ಪುತ್ತೂರು: ಮೂಲತಃ ಕಾಸರಗೋಡು ಕೊರುವೈಲು ನಿವಾಸಿಯಾಗಿದ್ದು ಬನ್ನೂರು ಗ್ರಾಮದ ಜೈನರಗುರಿಯಲ್ಲಿ ವಾಸವಿದ್ದ ನಾರಾಯಣ ನಾಯಕ್ (91ವ.)ರವರು ಅಲ್ಪ ಕಾಲದ ಅಸೌಖ್ಯದಿಂದಾಗಿ ಮೇ 14ರಂದು ಸ್ವಗೃಹದಲ್ಲಿ ನಿಧನರಾಗಿದ್ದಾರೆ. ಇವರು ಕಾಸರಗೋಡು ತಾಲೂಕು ಆರೋಗ್ಯ ನಿರೀಕ್ಷಕರಾಗಿ ಕಾರ್ಯ ನಿರ್ವಹಿಸಿ ನಿವೃತ್ತರಾಗಿದ್ದರು. ಮೃತರು ಪತ್ನಿ ಗುಲಾಬಿ, ಮಕ್ಕಳಾದ ಸುಧೀರ್ ನಾಯಕ್, ಸುನೀಲ್ ನಾಯಕ್, ಪುತ್ರಿಯರಾದ ಉಷಾ ಪುರಂದರ ನಾಯಕ್ ಮುಕ್ರಂಪಾಡಿ, ಸರಿತಾ ಸುದರ್ಶನ ನಾಯಕ್ ಸವಣೂರು ಮತ್ತು ಮೊಮ್ಮಕ್ಕಳನ್ನು ಅಗಲಿದ್ದಾರೆ.