ಪುತ್ತೂರು ಅಣ್ಣನ ಮನೆಗೆ ಬಂದಿದ್ದ ಏಲಕ್ಕಿ ವ್ಯಾಪಾರಸ್ಥ ನಾಪತ್ತೆ – ದೂರು

0

ಪುತ್ತೂರು: ತಮಿಳುನಾಡು ಜಿಲ್ಲೆಯ ಧೇಣಿ ಜಿಲ್ಲೆಯ ಬೋಡಿನಾಯಕನೂರಿನಲ್ಲಿ ಏಲಕ್ಕಿ ವ್ಯಾಪಾರ ಮಾಡಿಕೊಂಡಿದ್ದು ಪುತ್ತೂರು ಸಹೋದರನ ಮನೆಗೆ ಬಂದ ಸಹೋದರೊಬ್ಬರು ಜೂ.೪ ರಂದು ದೇವಸ್ಥಾಕ್ಕೆಂದು ಹೋದವರು ನಾಪತ್ತೆಯಾಗಿದ್ದಾರೆಂದು ಅವರ ಸಹೋದರ ದೂರು ನೀಡಿದ್ದಾರೆ.

 


ಚಿಕ್ಕಪುತ್ತೂರು ಮಡಿವಾಳಕಟ್ಟೆ ನಿವಾಸಿ ಎಮ್ ಕಣ್ಣನ್ ಅವರ ಸಹೋದರ ಮತ್ತು ತಮಿಳುನಾಡಿನಲ್ಲಿ ಏಲಕ್ಕಿ ವ್ಯಾಪಾರ ಮಾಡುತ್ತಿರುವ ಎಮ್ ಲೋಕನಾಥನ್ (೪೦ವ) ನಾಪತ್ತೆಯಾದವರು. ಎಮ್ ಲೋಕನಾಥ್ ಅವರು ಅವರು ಜೂ.೨ ರಂದು ತಮಿಳುನಾಡಿನಿಂದ ಪತ್ನಿ ಜ್ಯೋತಿ ಮತ್ತು ಪುತ್ರಿಯೊಂದಿಗೆ ಪುತ್ತೂರಿಗೆ ಬಂದ ಅವರು ಜೂ.೪ ರಂದು ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನಕ್ಕೆ ಹೋಗಿ ಬರುವುದಾಗಿ ಹೋದವರು ಪುನಃ ಹಿಂದಿರುಗದೆ ನಾಪತ್ತೆಯಾಗಿದ್ದಾರೆ. ಅವರು ಮನೆಯಿಂದ ಹೋಗುವಾಗ ಮೊಬೈಲ್ ಕೂಡಾ ಬಿಟ್ಟು ಹೋಗಿರುವುದರಿಂದ ಸಂಪರ್ಕ ಹೊಂದಲಾಗಿಲ್ಲ. ಜೊತೆಗೆ ಸ್ಥಳೀಯವಾಗಿ ವಿಚಾರಿಸಿದಾಗಲೂ ಪತ್ತೆಯಾಗದ ಹಿನ್ನಲೆಯಲ್ಲಿ ಇದೀಗ ತಡವಾಗಿ ಜೂ.೧೮ ರಂದು ದೂರು ನೀಡಲಾಗಿದೆ. ನಾಪತ್ತೆಯಾದವರ ಅಣ್ಣ ಎಮ್ ಕಣ್ಣನ್ ಅವರು ನೀಡಿದ ದೂರಿನಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here