Home ಚಿತ್ರ ವರದಿ ಮಾಣಿ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿದ್ಯಾರ್ಥಿ ಸಂಘ ಉದ್ಘಾಟನೆ
ವಿಟ್ಲ : ಮಾಣಿ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿದ್ಯಾರ್ಥಿ ಸಂಘ ಉದ್ಘಾಟನೆ ಹಾಗೂ ವಿದ್ಯಾರ್ಥಿ ಮಂಡಲದ ಪ್ರಮಾಣ ವಚನ ಸ್ವೀಕಾರ ನಡೆಯಿತು. ಶಾಲಾ ಮುಖ್ಯೋಪಾಧ್ಯಾಯಿನಿ ವಿಜಯಲಕ್ಷ್ಮಿ ವಿ ಶೆಟ್ಟಿ ರವರು ವಿದ್ಯಾರ್ಥಿಗಳಿಗೆ ಪ್ರಮಾಣ ವಚನ ಬೋಧಿಸಿದರು. ನಾಯಕತ್ವದ ಗುಣ ಬಾಲ್ಯದಿಂದಲೇ ಮಕ್ಕಳಲ್ಲಿ ಮೈಗೂಡಬೇಕು ಎಂದರು. ಶಾಲಾ ಮುಖ್ಯ ಶ್ಯೆಕ್ಷಣಿಕ ಅಧಿಕಾರಿ ರವೀಂದ್ರ ಡಿ.ರವರು ಪ್ರಮಾಣ ವಚನ ಸ್ವೀಕರಿಸಿದ ವಿದ್ಯಾರ್ಥಿಗಳು ಜವಾಬ್ದಾರಿ ಮತ್ತು ಕರ್ತವ್ಯ ಗಳನ್ನು ಹೇಗೆ ನಿರ್ವಹಿಸಬೇಕು ಎಂಬುದಾಗಿ ತಿಳಿಸಿದರು. ಶಿಕ್ಷಕಿ ಶೋಭಾ ಎಂ ಶೆಟ್ಟಿ ರವರು ಚುನಾವಣಾ ನೋಂದಾವಣಿ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದರು . ಶಾಲಾ ನಾಯಕಿಯಾಗಿ ಸನಿಹ ಉಪನಾಯಕನಾಗಿ ಶ್ರವಣ ಎಸ್. ಜಿ, ಗೃಹಮಂತ್ರಿ ಯಾಗಿ ಗ್ರೀಷ್ಮ,ನಿವ್ಯ ರೈ, ಸಾಂಸ್ಕೃತಿಕ ಮಂತ್ರಿಯಾಗಿ ಮಾನ್ಯ. ಆರ್ ಶೆಟ್ಟಿ,ಚಿನ್ಮಯಿ, ಕ್ರೀಡಾಮಂತ್ರಿಯಾಗಿ ಕೀರ್ತನ್ ಕೆ.ಎ., ಕ್ಷತಿಜ್ ಎಸ್.ಶೆಟ್ಟಿ. , ನೀರಾವರಿ ಹಾಗೂ ವಿದ್ಯುತ್ ಮಂತ್ರಿಯಾಗಿ ಮೊಹಮ್ಮದ್ ಅಜ್ಮಾಲ್, ಕಾರ್ತಿಕ್ ಜಿ.ಕೆ, ಆರೋಗ್ಯ ಮಂತ್ರಿಯಾಗಿ ಪ್ರೇಕ್ಷಾ ಮತ್ತು ಪ್ರಗತಿ ಪ್ರಮಾಣ ವಚನ ಸ್ವೀಕರಿಸಿದರು . ಶಿಕ್ಷಕಿಯಾದ ಲೀಲಾ ಕಾರ್ಯಕ್ರಮ ನಿರೂಪಿಸಿದರು.
error: Content is protected !!