ಕಡಬ: ಇಲ್ಲಿನ ಫೆಡರಲ್ ಬ್ಯಾಂಕಿನ ಸಮೀಪ ಬ್ಯಾಂಕ್ನ ಸಿಬ್ಬಂದಿ ಜೆರಿನ್ ಎಂಬವರಿಗೆ ಚಿನ್ನದ ಸರವೊಂದು ಬಿದ್ದು ಸಿಕ್ಕಿದ ಘಟನೆ ನಡೆದಿದೆ. ಜೆರಿನ್ರವರು ಸರವನ್ನು ಪತ್ರಕರ್ತ ಪ್ರಕಾಶ್ ರವರಿಗೆ ತಲುಪಿಸಿದ್ದು ಪ್ರಕಾಶ್ ರವರು ಸರವನ್ನು ಕಡಬ ಪೊಲೀಸ್ ಠಾಣೆಯ ಎ.ಎಸ್.ಐ ಸುರೇಶ್ರವರ ಮೂಲಕ ಕಡಬ ಪೊಲೀಸ್ ಠಾಣೆಗೆ ನೀಡಿದ್ದಾರೆ. ಈ ಚಿನ್ನದ ಸರದ ವಾರಸುದಾರರು ಸರಿಯಾದ ಮಾಹಿತಿ, ತೂಕ ಅಥವಾ ದಾಖಲೆಗಳನ್ನು ನೀಡಿ ಕಡಬ ಪೊಲೀಸ್ ಠಾಣೆಯಿಂದ ಚಿನ್ನದ ಸರವನ್ನು ಪಡೆದುಕೊಳ್ಳಬಹುದು ಎಂದು ಕಡಬ ಎಸ್.ಐ ಆಂಜನೇಯ ರೆಡ್ಡಿ ತಿಳಿಸಿದ್ದಾರೆ.