ಪುತ್ತೂರು: `ಅಂಬರ ಮರ್ಲೆರ್’ ಖ್ಯಾತಿಯ ಬಳಿಕ ಇದೀಗ ಸುದ್ದಿ ಮೀಡಿಯಾ ನಿರ್ಮಾಣದಲ್ಲಿ ರಂಗಭೂಮಿ ಕಲಾವಿದ, ನಿರ್ದೇಶಕ ಸುಂದರ್ ರೈ ಮಂದಾರ ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿರುವ `ಪೂರಿ ಬಾಜಿ’ ಹಾಸ್ಯ ಧಾರಾವಾಹಿ ಚಿತ್ರೀಕರಣಕ್ಕೆ ಜೂ.24 ರಂದು ಮುಹೂರ್ತ ನಡೆದಿದ್ದು ಜೂ.25ರಂದು ತೆಂಕಿಲ ವಿನ್ಯಾಸ ನಿಲಯದ ಕೇಶವ ನಾಯ್ಕ್ರವರ ಮನೆಯಲ್ಲಿ ಎರಡನೇ ದಿನದ ಚಿತ್ರೀಕರಣ ನಡೆಯಿತು. ವಿನಯ್ ಕುಮಾರ್ ಭಂಡಾಡಿ, ಮಾರ್ಕೆಟಿಂಗ್ ವಿಭಾಗದ ಪುತ್ತೂರು ಸುರೇಶ್ ಶೆಟ್ಟಿ, ರಂಗಭೂಮಿ ಕಲಾವಿದ ನಿರ್ದೇಶಕ ಸುಂದರ್ ರೈ ಮಂದಾರ, ನಟ-ದೀಪಕ್ ರೈ ಪಾಣಾಜೆ, ಕ್ಯಾಮರ್ ಮ್ಯಾನ್ ಸುಧಾಕರ್ ಪಡೀಲ್, ಸಹ ನಿರ್ದೇಶಕ ಚಂದ್ರಹಾಸ ಶೆಟ್ಟಿ ಮಾಣಿ, ಜ್ಯೂನಿಯರ್ ಬೊಳಾರ್ ನೆಲ್ಯಾಡಿ, ಪ್ರಸಾದ್ ಕೊಯಿಲ, ಸಮದ್ ಕುರಿಯ, ತೆಂಕಿಲ ವಿನ್ಯಾಸ ನಿಲಯದ ಕೇಶವ ನಾಯ್ಕ್ ಭಾಗವಹಿಸಿದರು.
ಕಲಾವಿದರ ಗಮನಕ್ಕೆ: ಪೂರಿಬಾಜಿ ತುಳು ಹಾಸ್ಯ ಧಾರವಾಹಿಯಲ್ಲಿ ಅಭಿನಯಿಸಲು ಆಸಕ್ತಿಯಿರುವ ಕಲಾವಿದರು 9980202308ಕ್ಕೆ ಸಂಪರ್ಕಿಸುವಂತೆ ನಿರ್ದೇಶಕ ಸುಂದರ ರೈ ಮಂದಾರ ಹೇಳಿದ್ದಾರೆ.