ಕಾವು:ಭಾರತೀಯ ಜನತಾ ಪಾರ್ಟಿ ಮಾಡ್ನೂರು ಶಕ್ತಿ ಕೇಂದ್ರದ ವತಿಯಿಂದ ಡಾ| ಶ್ಯಾಮ್ ಪ್ರಸಾದ್ ಮುಖರ್ಜಿರವರ ಬಲಿದಾನ ದಿವಸ್ ಕಾರ್ಯಕ್ರಮ ಕಾವು ಸಂಜೀವ ಗೌಡರವರ ಮನೆಯಲ್ಲಿ ನಡೆಯಿತು.
ಶಕ್ತಿ ಕೇಂದ್ರ ಸಂಚಾಲಕ ಲೋಕೇಶ್ ಚಾಕೋಟೆ ಕಾರ್ಯಕ್ರಮದ ಕುರಿತು ಮಾತನಾಡಿದರು. ಕಾರ್ಯಕ್ರಮದಲ್ಲಿ ತಾಲೂಕು ಸಾಂಸ್ಕೃತಿಕ ಪ್ರಕೋಷ್ಟದ ಅಧ್ಯಕ್ಷ ಭಾಸ್ಕರ ಬಲ್ಯಾಯ, ಬಿಜೆಪಿ ಯುವ ಮೋರ್ಚಾ ಗ್ರಾಮಾಂತರ ಮಂಡಲದ ಪ್ರಧಾನ ಕಾರ್ಯದರ್ಶಿ ಶ್ರೀಕಾಂತ್ ಕಾವು, ಅರಿಯಡ್ಕ ಗ್ರಾಮ ಪಂಚಾಯತ್ ಮಾಜಿ ಸದಸ್ಯ ಹೊನ್ನಪ್ಪ ಪೂಜಾರಿ ಪಿಲಿಪಂಜರ, ಬೂತ್ ಆಧ್ಯಕ್ಷರುಗಳಾದ ನಾರಾಯಣ ಆಚಾರ್ಯ ಮಳಿ, ಪ್ರವೀಣ್ ಪಳನೀರು, ಪ್ರಜ್ವಲ್ ಕೆರೆಮಾರು, ಬೂತ್ ಕಾರ್ಯದರ್ಶಿ ಸಂಕಪ್ಪ ಪೂಜಾರಿ ಚಾಕೋಟೆ, ಪ್ರಮುಖರಾದ ಧನಂಜಯ ನಾಯ್ಕ ಕುಂಞಕುಮೇರು, ನವೀನ್ ನನ್ಯ ಪಟ್ಟಾಜೆ, ಯೋಗೀಶ್ ಕಾವು, ಶೇಷಪ್ಪ ನಾಯ್ಕ ಸಸ್ಪೆಟ್ಟಿ ಉಪಸ್ಥಿತರಿದ್ದರು.