ಉಪ್ಪಿನಂಗಡಿ: ಕೆಮ್ಮಾರ ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆಯ ಎಸ್ಡಿಎಂಸಿ ಅಧ್ಯಕ್ಷರಾಗಿ ಅಝೀಝ್ ಬಿ.ಕೆ., ಹಾಗೂ ಉಪಾಧ್ಯಕ್ಷರಾಗಿ ಸುಮಯ್ಯ ಆಯ್ಕೆಯಾಗಿದ್ದಾರೆ.
ಎಸ್ಡಿಎಂಸಿ ನಿಕಟಪೂರ್ವ ಅಧ್ಯಕ್ಷ ಹಂಝ ಅವರ ಅಧ್ಯಕ್ಷತೆಯಲ್ಲಿ ನಡೆದ ಪೋಷಕರ ಸಭೆಯಲ್ಲಿ ಈ ಆಯ್ಕೆ ನಡೆಯಿತು. ಸದಸ್ಯರಾಗಿ ವಾಮನ ಕೆಮ್ಮಾರ, ಹಂಝ ಬಿ, ಅಬ್ದುಲ್ ಅಜೀಜ್ ಜಿ., ಪದ್ಮನಾಭ ಶೆಟ್ಟಿ, ಹಂಝ ಪಿ., ಸೆಲಿಕತ್, ವನಿತಾ, ತೇಜಾವತಿ, ಮಹಮ್ಮದ್ ಶರೀಫ್, ಆಯಿಷಾ, ರಶೀದಾ, ಅಬ್ದುಲ್ ಖಾದರ್, ಅಸ್ಮಾ, ಅಬ್ಬಾಸ್, ಯೋಗಿತಾ, ಜಮೀಲ ಬಡ್ಡಮೆ ಆಯ್ಕೆಯಾದರು. ಅಂಗನವಾಡಿ ಶಿಕ್ಷಕಿ ಸುಂದರಿ ಹಾಗೂ ಪೋಷಕರು ಉಪಸ್ಥಿತರಿದ್ದರು. ಮುಖ್ಯಗುರು ಜಯಶ್ರೀ ಎಂ., ಸ್ವಾಗತಿಸಿ ಆಯ್ಕೆ ಪ್ರಕ್ರಿಯೆ ನಡೆಸಿಕೊಟ್ಟರು. ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕಿ ಮೋಹನಾಂಗಿ ಎ., ವಂದಿಸಿದರು. ಗೌರವ ಶಿಕ್ಷಕ ಜುನೈದ್ ಸಹಕರಿಸಿದರು.