- ಬೂತ್ ಮಟ್ಟದಲ್ಲೇ ಪಕ್ಷವನ್ನು ಬಲಿಷ್ಠವಾಗಿ ಸಂಘಟಿಸಬೇಕು-ಸಾಜ
ಪುತ್ತೂರು: ಬಿಜೆಪಿ ಮುಂಡೂರು-ಕೆಮ್ಮಿಂಜೆ ಶಕ್ತಿ ಕೇಂದ್ರದ ಸಭೆ ಉಮೇಶ್ ಗೌಡ ಗುತ್ತಿನಪಾಲು ನಿವಾಸದಲ್ಲಿ ಮೇ.12ರಂದು ನಡೆಯಿತು. ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ಸಾಜ ರಾಧಾಕಷ್ಣ ಆಳ್ವ ಮಾತನಾಡಿ ಬೂತ್ ಮಟ್ಟದಲ್ಲೇ ಪಕ್ಷವನ್ನು ಬಲಿಷ್ಠವಾಗಿ ಸಂಘಟಿಸಬೇಕು, ಬೂತ್ ಸಮಿತಿ ಸಭೆಯನ್ನು ನಡೆಸಿ ಪಕ್ಷವನ್ನು ಸಂಘಟಿಸುವ ಬಗ್ಗೆ ಚರ್ಚೆ ನಡೆಸಬೇಕು ಎಂದು ಹೇಳಿ ಪಕ್ಷ ಸಂಘಟನೆ ಬಗ್ಗೆ ವಿವರವಾಗಿ ಮಾತನಾಡಿದರು. ಪ್ರ.ಕಾರ್ಯದರ್ಶಿಗಳಾದ ನಿತೀಶ್ ಕುಮಾರ್ ಶಾಂತಿವನ, ಪುರುಷೋತ್ತಮ ಮುಂಗ್ಲಿಮನೆ, ಉಪಾಧ್ಯಕ್ಷ ಹರಿಪ್ರಸಾದ್ ಯಾದವ್, ಪಾಣಾಜೆ ಶಕ್ತಿ ಕೇಂದ್ರದ ಪ್ರಭಾರಿ ಮೀನಾಕ್ಷಿ ಮಂಜುನಾಥ್, ಮಾಧ್ಯಮ ಪ್ರಕೋಷ್ಠದ ತಿಲಕ್ರಾಜ್, ರೈತ ಮೋರ್ಚಾದ ಅಧ್ಯಕ್ಷ ಸುರೇಶ್ ಕಣ್ಣಾರಾಯ, ಶಕ್ತಿ ಕೇಂದ್ರದ ಸಂಚಾಲಕರಾದ ಉಮೇಶ್ ಗೌಡ ಅಂಬಟ, ಒಬಿಸಿ ಮೋರ್ಚಾ ತಾಲೂಕು ಸಮಿತಿ ಸದಸ್ಯ ಅನಿಲ್ ಕುಮಾರ್ ಕಣ್ಣಾರ್ನೂಜಿ, ಮುಂಡೂರು ಗ್ರಾ.ಪಂ ಅಧ್ಯಕ್ಷೆ ಪುಷ್ಪಾ ಎನ್, ಸದಸ್ಯರಾದ ಅಶೋಕ್ ಪುತ್ತಿಲ, ಬಾಲಕೃಷ್ಣ ಪೂಜಾರಿ, ಯಶೊಧ, ಕಾವ್ಯ ತೌಡಿಂಜ, ಬೂತ್ ಸಮಿತಿ ಅಧ್ಯಕ್ಷ ಸದಾಶಿವ ಶೆಟ್ಟಿ ಪಟ್ಟೆ, ಕಾರ್ಯದರ್ಶಿ ರಮೇಶ್ ಗೌಡ ಪಜಿಮಣ್ಣು, ಜನಾರ್ಧನ ಪೂಜಾರಿ, ಉಮೇಶ್ ಗೌಡ ಗುತ್ತಿನಪಾಲು, ಗ್ರಾ.ಪಂ ಮಾಜಿ ಸದಸ್ಯೆ ಪ್ರೇಮಲತಾ, ಅರುಣ್ ಕುಮಾರ್ ಗುತ್ತಿನಪಾಲು, ಚಂದ್ರಕಲಾ, ಜಗದೀಶ್, ವಾಸುದೇವ ಸಾಲ್ಯಾನ್ ಉಪಸ್ಥಿತರಿದ್ದರು.