ಪುತ್ತೂರು: ಕೋಡಿಂಬಾಡಿಯ ಮಠಂತಬೆಟ್ಟು ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ಜು.9ರಂದು ಸಾಮೂಹಿಕ ಶ್ರೀ ಶನೈಶ್ಚರ ವೃತ ಕಲ್ಪೋಕ್ತ ಪೂಜೆ ನಡೆಯಿತು. ಗ್ರಹದೋಷ ಪರಿಹಾರಾರ್ಥವಾಗಿ ‘ಚಿನ್ಮಯೀ’ ಸಭಾಂಗಣದಲ್ಲಿ ನಡೆದ ವಿಶೇಷ ಪೂಜೆಯ ಅಂಗವಾಗಿ ಸಾಮೂಹಿಕ ಪ್ರಾರ್ಥನೆ, ಪೂಜಾ ವೃತಧಾರಿಗಳಿಗೆ ಸಂಕಲ್ಪ, ಮಹಾಪೂಜೆ, ಪ್ರಸಾದ ವಿತರಣೆ ಬಳಿಕ ಅನ್ನಸಂತರ್ಪಣೆ ಜರಗಿತು.