- ಶಾಲಾ ನಾಯಕನಾಗಿ ರಂಜಿತ್ ಕುಮಾರ್; ಉಪ ನಾಯಕಿಯಾಗಿ ಧೃತಿ
ಪುತ್ತೂರು: ಶಾಂತಿಗೋಡು ಸ.ಹಿ.ಪ್ರಾ.ಶಾಲಾ ಮಂತ್ರಿಮಂಡಲ ರಚನೆ ಶಾಲಾ ಮುಖ್ಯಗುರು ಸವಿತಾ ಕುಮಾರಿ ಎಂ.ಡಿ ಅಧ್ಯಕ್ಷತೆಯಲ್ಲಿ ಮತದಾನ ಮಾಡುವುದರ ಮೂಲಕ ರಚಿಸಲಾಯಿತು. ಚುನಾವಣೆಯಲ್ಲಿ ಸಹ ಶಿಕ್ಷಕಿ ಸರೋಜ ಪಿ.ಕೆ, ದೈ.ಶಿ.ಶಿಕ್ಷಕಿ ಸಿದ್ಧಲಿಂಗಮ್ಮ, ಅತಿಥಿ ಶಿಕ್ಷಕಿ ಕೃಷ್ಣವೇಣಿ ಚುನಾವಣೆ ನಡೆಸಿಕೊಟ್ಟರು.
ಚುನಾವಣೆಯಲ್ಲಿ ಶಾಲಾ ನಾಯಕನಾಗಿ ೭ನೇ ತರಗತಿಯ ವಿದ್ಯಾರ್ಥಿ ರಂಜಿತ್ ಕುಮಾರ್ ಹಾಗೂ ಉಪ ನಾಯಕಿಯಾಗಿ 7ನೇ ತರಗತಿ ವಿದ್ಯಾರ್ಥಿನಿ ಧೃತಿ ಆಯ್ಕೆಯಾದರು.
ಆರೋಗ್ಯ, ಸ್ವಚ್ಛತೆಯ ಮಂತ್ರಿಯಾಗಿ 6ನೇ ತರಗತಿಯ ತೀರ್ಥೇಶ್, 7ನೇ ತರಗತಿಯ ಧೃತಿ ಹಾಗೂ5ನೇ ತರಗತಿಯ ನಿಕಿತಾ, ಗೃಹ ರಕ್ಷಣಾ ಮಂತ್ರಿಯಾಗಿ 7ನೇ ತರಗತಿಯ ಹರ್ಷಿತ್ ಹಾಗೂ 6ನೇ ತರಗತಿಯ ಕೃತಿಕ್, ಸಾಂಸ್ಕೃತಿಕ ಮಂತ್ರಿಯಾಗಿ 7ನೇ ತರಗತಿಯ ಲತೇಶ್, 6ನೇ ತರಗತಿಯ ಚಾರಿತ್ರ್ಯ, ವೈಷ್ಣವ, ಹಾಗೂ 5 ನೇ ತರಗತಿಯ ಆಶಿಕಾ, ನೀರಾವರಿ, ತೋಟಗಾರಿಕೆ ಮಂತ್ರಿಯಾಗಿ7ನೇ ತರಗತಿಯ ಕೀರ್ತನ್, ಆಸ್ತಿಕ್ ಹಾಗೂ 5ನೇ ತರಗತಿಯ ಹೇಮಂತ್, ಆಹಾರ ಮಂತ್ರಿಯಾಗಿ 7ನೇ ತರಗತಿಯ ಧನುಷ್. ಪಿ, 5ನೇ ತರಗತಿಯ ಧವನ್ ಕುಮಾರ್ ಧನ್ಯಶ್ರೀ, ಕ್ರೀಡಾ ಮಂತ್ರಿಯಾಗಿ 7ನೇ ತರಗತಿಯ ಧನುಷ್ ಕೆ ಹಾಗೂ 5ನೇ ತರಗತಿಯ ಕುಮಾರ್ ಕೌಶಿಕ್ ಹಾಗೂ ಸೌಪರ್ಣಿಕ ಆಯ್ಕೆಯಾಗಿದ್ದಾರೆ.