ಪುತ್ತೂರು:ಭಾರೀ ಮಳೆಗೆ ಚಿಕ್ಕಪುತ್ತೂರಿನಲ್ಲಿ ಮಳೆ ನೀರು ಹರಿಯುತ್ತಿರುವ ತೋಡಿನ ಮೇಲೆ ಜು.6ರಂದು ತಡೆಗೋಡೆಯೊಂದು ಕುಸಿದು ಬಿದ್ದು ತೋಡು ಬ್ಲಾಕ್ ಆಗಿ ಮಳೆ ನೀರು ಸ್ಥಳೀಯ ಗದ್ದೆಗೆ ನುಗ್ಗಿ ಅಪಾರ ಕೃಷಿ ಹಾನಿಯಾದ ಬಗ್ಗೆ ವರದಿಯಾಗಿದೆ.
ಚಿಕ್ಕಪುತ್ತೂರು ಸಮೀಪ ಖಾಸಗಿ ಜಮೀನಿನಲ್ಲಿದ್ದ ತಡೆಗೋಡೆಯೊಂದು ಕುಸಿದು ತೋಡಿಗೆ ಬಿದ್ದ ಪರಿಣಾಮ ಮಳೆ ನೀರು ಹರಿಯುತ್ತಿದ್ದ ತೋಡು ಬ್ಲಾಕ್ ಆಗಿದೆ.ಇದರಿಂದಾಗಿ ಮಳೆ ನೀರು ಪಕ್ಕದ ಗದ್ದೆಗೆ ನುಗ್ಗಿ ಗದ್ದೆ ಬೇಸಾಯಕ್ಕೆ ಅಡ್ಡಿಯಾಗಿ ಕೃಷಿ ಜಲಾವೃತಗೊಂಡಿದೆ. ಸ್ಥಳೀಯರು ಮತ್ತು ಗದ್ದೆಗೆ ಸಂಬಂಧಿಸಿದವರು ತೋಡಿನಲ್ಲಿದ್ದ ಕಲ್ಲುಗಳನ್ನು ಪಕ್ಕಕ್ಕೆ ಸರಿಸಿ ಮಳೆ ನೀರು ತೋಡಿನಲ್ಲಿ ಹರಿಯಲು ವ್ಯವಸ್ಥೆ ಮಾಡಿದ್ದಾರೆ.