆ ಅದನ್ನು ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ.