ಪುತ್ತೂರು: ಈಶ್ವರಮಂಗಲ ಸಮೀಪದ ಸುಳ್ಯಪದವು ರಸ್ತೆಯ ಸುಲ್ತಾನ್ ನಗರದಿಂದ ಕುತ್ಯಾಳ ಕಡೆ ಹೋಗುವ ರಸ್ತೆ ತೀರಾ ಹದಗೆಟ್ಟು ವಾಹನ ಸಂಚಾರಕ್ಕೆ ತೊಂದೆರಯಾಗುತ್ತಿದ್ದ ಹಿನ್ನೆಲೆಯಲ್ಲಿ ಎಸ್ಡಿಪಿಐ ಪಾಳ್ಯತ್ತಡ್ಕ ಬೂತ್ ವತಿಯಿಂದ ಶ್ರಮದಾನದ ಮೂಲಕ ದುರಸ್ತಿ ಮಾಡಲಾಯಿತು.
ಎಸ್ಡಿಪಿಐ ಪಾಳ್ಯತ್ತಡ್ಕ ಬೂತ್ ಸಮಿತಿ ಅಧ್ಯಕ್ಷ ಉಮ್ಮರ್ ಪಿ.ಎಂ, ಕಾರ್ಯದರ್ಶಿ ಅಹಮ್ಮದ್ ನಿಝಾರ್, ನೆ.ಮುಡ್ನೂರು ಗ್ರಾ.ಪಂ ಸದಸ್ಯ ಸಂಶುದ್ದೀನ್, ಪಕ್ಷದ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಶ್ರಮದಾನದಲ್ಲಿ ಪಾಲ್ಗೊಂಡರು.