ಪುತ್ತೂರು: ಸುಳ್ಯ ನಗರ ಪಂಚಾಯತ್ ಮುಖ್ಯಾಧಿಕಾರಿಯಾಗಿ ಪುತ್ತೂರಿನ ಸುಧಾಕರ ಎಂ.ಎಚ್.ರವರು ಜೂನ್ 9ರಂದು ಕರ್ತವ್ಯಕ್ಕೆ ಹಾಜರಾಗಿದ್ದಾರೆ.
ಸೋಮವಾರಪೇಟೆ ಪಟ್ಟಣ ಪಂಚಾಯತ್, ಚಿಕ್ಕಬಳ್ಳಾಪುರದ ಬಾಗೇಪಳ್ಳಿ ಪುರಸಭೆ, ಪುತ್ತೂರು ಪುರಸಭೆ, ಉತ್ತರ ಕನ್ನಡದ ಅಂಕೋಲಾ ಪುರಸಭೆ, ಬಂಟ್ವಾಳ ಪುರಸಭೆ ಮತ್ತು ಬೆಳ್ತಂಗಡಿ ಪಟ್ಟಣ ಪಂಚಾಯತಿಗಳಲ್ಲಿ ಮುಖ್ಯಾಧಿಕಾರಿಯಾಗಿ ಹಾಗೂ ಜಿಲ್ಲಾ ನಗರಾಭಿವೃದ್ಧಿ ಕೋಶದ ವ್ಯವಸ್ಥಾಪಕರಾಗಿ ಕಾರ್ಯ ನಿರ್ವಹಿಸಿದ್ದ ಸುಧಾಕರ್ ಅವರು ಇದೀಗ ಬೆಳ್ತಂಗಡಿಯಿಂದ ಸುಳ್ಯಕ್ಕೆ ವರ್ಗಾವಣೆಗೊಂಡಿದ್ದಾರೆ. ಪುತ್ತೂರು ಬೈಪಾಸ್ ಬಳಿಯ ನಿವಾಸಿಯಾಗಿರುವ ಸುಧಾಕರ್ ಅವರ ಪತ್ನಿ ಪೂರ್ಣಿಮಾ ಗೃಹಿಣಿಯಾಗಿದ್ದು ಪ್ರಥಮ ಪುತ್ರಿ ಅತಿಥಿಯವರು ಅಂಬಿಕಾ ವಿದ್ಯಾಲಯದಲ್ಲಿ ಅಂತಿಮ ವರ್ಷದ ಪದವಿ ವ್ಯಾಸಂಗ ಮಾಡುತ್ತಿದ್ದು ದ್ವಿತೀಯ ಪುತ್ರಿ ಅನನ್ಯರವರು ಅಂಬಿಕಾ ವಿದ್ಯಾಲಯದಲ್ಲಿ ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿದ್ದಾರೆ.