ಕೆಯ್ಯೂರು: ಸ್ನಾನ ಮಾಡಲೆಂದು ಹೋಗಿದ್ದ ಯುವಕ ನೇಣು ಬಿಗಿದು ಆತ್ಮಹತ್ಯೆ

0

ಪುತ್ತೂರು: ಸ್ನಾನ ಮಾಡಿ ಬರುತ್ತೇನೆಂದು ಹೋಗಿದ್ದ ಯುವಕನೋರ್ವ ಮನೆ ಪಕ್ಕದಲ್ಲೇ ಮರವೊಂದಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೆಯ್ಯೂರು ದೇರ್ಲದಿಂದ ವರದಿಯಾಗಿದೆ.

ದೇರ್ಲದ ದಿ.ಚೋಮ ಬೆಳಂದೂರುರವರ ಮಗ ಗಣೇಶ್(32ವ.)ಆತ್ಮಹತ್ಯೆ ಮಾಡಿಕೊಂಡವರು. ಪುತ್ತೂರಿನಲ್ಲಿ ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದ ಗಣೇಶ್ ಜೂ.7ರಂದು ಕೆಲಸಕ್ಕೆ ರಜೆ ಮಾಡಿ ಮನೆಯಲ್ಲೇ ಇದ್ದರು. ಸಂಜೆ ವೇಳೆಗೆ, ಸ್ನಾನ ಮಾಡಿ ಬರುತ್ತೇನೆಂದು ತಾಯಿಯಲ್ಲಿ ಹೇಳಿ ಹೋದ ಅವರು ಸಮಯ ಮೀರಿದರೂ ಹಿಂತಿರುಗಿ ಬರಲಿಲ್ಲ.ಅವರ ಸಹೋದರ ಗುರುಪ್ರಸಾದ್‌ರವರು ಕೆಯ್ಯೂರು ದೇವಳದಲ್ಲಿ ನಡೆದ ಭಜನಾ ಕಾರ್ಯಕ್ರಮದಲ್ಲಿದ್ದರು.ಮನೆಯಲ್ಲಿದ್ದ ತಾಯಿ,ನೆರೆ ಮನೆಯವರು ಸೇರಿ ಹುಡುಕಾಡಿದಾಗ ಮನೆ ಪಕ್ಕದಲ್ಲೇ ಇರುವ ಗುಡ್ಡದಲ್ಲಿ ಮರವೊಂದಕ್ಕೆ ನೇಣು ಬಿಗಿದು ಗಣೇಶ್‌ರವರು ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡು ಬಂದಿದೆ.ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ.ಮೃತ ಗಣೇಶ್‌ರವರು ತಾಯಿ ಗಂಗು ಹಾಗೂ ತಮ್ಮ ಗುರುಪ್ರಸಾದ್ ಅವರನ್ನು ಅಗಲಿದ್ದಾರೆ.ಸಂಪ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

3 ತಿಂಗಳ ಹಿಂದೆ ಅಪಘಾತಕ್ಕೆ ಬಲಿಯಾಗಿದ್ದ ಅಣ್ಣ

ಮೃತ ಗಣೇಶ್ ಅವರ ಅಣ್ಣ ಪ್ರವೀಣ್ ಅವರು ಮೂರು ತಿಂಗಳ ಹಿಂದೆಯಷ್ಟೆ ಕೆಯ್ಯೂರಿನಲ್ಲಿ ಜೀಪು ಮತ್ತು ರಿಕ್ಷಾ ಮಧ್ಯೆ ಸಂಭವಿಸಿದ್ದ ಭೀಕರ ಅಪಘಾತದಲ್ಲಿ ಮೃತಪಟ್ಟಿದ್ದರು.ಆ ಬಳಿಕ ಗಣೇಶ್‌ರವರು ಒಂದು ರೀತಿ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎಂದು ಹೇಳಲಾಗುತ್ತಿದೆ.

LEAVE A REPLY

Please enter your comment!
Please enter your name here