ವಳಾಲಿನ ಯುವಕ ಬಿ ಸಿ ರೋಡ್ ನಲ್ಲಿ ಮೃತ್ಯು

0

ನೆಲ್ಯಾಡಿ : ವಳಾಲಿನ ಯುವಕನೋರ್ವನ ಶವ ಬಂಟ್ವಾಳದ ಬಿ ಸಿ ರೋಡ್ ಬಂಟರ ಭವನದ ಬಳಿ ಮೇ 7 ರಂದು ಬೆಳಿಗ್ಗೆ ಪತ್ತೆಯಾಗಿದೆ.ಬಜತ್ತೂರು ಗ್ರಾಮದ ವಳಾಲು ಎಂಜಿರಡ್ಕ ನಿವಾಸಿ ದಿ. ಸಂಜೀವ ಗೌಡ ಅವರ ಪುತ್ರ ಸಂತೋಷ್ (32ವ.) ಮೃತಪಟ್ಟ ದುರ್ದೈವಿ. ಇವರ ಶವ ಮೇ 7ರಂದು ಬೆಳಿಗ್ಗೆ ಬಿ ಸಿ ರೋಡ್ ಸಮೀಪ ಬಂಟ್ವಾಳ ಬಂಟರ ಭವನದ ಪಕ್ಕ ಪತ್ತೆಯಾಗಿದೆ.


ಸಂತೋಷ್ ಅವರು ಮಂಗಳೂರಿನಲ್ಲಿ ಮೆಡಿಕಲ್ ರೆಪ್ರೆಸೆಂಟಿವ್ ಆಗಿ ಕೆಲಸ ಮಾಡುತ್ತಿದ್ದರು. ಮೇ 6 ರಂದು ಸಂಜೆ ಮನೆಯಿಂದ ಮಂಗಳೂರಿಗೆ ತನ್ನ ಸ್ಕೂಟರ್ ನಲ್ಲಿ ಹೊರಟವರು ಬಿ ಸಿ ರೋಡ್ ಬಂಟರ ಭವನದ ಸಮೀಪ ಸ್ಕೂಟರ್ ನಿಲ್ಲಿಸಿ ಮೂತ್ರ ವಿಸರ್ಜನೆ ಗೆಂದು ಹೋದವರು ಹೆದ್ದಾರಿ ಬದಿ ರಾಶಿ ಹಾಕಿದ್ದ ಕಬ್ಬಿಣದ ತುಂಡು ಕಾಲಿಗೆ ತಾಗಿ ಆಯತಪ್ಪಿ ಪಕ್ಕದ ಹೊಂಡಕ್ಕೆ ಬಿದ್ದು ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ. ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.

LEAVE A REPLY

Please enter your comment!
Please enter your name here