ಪುತ್ತೂರು:ನಗರ ಸಭಾ ವ್ಯಾಪ್ತಿಯ ಸಾಲ್ಮರದಲ್ಲಿ ಬೃಹತ್ ತೆಂಗಿನ ಮರವೊಂದು ಮನೆ ಮೇಲೆ ಬಿದ್ದು ಮನೆ ಹಾನಿಗೊಂಡಿರುವ ಘಟನೆ ಜು.10ರಂದು ನಡೆದಿದೆ. ಸಾಲ್ಮರ ನಿವಾಸಿ ಮೌರೀಸ್ ಲಸ್ರಾದೋ ಎಂಬವರ ಮನೆ ಮೇಲೆ ಬೃಹತ್ ತೆಂಗಿನ ಮರ ಬಿದಿದ್ದು ಮನೆ ಮಾಡು ಹಾಗೂ ಮಬೆಯೊಳಗಿನ ಇತರ ಸಾಮಾಗ್ರಿಗಳಿಗೆ ಹಾನಿಯಾಗಿರುವುದಾಗಿ ತಿಳಿದು ಬಂದಿದೆ. ನಗರ ಸಭಾ ಸದಸ್ಯ ಪ್ರೇಮ್ ಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.