ಪುತ್ತೂರು: ಪುತ್ತೂರಿನ ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯ ಸರಣಿ ಕಾರ್ಯಕ್ರಮ ದರ್ಬೆ ಶಶಿಶಂಕರ ಸಭಾಗಂಣದಲ್ಲಿ ನೃತ್ಯಾಂತರಂಗದ 91ನೇ ಸರಣಿಯಲ್ಲಿ ಸಂಸ್ಥೆಯ ಕಾಂಭೋಜಿ ತಂಡದ ವಿದ್ಯಾರ್ಥಿನಿಯರಿಂದ ಭರತನಾಟ್ಯ ಪ್ರಸ್ತುತಿಗೊಂಡಿತು.
ವಿದ್ಯಾರ್ಥಿಗಳಾದ ಕು.ಮಂದಿರಾ ಕಜೆ, ಲಾಸ್ಯ ಸಂತೋಷ್, ವೈಭವಿಲಕ್ಷ್ಮಿ, ಅವನಿ, ಸೋನು ರಾಜ್, ರಿಶಿತ ಮತ್ತು ಸಿಂಚನಾ ಭರತನಾಟ್ಯ ಪ್ರದರ್ಶನ ಮಾಡಿದರು. ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕ ಐತಪ್ಪ ನಾಯ್ಕ್ ಅಭ್ಯಾಗತರಾಗಿ ಶುಭಹಾರೈಸಿದರು. ಹಿಮ್ಮೇಳದ ನಟುವಾಂಗದಲ್ಲಿ ವಿದ್ವಾನ್ ದೀಪಕ್ ಕುಮಾರ್, ಹಾಡುಗಾರಿಕೆಯಲ್ಲಿ ವಿದುಷಿ ಪ್ರೀತಿಕಲಾ, ಮೃದಂಗದಲ್ಲಿ ವಿದ್ವಾನ್ ಶ್ಯಾಂ ಭಟ್ ಸುಳ್ಯ ಹಾಗೂ ಕೊಳಲಿನಲ್ಲಿ ವಿದ್ವಾನ್ ಕೃಷ್ಣಗೋಪಾಲ್ ಪುಂಜಾಲಕಟ್ಟೆ ಸಹಕರಿಸಿದ್ದರು.