ಪುತ್ತೂರು:ಇತ್ತೀಚೆಗಷ್ಟೆ ಭಾರೀ ಮಳೆಯಿಂದಾಗಿ ಮಳೆ ನೀರು ಹೊಳೆಯಂತೆ ರಸ್ತೆಯಲ್ಲಿಯೇ ಹರಿದ ಪರಿಣಾಮ ನೆಲ್ಲಿಕಟ್ಟೆಯಲ್ಲಿ ನಗರಸಭೆಯಿಂದ ಚರಂಡಿ ಹೂಳೆತ್ತುವ ಕೆಲಸ ನಡೆದಿದ್ದರೂ ಇದೀಗ ಜು.6ರಂದು ಸಂಜೆ ಸುರಿದ ಭಾರೀ ಮಳೆಯಿಂದಾಗಿ ಮಳೆ ನೀರು ರಸ್ತೆಯಲ್ಲಿಯೇ ಹರಿದು ರೋಡು ತೋಡಾಗಿತ್ತು.
ನೆಲ್ಲಿಕಟ್ಟೆ ಖಾಸಗಿ ಬಸ್ ನಿಲ್ದಾಣಕ್ಕೆ ಭುವನೇಂದ್ರ ಕಲ್ಯಾಣ ಮಂಟಪದ ರಸ್ತೆಯಾಗಿ ಹೋಗುವಲ್ಲಿ ದೇವಪ್ಪ ನೋಂಡಾ ಅವರ ಮನೆಯ ಸಮೀಪದಿಂದ ಖಾಸಗಿ ಬಸ್ ನಿಲ್ದಾಣದ ತನಕದ ಚರಂಡಿಯಿಂದ ಮಳೆ ನೀರು ಉಕ್ಕಿ ಪ್ರವಾಹದಂತೆ ರಸ್ತೆಯಲ್ಲೇ ಹರಿದಿದೆ.